ಆ್ಯಪ್ನಗರ

ದಾಖಲೆ ಇಲ್ಲದ 1.34 ಲಕ್ಷ ರೂ. ವಶ

ಪಟ್ಟಣದ ವೀರಯೋಧ ಶಿವಾನಂದ ವೃತ್ತದ ಬಳಿ ಮುಸ್ಲಿಂ ಸ್ಮಶಾನದ ಬಳಿ ದಾಖಲೆ ಇಲ್ಲದ ಕೊಂಡೊಯ್ಯುತ್ತಿದ್ದ 1,34,500 ರೂ.ಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Vijaya Karnataka 12 Apr 2019, 5:00 am
ಗುಂಡ್ಲುಪೇಟೆ : ಪಟ್ಟಣದ ವೀರಯೋಧ ಶಿವಾನಂದ ವೃತ್ತದ ಬಳಿ ಮುಸ್ಲಿಂ ಸ್ಮಶಾನದ ಬಳಿ ದಾಖಲೆ ಇಲ್ಲದ ಕೊಂಡೊಯ್ಯುತ್ತಿದ್ದ 1,34,500 ರೂ.ಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆ ಕರ್ತವ್ಯದಲ್ಲಿದ್ದ ಸಂದರ್ಭ ವೀರಯೋಧ ಶಿವಾನಂದ ವೃತ್ತದ ಬಳಿ ವ್ಯಕ್ತಿ ಬೈಕ್‌ನಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದರು. ಸದರಿ ವ್ಯಕ್ತಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಹಣ ಪತ್ತೆಯಾಯಿತು. ವಿಚಾರಣೆ ನಡೆಸಿದಾಗ ಸದರಿ ವ್ಯಕ್ತಿಯ ಹೆಸರು ಕಲೀಂಪಾಷ(60) ಎಂದು ತಿಳಿಸಿರುತ್ತಾರೆ. ಇವರ ಬಳಿ ದಾಖಲೆ ಇಲ್ಲದೇ 1,34,500 ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಈ ಬಗ್ಗೆ ಗುಂಡ್ಲುಪೇಟೆ ಪೊಲೀಸ್‌ ಠಾಣೆಗೆ ಪ್ಲೇಯಿಂಗ್‌ ಸ್ಕ್ವಾಡ್‌ ಕೃಷ್ಣಪ್ಪ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಎಸ್‌ಐ ಸ್ವಾಮಿ, ಕಾನ್ಸ್‌ಸ್ಟೆಬಲ್‌ ರವಿಕುಮಾರ್‌ ಪಾಲ್ಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Vijaya Karnataka Web rs 1 34 lakh without document capture
ದಾಖಲೆ ಇಲ್ಲದ 1.34 ಲಕ್ಷ ರೂ. ವಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ