ಆ್ಯಪ್ನಗರ

ಮೋದಿಯಂತಹವರನ್ನು ಒದ್ದೋಡಿಸಲು ಮುಸ್ಲಿಮರು ಬೀದಿಗಿಳಿಯಬೇಕು: ರಮೇಶ್‌ ಕುಮಾರ್‌

ದೇಶಕ್ಕೆ ಯಾವುದೇ ಗಂಡಾಂತರ ಇಲ್ಲದೇ ಇರುವಾಗ ಪೌರತ್ವದಂತಹ ಗಂಡಾಂತರ ತಂದಿದ್ದಾರೆ ಮೋದಿ. ದೇಶದಲ್ಲಿ ಯಾವುದೇ ಸಮಸ್ಯೆ‌ ಇರಲಿಲ್ಲ. ಈಗ ಸಿಎಎ, ಎನ್ಆರ್‌ಸಿ ಜಾರಿಗೆ ಕೇಂದ್ರ ಸರಕಾರ ತೀರ್ಮಾನಿಸಿದೆ. ಇಂಥ ಸರಕಾರದ ವಿರುದ್ಧ ಸಮರ ಸಾರಬೇಕಾಗಿದೆ

Vijaya Karnataka Web 7 Mar 2020, 4:13 pm
ಚಾಮರಾಜನಗರ: ಬ್ರಿಟಿಷರ ವಿರುದ್ದ ಹೋರಾಡಿದವರನ್ನ ಬೀದಿಯಲ್ಲಿ ನಿಲ್ಲಿಸಿದ್ದಾರೆ ಪ್ರಧಾನಮಂತ್ರಿ ನರೇಂದ್ರಮೋದಿ. ಬ್ರಿಟಿಷರ ದೌರ್ಜನ್ಯ ತಡೆಯಲು ಭಾರತ ದೇಶಕ್ಕಾಗಿ ಪ್ರಾಣತೆತ್ತವರನ್ನು ಬೀದಿಗೆ ತಂದವರು ಬಿಜೆಪಿಗರು ಎಂದು ಮಾಜಿ ಸ್ಪೀಕರ್‌ ಕೆ.ಆರ್‌. ರಮೇಶ್‌ ಕುಮಾರ್‌ ತಿಳಿಸಿದ್ದಾರೆ.
Vijaya Karnataka Web ರಮೇಶ್‌ ಕುಮಾರ್
ರಮೇಶ್‌ ಕುಮಾರ್


ಚಾಮರಾಜನಗರದಲ್ಲಿ ನಡೆದ ಸಿಎಎ, ಎನ್‌ಪಿಆರ್ ಹಾಗೂ ಎನ್ಆರ್‌ಸಿ ವಿರೋಧಿಸಿ ನಡೆದ ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಭಾಷಣ ಮಾಡಿದರು.

ಈ ದೇಶದಿಂದ ಬ್ರಿಟಿಷರನ್ನು ಒದ್ದೋಡಿಸಲು ಮುಸ್ಲಿಮರು ಬೀದಿಗಿಳಿದರು. ಈಗ ನಮ್ಮ ದೇಶದಲ್ಲಿ ಮೋದಿಯಂತವರನ್ನು ಒದ್ದೋಡಿಸಲು ಮುಸ್ಲಿಮರು ಬೀದಿಗಿಳಿಯಬೇಕಿದೆ ಎಂದು ತಿಳಿಸಿದರು.

ದೇಶಕ್ಕೆ ಯಾವುದೇ ಗಂಡಾಂತರ ಇಲ್ಲದೇ ಇರುವಾಗ ಪೌರತ್ವದಂತಹ ಗಂಡಾಂತರ ತಂದಿದ್ದಾರೆ ಮೋದಿ. ದೇಶದಲ್ಲಿ ಯಾವುದೇ ಸಮಸ್ಯೆ‌ ಇರಲಿಲ್ಲ. ಈಗ ಸಿಎಎ, ಎನ್ಆರ್‌ಸಿ ಜಾರಿಗೆ ಕೇಂದ್ರ ಸರಕಾರ ತೀರ್ಮಾನಿಸಿದೆ. ಇಂಥ ಸರಕಾರದ ವಿರುದ್ಧ ಸಮರ ಸಾರಬೇಕಾಗಿದೆ ಎಂದು ರಮೇಶ್‌ ಕುಮಾರ್ ತಿಳಿಸಿದರು.

ಬ್ರಿಟಿಷರಂತೆ ಗಾಂಧೀಜಿಯನ್ನು ಹೀಯಾಳಿಸುತ್ತಿದ್ದಾರೆ ಅನಂತಕುಮಾರ್ ಹೆಗಡೆ, ಬಸವನಗೌಡ ಯತ್ನಾಳ್. ತ್ರಿವಳಿ ತಲಾಕ್, 370, ನೋಟ್ ಬ್ಯಾನ್ ಕಾಯಿದೆ ತಂದರೂ ಮುಸ್ಲಿಮರು ಪ್ರತಿಭಟಿಸಲಿಲ್ಲ. ಈಗ ಸಿಎಎ ಹಾಗೂ ಎನ್‌ಆರ್‌ಸಿ ಜಾರಿಗೆ ಮುಸ್ಲಿಮರು ಪ್ರತಿಭಟನೆ ನಡೆಸಬೇಕಾಯ್ತು. ನಾವೆಲ್ಲ ಒಟ್ಟಾಗಿ ಇರೋಣ. ಸಾಯಬೇಕಾದ್ರೆ ಒಟ್ಟಿಗೆ ಸಾಯೋಣ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ