ಆ್ಯಪ್ನಗರ

ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಜನಪ್ರತಿನಿಧಿಗಳ ಗೈರು

ತಹಸೀಲ್ದಾರ್‌ ಹಾಗೂ ತಾಲೂಕಿನ ಜನಪ್ರತಿನಿಧಿಗಳ ಮುಸುಕಿನ ಗುದ್ದಾಟ ಮುಂದುವರಿದಿದ್ದು, ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ಚರ್ಚಿಸಲು ಶುಕ್ರವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಗೂ ಹಾಜರಾಗದೇ ಚುನಾಯಿತ ಪ್ರತಿನಿಧಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Vijaya Karnataka 26 Oct 2019, 5:00 am
ಯಳಂದೂರು: ತಹಸೀಲ್ದಾರ್‌ ಹಾಗೂ ತಾಲೂಕಿನ ಜನಪ್ರತಿನಿಧಿಗಳ ಮುಸುಕಿನ ಗುದ್ದಾಟ ಮುಂದುವರಿದಿದ್ದು, ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ಚರ್ಚಿಸಲು ಶುಕ್ರವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಗೂ ಹಾಜರಾಗದೇ ಚುನಾಯಿತ ಪ್ರತಿನಿಧಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Vijaya Karnataka Web representatives absent for pre rajya sabha meeting
ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಜನಪ್ರತಿನಿಧಿಗಳ ಗೈರು


ತಾಲೂಕಿನ ಕೆಲ ಜನಪ್ರತಿನಿಧಿಗಳು ಆರಂಭದಿಂದಲೂ ತಹಸೀಲ್ದಾರ್‌ ವರ್ಷಾ ಅವರು ತಮ್ಮನ್ನು ಯಾವುದೇ ಸಭೆಗೆ ಆಹ್ವಾನಿಸಲ್ಲ. ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲಎಂಬ ಕಾರಣಕ್ಕೆ ತಹಸೀಲ್ದಾರ್‌ ಅವರೊಡನೆ ಮುಸುಕಿನ ಗುದ್ದಾಟ ಮುಂದುವರಿಸಿದ್ದಾರೆ.

ಹೀಗಾಗಿ ತಹಸೀಲ್ದಾರ್‌ ಅವರು ಈ ಬಾರಿ ಜನಪ್ರತಿನಿಧಿಗಳನ್ನು ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಆಹ್ವಾನಿಸಿದ್ದರು. ಆರಂಭದಲ್ಲಿ ಮಧ್ಯಾಹ್ನ 3ಕ್ಕೆ ನಡೆಯಲಿದೆ ಎಂದಿದ್ದ ಸಭೆ ಏಕಾಏಕಿ ಮಧ್ಯಾಹ್ನ 1ಕ್ಕೇ ನಿಗದಿಯಾಯಿತು.

ಕನ್ನಡ ರಾಜ್ಯೋತ್ಸವ ಸಂಬಂಧದ ಪೂರ್ವಭಾವಿ ಸಭೆಯಾದ್ದರಿಂದ ಚುನಾಯಿತ ಪ್ರತಿನಿಧಿಗಳು ಬರುತ್ತಾರೆ ಎಂಬ ನಂಬಿಕೆ ಅಧಿಕಾರಿಗಳಲ್ಲಿಇತ್ತು.

ಆದರೆ, ತಹಸೀಲ್ದಾರ್‌ ವರ್ಷಾ ಅವರೊಡನೆ ಶೀತಲಸಮರಕ್ಕೆ ಇಳಿದಿರುವ ಜನಪ್ರತಿನಿಧಿಗಳು ತಮ್ಮ ಪಟ್ಟು ಸಡಿಸಲಿಲ್ಲ. ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಗೂ ಹಾಜರಾಗದೇ ಆ ಮುನಿಸು ಪ್ರದರ್ಶಿಸಿದರು.

ಹಾಗಂತ ಸಭೆಯೇನು ಮುಂದಕ್ಕೆ ಹೋಗಲಿಲ್ಲ. ಸ್ವಲ್ಪ ಕಾದ ತಹಸೀಲ್ದಾರರು, ; ಸ್ಥಳೀಯ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಜರಿದ್ದ ಹಿನ್ನೆಲೆಯಲ್ಲಿಸಭೆ ಆರಂಭಿಸಿದರು.

ಅಂತೂ ರಾಷ್ಟ್ರೀಯ, ನಾಡ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರೂ ಆಗಿರುವ ತಹಸೀಲ್ದಾರ್‌ ಅಧ್ಯಕ್ಷತೆಯಲ್ಲಿಅಂತೂ ಶುರುವಾಯಿತು.

ವಿಶ್ವಾಸಕ್ಕೆ ತೆಗೆದುಕೊಳ್ಳಿ: ಸಭೆಯಲ್ಲಿಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಮದ್ದೂರು ವಿರೂಪಾಕ್ಷ, ;ಸ್ಥಳೀಯ ಜನಪ್ರತಿನಿಧಿಗಳು ಸಭೆಗೆ ಗೈರಾಗಿದ್ದಾರೆ. ಮತ್ತೊಮ್ಮೆ ಅವರನ್ನು ವಿಶ್ವಾಸಕ್ಕೆ ತೆಗೆದುಕೂಂಡು ಸಭೆ ನಡೆಸಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆಗೊಳ್ಳುವಂತೆ ಮಾಡಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್‌, ; ಸಭೆ ಕುರಿತು ನೋಟಿಸ್‌ ಕಳುಹಿಸಿರುವುದಲ್ಲದೇ ಬೆಳಗ್ಗೆಯಿಂದ ಎಲ್ಲರಿಗೂ ದೂರವಾಣಿ ಕರೆ ಮಾಡಿಯೂ ತಿಳಿಸಲಾಗಿದೆ. ಆದರೂ ಬಂದಿಲ್ಲಎಂದು ತಿಳಿಸಿದರು.

ನಂತರ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಮಾಜಿ ಧರ್ಮದರ್ಶಿ ದೊರೆಸ್ವಾಮಿ ಮಾತನಾಡಿ, ಜನಪ್ರತಿನಿಧಿಗಳು ಯಾವುದೇ ವಿಚಾರ ಇದ್ದರೂ ಸಭೆಗೆ ಬಂದು ಆರೋಗ್ಯಕರವಾದ ಚರ್ಚೆ ನಡೆಸಿಸಬೇಕು. ಆ ಮಾತ್ರ ಎಲ್ಲಾಸಮಸ್ಯೆಗಳಿಗೆ ಉತ್ತರ ಸಿಗುತ್ತಿತ್ತು. ಆದರೆ ನಮ್ಮ ನಾಡಹಬ್ಬ ಜನಪ್ರತಿನಿಧಿಗಳು ಯಾವುದೋ ಒಂದು ವಿಚಾರ ಇಟ್ಟುಕೂಂಡು ಗೈರಾಗಿರುವುದು ಶೋಭೆ ತರುವುದಿಲ್ಲಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ನಡುವೆ ಹಾಜರಿದ್ದ ಅಧಿಕಾರಿಗಳಿಗೆ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ನಡೆಸಬೇಕು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕಲಾಮೇಳಗಳ ಮೆರವಣಿಗೆ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಹಸೀಲ್ದಾರ್‌ ಸೂಚಿಸಿದರು.

ಸಭೆಯಲ್ಲಿಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಮೇಘಾ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು, ತಾ.ಪಂ. ಕಚೇರಿ ವ್ಯವಸ್ಥಾಪಕ ಶಿವಕುಮಾರ್‌, ಪಂಚಾಯತ್‌ ರಾಜ್‌ ಉಪವಿಭಾಗದ ಎಂಜಿನಿಯರ್‌ ರಾಜು, ಸುಧನ್ವನಾಗ್‌, ನಂಜಯ್ಯ, ರುದ್ರಯ್ಯ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕನಕದಾಸ, ಮೀನುಗಾರಿಕೆ ಇಲಾಖೆ ಅಧಿಕಾರಿ ನಟರಾಜು, ಎಸ್ಸಿ ಎಸ್ಟಿ ಹಿತಾರಕ್ಷಣಾ ಸಮಿತಿ ಸದಸ್ಯ ರಘುನಾಯಕ್‌ ಸೇರಿದಂತೆ ಎಲ್ಲಾಇಲಾಖೆ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ