ಆ್ಯಪ್ನಗರ

ಪಿಎಚ್‌ಸಿಯಲ್ಲಿ ಕನಿಷ್ಠ 3 ತಜ್ಞ ವೈದ್ಯರ ನೇಮಕಕ್ಕೆ ಆಗ್ರಹ

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಇಸಿಜಿ, ಡಯಾಲಿಸಿಸ್‌ ಸ್ಕಾತ್ರ್ಯನಿಂಗ್‌ ಯಂತ್ರ ಅಳವಡಿಸಲಾಗಿದ್ದು, ತಜ್ಞ ವೈದ್ಯರಿಲ್ಲದೇ ಅವು ತುಕ್ಕು ಹಿಡಿಯುತ್ತಿವೆ. ಹಾಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕನಿಷ್ಠ ಮೂವರು ತಜ್ಞ ವೈದ್ಯರ ನೇಮಕ ಮಾಡಬೇಕು ಎಂದು ವೈದ್ಯಕೀಯ ಸಂಘದ ರಾಜ್ಯ ಸಮ್ಮೇಳನದಲ್ಲಿಒತ್ತಾಯಿಸಲಾಯಿತು.

Vijaya Karnataka 21 Oct 2019, 5:00 am
ಚಾಮರಾಜನಗರ: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಇಸಿಜಿ, ಡಯಾಲಿಸಿಸ್‌ ಸ್ಕಾತ್ರ್ಯನಿಂಗ್‌ ಯಂತ್ರ ಅಳವಡಿಸಲಾಗಿದ್ದು, ತಜ್ಞ ವೈದ್ಯರಿಲ್ಲದೇ ಅವು ತುಕ್ಕು ಹಿಡಿಯುತ್ತಿವೆ. ಹಾಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕನಿಷ್ಠ ಮೂವರು ತಜ್ಞ ವೈದ್ಯರ ನೇಮಕ ಮಾಡಬೇಕು ಎಂದು ವೈದ್ಯಕೀಯ ಸಂಘದ ರಾಜ್ಯ ಸಮ್ಮೇಳನದಲ್ಲಿಒತ್ತಾಯಿಸಲಾಯಿತು.
Vijaya Karnataka Web request for appointment specialist doctors at phc
ಪಿಎಚ್‌ಸಿಯಲ್ಲಿ ಕನಿಷ್ಠ 3 ತಜ್ಞ ವೈದ್ಯರ ನೇಮಕಕ್ಕೆ ಆಗ್ರಹ


ತಾಲೂಕಿನ ಯಡಪುರ ಸಮೀಪದ ಸರಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿಮೂರು ದಿನಗಳ ಕಾಲ ನಡೆದ ಮೆಡಿಕಾನ್‌-85 ರಾಜ್ಯಮಟ್ಟದ ವಾರ್ಷಿಕ ಸಮ್ಮೇಳನದಲ್ಲಿವೈದ್ಯ ವಿದ್ವಾಂಸರಿಂದ ಚರ್ಚಾಗೋಷ್ಠಿ, ಐಎಂಎ ನಡೆ 'ಶಾಲೆ ಹಳ್ಳಿ, ಸೈನಿಕರ ಕಡೆ, ಗ್ರಾಮಾಂತರ ಪ್ರದೇಶದಲ್ಲಿನಿಸ್ವಾರ್ಥವಾಗಿ ದುಡಿಯುವ ವೈದ್ಯರಿಗೆ ಸಂಪೂರ್ಣ ರಕ್ಷಣೆ ನೀಡಬೇಕು, ನಕಲಿ ವೈದ್ಯರ ಹಾವಳಿ ತಡೆಯುವ ನಿಟ್ಟಿನಲ್ಲಿಐಪಿಸಿಯಲ್ಲಿಶಿಕ್ಷೆ ಕೊಡುವುದನ್ನು ಅಡಕಗೊಳಿಸಬೇಕು, ಗ್ರಾಹಕ ಕಾನೂನಿನಲ್ಲಿಯದ್ವತದ್ವಾ ಪರಿಹಾರದ ಆದೇಶಗಳಿಗೆ ಮಿತಿ ಹೇರಬೇಕು ಎಂಬುದು ಸೇರಿದಂತೆ ನಾನಾ ವಿಚಾರಗಳ ಕುರಿತು ಚರ್ಚೆ ನಡೆಯಿತು.

ಐಎಂಎ ರಾಜ್ಯಾಧ್ಯಕ್ಷ ಡಾ.ಅನ್ನದಾನಿ ಮೇಟಿ ಮಾತನಾಡಿ, ''ಮೈಸೂರು ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯಾಗಿ ವಿಭಜನೆಗೊಂಡ ಮೇಲೆ 85 ಸದಸ್ಯ ಬಲದ ಭಾರತೀಯ ವೈದ್ಯಕೀಯ ಸಂಘದ ರಾಜ್ಯಮಟ್ಟದ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ನಮ್ಮದು 30 ರಾಜ್ಯಗಳ 989 ಜಿಲ್ಲೆಗಳ 1765 ಶಾಖೆಗಳ ಪದಾಧಿಕಾರಿಗಳನ್ನು ಹೊಂದಿರುವ ದೊಡ್ಡ ಸಂಘ,'' ಎಂದು ಹೇಳಿದರು.

ಐಎಂಎ ರಾಜ್ಯಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಿದ ಜಿಲ್ಲಾಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಮಾತನಾಡಿ, ''ಪ್ರಸ್ತುತ ಸಂದರ್ಭದಲ್ಲಿವೈದ್ಯ ಕ್ಷೇತ್ರ ಸಾಕಷ್ಟು ಆವಿಷ್ಕಾರಗಳನ್ನು ಮಾಡಿದೆ. ಆದರೆ ಅದಕ್ಕೆ ತಕ್ಕಂತೆ ನಾನಾ ಸವಾಲುಗಳನ್ನು ಸಹ ಎದುರಿಸುತ್ತಿದೆ. ರಾಜ್ಯದ ವೈದ್ಯ ಸಮೂಹದಲ್ಲಿಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಇಂತಹ ಸಮ್ಮೇಳನಗಳು ಹೆಚ್ಚಿನ ಮಟ್ಟದಲ್ಲಿನಡೆಯುವಂತಾಗಬೇಕು,'' ಎಂದು ಅಭಿಪ್ರಾಯಪಟ್ಟರು.

ಸಂಸದ ವಿ.ಶ್ರೀನಿವಾಸ್‌ಪ್ರಸಾದ್‌, ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಸರಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಡಾ.ರಾಜೇಂದ್ರ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ರಘುರಾಂ ಸರ್ವೇಗಾರ್‌, ಐಎಂಎ ಜಿಲ್ಲಾಧ್ಯಕ್ಷ ಡಾ.ಬಸವರಾಜೇಂದ್ರ, ಸಂಘಟನಾ ಕಾರ್ಯದರ್ಶಿ ಡಾ.ಮಹೇಶ್‌, ಜಂಟಿ ಸಂಘಟನಾ ಕಾರ್ಯದರ್ಶಿ ಡಾ.ಆರ್‌.ಎಸ್‌.ನಾಗಾರ್ಜುನ್‌ ಸೇರಿದಂತೆ ರಾಜ್ಯ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ