ಆ್ಯಪ್ನಗರ

ಈಜಲು ತೆರಳಿದ ಸಂಬಂಧಿಗಳಿಬ್ಬರು ಕಣ್ಮರೆ

ತಾಲೂಕಿನ ಹುತ್ತೂರು ಕೆರೆಯಲ್ಲಿ ಈಜಲು ನೀರಿಗಿಳಿದಿದ್ದ ಸಂಬಂಧಿಗಳಿಬ್ಬರು ನಾಪತ್ತೆಯಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

Vijaya Karnataka 6 May 2019, 5:00 am
ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ತಾಲೂಕಿನ ಹುತ್ತೂರು ಕೆರೆಯಲ್ಲಿ ಈಜಲು ನೀರಿಗಿಳಿದಿದ್ದ ಸಂಬಂಧಿಗಳಿಬ್ಬರು ನಾಪತ್ತೆಯಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
Vijaya Karnataka Web relatives who went to swim have disappeared
ಈಜಲು ತೆರಳಿದ ಸಂಬಂಧಿಗಳಿಬ್ಬರು ಕಣ್ಮರೆ


ತಮಿಳುನಾಡಿನ ತಿರುಪ್ಪೂರು ಮೂಲದ ಹಾಲಿ ತೆರಕಣಾಂಬಿ ಎಪಿಎಂಸಿ ಹಿಂಭಾಗದ ನೀರಾವರಿ ಜಮೀನು ಗುತ್ತಿಗೆ ಮಾಡಿಕೊಂಡಿದ್ದ ನಂದೀಶ(26) ಮತ್ತು ತಮಿಳ್‌(29) ನಾಪತ್ತೆಯಾದವರು.

ತಮಿಳ್‌ ಅವರು ನಂದೀಶ್‌ರ ತಂಗಿ ಗಂಡನಾಗಿದ್ದು, ತಮ್ಮ ಇನ್ನಿಬ್ಬರು ಸ್ನೇಹಿತರೊಂದಿಗೆ ಹುತ್ತೂರು ಕೆರೆಗೆ ಈಜಾಡಲು ತೆರಳಿದ್ದರು. ಈ ಸಂದರ್ಭದಲ್ಲಿ ತಮಿಳ್‌ ಎಂಬುವವರು ನೀರಿಗಿಳಿದಿದ್ದು, ಆಯತಪ್ಪಿ ನೀರಿನಲ್ಲಿ ಮುಳುಗುತ್ತಿದ್ದಾಗ ರಕ್ಷ ಣೆಗೆ ಮುಂದಾದ ನಂದೀಶ್‌ ಸಹ ಮುಳುಗಿದ್ದಾರೆ ಎನ್ನಲಾಗಿದೆ.

ತೆರಕಣಾಂಬಿ ಠಾಣೆ ಪಿಎಸ್‌ಐ ನಂಜುಂಡಸ್ವಾಮಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಆಗಮಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿಗಳು ಪತ್ತೆ ಕಾರ್ಯ ಕೈಗೊಂಡರು. ಆದರೆ ಕತ್ತಲಾದ ಕಾರಣ ಕಾರ್ಯಾಚರಣೆ ಕೈಬಿಡಲಾಗಿದ್ದು, ಸೋಮವಾರ ಮತ್ತೆ ಮುಂದುವರಿಸಲಾಗುವುದು,'' ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ