ಆ್ಯಪ್ನಗರ

ನಿರೀಕ್ಷೆ ಮೂಡಿಸಿ ಕ್ಷಣಾರ್ಧದಲ್ಲಿ ಮಾಯವಾದ ಮಳೆ

ಜಿಲ್ಲಾ ಕೇಂದ್ರ ನಗರದಲ್ಲಿ ದಟ್ಟ ಮೋಡ ಕವಿದ ವಾತಾವರಣದಿಂದ ಭಾರಿ ನಿರೀಕ್ಷೆ ಮೂಡಿಸಿ, ದಪ್ಪ ಹನಿಯೊಂದಿಗೆ ಶುರುವಾದ ಮಳೆ ಕ್ಷಣಾರ್ಧದಲ್ಲೇ ಮಾಯವಾಯಿತು.

Vijaya Karnataka 10 Apr 2019, 5:00 am
ಚಾಮರಾಜನಗರ : ಜಿಲ್ಲಾ ಕೇಂದ್ರ ನಗರದಲ್ಲಿ ದಟ್ಟ ಮೋಡ ಕವಿದ ವಾತಾವರಣದಿಂದ ಭಾರಿ ನಿರೀಕ್ಷೆ ಮೂಡಿಸಿ, ದಪ್ಪ ಹನಿಯೊಂದಿಗೆ ಶುರುವಾದ ಮಳೆ ಕ್ಷಣಾರ್ಧದಲ್ಲೇ ಮಾಯವಾಯಿತು.
Vijaya Karnataka Web rainfall disappears shortly after expectation
ನಿರೀಕ್ಷೆ ಮೂಡಿಸಿ ಕ್ಷಣಾರ್ಧದಲ್ಲಿ ಮಾಯವಾದ ಮಳೆ


ಬುಧವಾರ ಮುಂಜಾನೆಯೇ ಭಾರಿ ಗಾಳಿ, ಮಿಂಚು ಕಂಡು ಬಂದಿದ್ದರಿಂದ ಭಾರಿ ಮಳೆ ಆಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಆಗ ಒಂದು ಹನಿ ಮಳೆಯೂ ಬಾರಲಿಲ್ಲ. ನಂತರ ಬುಧವಾರ ಸಂಜೆ ಅದೇ ರೀತಿಯ ಗಾಳಿ ಆರ್ಭಟ, ಮೋಡ ಕವಿದ ವಾತಾವರಣ ಇತ್ತು. ಅಲ್ಲದೇ ದಪ್ಪ ಹನಿಯೊಂದಿಗೆ ಮಳೆ ಶುರುವಾಯಿತು. ಆದರೆ, ಕೇವಲ ಒಂದು ನಿಮಿಷವೂ ಮಳೆ ಬೀಳದೇ ಮಾಯವಾಯಿತು. ಆ ಮೂಲಕ ನಗರದ ನಿವಾಸಿಗಳಲ್ಲಿ ನಿರಾಸೆ ಮೂಡಿಸಿತು.

ಯಳಂದೂರಿನಲ್ಲಿ ಉತ್ತಮ: ಇನ್ನು ಯಳಂದೂರು ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕೆಲಕಾಲ ಜೋರು ಮಳೆಯಾಯಿತು. ಹಲವಾರು ತಿಂಗಳಿಂದ ಮಳೆ ಇಲ್ಲದೇ ಬೇಸತ್ತಿದ್ದ ಯಳಂದೂರು ಪಟ್ಟಣದ ಜನತೆಗೆ ಮಳೆ ಕೊಂಚ ತಂಪೆರೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ