ಆ್ಯಪ್ನಗರ

ಹೆಗ್ಗವಾಡಿಯಲ್ಲಿ ಭೋರ್ಗರೆದ ಮಳೆನೀರು: ಪರದಾಡಿದ ಗ್ರಾಮಸ್ಥರು

ಸಂತೇಮರಹಳ್ಳಿ ಸಮೀಪದ ಹೆಗ್ಗವಾಡಿ ಗ್ರಾಮದಲ್ಲಿ ಭಾನುವಾರ ಸಂಜೆ ಬಿದ್ದ ಗಾಳಿ ಮಳೆಗೆ ಗ್ರಾಮದಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲದೆ ನೀರುಹರಿದ ಪರಿಣಾಮ ಗ್ರಾಮಸ್ಥರು ಪರದಾಡಬೇಕಾಯಿತು.

Vijaya Karnataka 11 Jun 2019, 5:00 am
ಸಂತೇಮರಹಳ್ಳಿ: ಸಂತೇಮರಹಳ್ಳಿ ಸಮೀಪದ ಹೆಗ್ಗವಾಡಿ ಗ್ರಾಮದಲ್ಲಿ ಭಾನುವಾರ ಸಂಜೆ ಬಿದ್ದ ಗಾಳಿ ಮಳೆಗೆ ಗ್ರಾಮದಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲದೆ ನೀರುಹರಿದ ಪರಿಣಾಮ ಗ್ರಾಮಸ್ಥರು ಪರದಾಡಬೇಕಾಯಿತು.
Vijaya Karnataka Web CHN-CHN10SMR1


ಗ್ರಾಮದಲ್ಲಿ ಭಾನುವಾರ ಸಂಜೆ ಕುದೇರು, ಯಲಕ್ಕೂರು ಗ್ರಾಮಗಳಲ್ಲಿ ಬಿದ್ದ ಜೋರು ಮಳೆಗೆ ಗ್ರಾಮದ ನಾನಾ ಬಡಾವಣೆಯ ರಸ್ತೆಗಳಲ್ಲಿ ಮಳೆನೀರು ಭೋರ್ಗರೆಯುತ್ತ ಹರಿದು ಗ್ರಾಮದ ಬಡಾವಣೆಯಲ್ಲಿರುವ ನಾನಾ ಗೊಬ್ಬಳಿ ಮರ, ತೆಂಗಿನ ಮರ ಸೇರಿದಂತೆ ನಾನಾ ಮರಗಳು ಮುರಿದು ಬಿದ್ದಿವೆ, ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ

ಸಮಸ್ಯೆಯೇನು? ಕುದೇರು ಹಾಗೂ ಯಲಕ್ಕೂರು ಗ್ರಾಮಗಳ ವ್ಯಾಪ್ತಿಗೆ ಒಳಪಡುವ ಜಮೀನುಗಳಲ್ಲಿ ಕೆಲವು ರೈತರು ಕಳೆದ ಮೂರು ನಾಲ್ಕು ವರ್ಷಗಳಿಂದ ಜಮೀನುಗಳಲ್ಲಿ ವ್ಯವಸಾಯ ಮಾಡದೇ ಇರುವ ಪರಿಣಾಮ ಜಮೀನುಗಳು ಈಗ ಸಮತಟ್ಟಾಗಿದ್ದು, ಬಯಲು ಪ್ರದೇಶದಂತಿವೆ. ಇದರಿಂದ ರೈತರು ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಕೆಲವು ನಾಲೆಗಳು ಮುಚ್ಚಿ ಹೋಗಿರುವ ಪರಿಣಾಮ ಮಳೆ ಬಿದ್ದ ವೇಳೆಯಲ್ಲಿ ಎರಡು ಗ್ರಾಮಗಳ ಜಮೀನುಗಳ ನೀರು ಗ್ರಾಮಕ್ಕೆ ನುಗ್ಗುವುದರಿಂದ ಬಡಾವಣೆಗಳಲ್ಲಿ ನದಿಯಂತೆ ಹರಿಯುತ್ತದೆ. ಗ್ರಾಮದ ಜನರು ಮಳೆ ಬಿದ್ದ ವೇಳೆಯಲ್ಲಿ ಮನೆಯಿಂದ ಹೊರಗಡೆ ಬರುವುದೇ ಕಷ್ಟವಾಗುತ್ತದೆ. ಇನ್ನು ಯಲಕ್ಕೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯಯಲ್ಲಿ ಚರಂಡಿ ಇಲ್ಲದ ಪರಿಣಾಮ ಮಳೆಯ ನೀರು ಮುಂದೆ ಹೋಗದೇ ಅಲ್ಲಿ ವಾಸಮಾಡುವ ಮನೆಗಳಿಗೆ ಮಳೆ ನೀರು ನುಗ್ಗುವ ಸ್ಥಿತಿಯಾಗಿದೆ. ಈಗಾಗಲೇ ಗ್ರಾಮದಲ್ಲಿ 2 ಬಾರೀ ಗ್ರಾಮಕ್ಕೆ ನೀರು ನುಗ್ಗಿರುವ ಪರಿಣಾಮ ಕೆಲವು ಮನೆಗಳ ಗೋಡೆಗಳು ಮಳೆ ನೀರಿನಿಂದ ಸೋರಿವಸ್ತಿ ಬೀಳುವ ಹಂತದಲ್ಲಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಮಳೆ ಬಿದ್ದ ವೇಳೆಯಲ್ಲಿ ಮಳೆಯ ನೀರು ಗ್ರಾಮಕ್ಕೆ ಹರಿದು ಬರದೇ ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ