ಆ್ಯಪ್ನಗರ

ಬೆಲವತ್ತ ಅರಣ್ಯದಲ್ಲಿ ತೇಗದಮರ ಕಡಿತ: ಡಿಎಫ್‌ಆರ್‌ಒ ಅಮಾನತು

ಬಿಳಿಗಿರಿರಂಗನಾಥಸ್ವಾಮಿ ವನ್ಯಧಾಮ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ತಾಲೂಕಿನ ಬೆಲವತ್ತ ಗಸ್ತಿನ ಅರಣ್ಯ ಪ್ರದೇಶದಲ್ಲಿಅಕ್ರಮವಾಗಿ ತೇಗದ ಮರಗಳನ್ನು ಕಡಿತಲೆ ಮಾಡಿರುವ ಆರೋಪದ ಮೇಲೆ ಕೆ.ಗುಡಿ ವನ್ಯಜೀವಿ ವಲಯದ ಉಪ ವಲಯ ಅರಣ್ಯಾಧಿಕಾರಿ ಜಿ.ಎಂ.ಭಾನುಪ್ರಕಾಶ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

Vijaya Karnataka 17 Sep 2019, 5:00 am
ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ವನ್ಯಧಾಮ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ತಾಲೂಕಿನ ಬೆಲವತ್ತ ಗಸ್ತಿನ ಅರಣ್ಯ ಪ್ರದೇಶದಲ್ಲಿಅಕ್ರಮವಾಗಿ ತೇಗದ ಮರಗಳನ್ನು ಕಡಿತಲೆ ಮಾಡಿರುವ ಆರೋಪದ ಮೇಲೆ ಕೆ.ಗುಡಿ ವನ್ಯಜೀವಿ ವಲಯದ ಉಪ ವಲಯ ಅರಣ್ಯಾಧಿಕಾರಿ ಜಿ.ಎಂ.ಭಾನುಪ್ರಕಾಶ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Vijaya Karnataka Web reduction in speeding forest dfro suspension
ಬೆಲವತ್ತ ಅರಣ್ಯದಲ್ಲಿ ತೇಗದಮರ ಕಡಿತ: ಡಿಎಫ್‌ಆರ್‌ಒ ಅಮಾನತು


ಭಾನುಪ್ರಕಾಶ್‌ ಅವರು 12 ತೇಗದ ಮರಗಳನ್ನು ಕಡಿತಲೆ ಮಾಡಿರುವ ಪ್ರಕರಣದಲ್ಲಿನೇರವಾಗಿ ಭಾಗಿಯಾಗಿರುವುದು ಹಾಗೂ ಅವರ ಸ್ನೇಹಿತರೊಡನೆ ಅರಣ್ಯದಲ್ಲಿರಾತ್ರಿವೇಳೆ ಸುತ್ತಾಡಿ, ಕ್ಯಾಂಪಿನಲ್ಲಿಮದ್ಯಪಾನ ಮತ್ತು ಮಾಂಸಾಹಾರ ಸೇವನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ವಿಚಾರಣೆಯನ್ನು ಬಾಕಿ ಇರಿಸಿ ಅಮಾನತುಪಡಿಸಲಾಗಿದೆ ಎಂದು ಚಾಮರಾಜನಗರ ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ತಮ್ಮ ಆದೇಶದಲ್ಲಿತಿಳಿಸಿದ್ದಾರೆ.

ಪ್ರಕರಣ ಕುರಿತು 'ವಿಜಯ ಕರ್ನಾಟಕ' ಆ.13ರ ಸಂಚಿಕೆಯಲ್ಲಿ'ತೇಗದ ಮರಗಳ ಖದೀಮರಾರ‍ಯರು' ಶೀರ್ಷಿಕೆಯಡಿ ಸುದ್ದಿಯನ್ನು ಪ್ರಕಟಿಸಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ