ಆ್ಯಪ್ನಗರ

ಅ.4ರಂದು ಗ್ರಾಮೀಣ ದಸರಾ

ಎಲ್ಲಾಸಂಘ ಸಂಸ್ಥೆಗಳು ಮತ್ತು ಇಲಾಖೆಗಳ ಸಹಯೋಗದೊಂದಿW ಈ ಬಾರಿಯ ಗ್ರಾಮೀಣ ದಸರಾವನ್ನು ಪಟ್ಟಣದಲ್ಲಿಎಂ.ಜಿ.ಎಸ್‌.ವಿ ಮೈದಾನದಲ್ಲಿಅ.4ರಂದು ವಿಜೃಂಭಣೆಯಿಂದ ಆಚರಿಸಲು ತೀಮಾ¿ರ್‍ನಿಸಲಾಗಿದೆ.

Vijaya Karnataka 22 Sep 2019, 5:00 am
ಕೊಳ್ಳೇಗಾಲ: ಎಲ್ಲಾಸಂಘ ಸಂಸ್ಥೆಗಳು ಮತ್ತು ಇಲಾಖೆಗಳ ಸಹಯೋಗದೊಂದಿW ಈ ಬಾರಿಯ ಗ್ರಾಮೀಣ ದಸರಾವನ್ನು ಪಟ್ಟಣದಲ್ಲಿಎಂ.ಜಿ.ಎಸ್‌.ವಿ ಮೈದಾನದಲ್ಲಿಅ.4ರಂದು ವಿಜೃಂಭಣೆಯಿಂದ ಆಚರಿಸಲು ತೀಮಾ¿ರ್‍ನಿಸಲಾಗಿದೆ.
Vijaya Karnataka Web rural dasara
ಅ.4ರಂದು ಗ್ರಾಮೀಣ ದಸರಾ


ತಾಲೂಕು ಪಂಚಾಯಿತಿ ಸಭಾಂಗಣದಲ್ಲಿತಾಲೂಕು ಆಡಳಿತ ಗ್ರಾಮೀಣ ದಸರಾ ಆಚರಣೆ ಹಿನ್ನೆಲೆಯಲ್ಲಿನಡೆದ ಸಭೆಯಲ್ಲಿತೀರ್ಮಾನ ಪ್ರಕಟಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ನ್ಯಾಷನಲ್‌ ಶಾಲೆಯಿಂದ ಬೆಳಗ್ಗೆ ಮೆರವಣಿಗೆ ಹೊರಟು ಪ್ರಮುಖ ರಸ್ತೆಗಳಲ್ಲಿಸ್ಥಳೀಯ ಕಲಾತಂಡಗಳ ಹಾಗೂ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಒಳಗೊಂಡು ಮೆರವಣಿಗೆ ಹೊರಟು ಎಂ.ಜಿ.ಎಸ್‌.ವಿ ಮೈದಾನದವರೆಗೆ ಸೇರುವುದು. ನಂತರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಸಭೆಯಲ್ಲಿತೀರ್ಮಾನಿಸಿದರು.

ಗ್ರಾಮೀಣ ದಸರಾ ನಿಮಿತ್ತ ಪಟ್ಟಣದ ಪ್ರಮುಖ ಸ್ಥಳಗಳಲ್ಲಿಉಸ್ತುವರಿ ಸಚಿವರು ಮತ್ತು ಜಿಲ್ಲೆಯ ಎಲ್ಲಾಶಾಸಕರ ಭಾವಚಿತ್ರಗಳು ಒಳಗೊಂಡತೆ ಜಾಹೀರಾತು ಫಲಕಗಳನ್ನು ಹಾಕಿ ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡುವಂತೆ ಶಾಸಕ ಎನ್‌.ಮಹೇಶ್‌ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.

ಅಲ್ಲದೇ ಸಭೆಗೆ ಗೈರಾದ ಅಧಿಕಾರಿಗಳಿಗೆ ಸೂಕ್ತ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಲು ತಹಸೀಲ್ದಾರ್‌ ಅವರಿಗೆ ಸಭೆಯಲ್ಲಿಸೂಚಿಸಿದರು.

ಪಟ್ಟಣದ ಉದ್ಯಮಿಗಳು ಸಭೆ ನಡೆಸಿ ಅ.3ರಿಂದ 5ರ ಸಂಜೆರವರೆಗೆ ಪಟ್ಟಣದ ಎಲ್ಲಾಪ್ರಮುಖ ರಸ್ತೆಗಳ ಕಟ್ಟಡಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡುವಂತೆ ಸೂಚನೆ ನೀಡಬೇಕು. ಎಲ್ಲಾಸರಕಾರಿ ಕಚೇರಿಗಳಿಗೆ ದೀಪಾಲಂಕಾರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲು ಸಭೆಯಲ್ಲಿನಿರ್ಧರಿಸಲಾಯಿತು.

ಎಲ್ಲಾಅಂಗವಾಡಿ ಕಾರ್ಯಕರ್ತರು ಮತ್ತು ಸ್ತ್ರೀಶಕ್ತಿ ಮಹಿಳಾ ಸಂಘದ ಸದಸ್ಯರು, ಸ್ಥಳೀಯ ಶಾಲಾ ಮಕ್ಕಳು ಹಾಗೂ ಸ್ಕೌಟ್ಸ್‌ ಅಂಡ್‌ ಗೈಡ್ಸ್‌, ಎನ್‌ಸಿಸಿ ಮಕ್ಕಳು ಮೆರವಣಿಗೆಯಲ್ಲಿಭಾಗವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಲು ಸಭೆ ಸೂಚಿಸಿತು.

ಪಥಸಂಚಲನದಲ್ಲಿಪೊಲೀಸ್‌ ಇಲಾಖೆಯ ಒಂದು ತುಕಡಿ ಮತ್ತು ಪೊಲೀಸ್‌ ಬ್ಯಾಂಡ್‌ ತಂಡ ಭಾಗವಹಿಸುವಂತೆ ಪೊಲೀಸ್‌ ಅಧಿಕಾರಿಗಳು ಮಾಡಬೇಕು ಎಂದು ಸಭೆಯಲ್ಲಿಸಭೆ ಸೂಚಿಸಿತು.

ಹನೂರು ಭಾಗÜದ 34 ಪಂಚಾಯಿತಿಗಳಿಂದ ಸರಕಾರಿ ಕಾರ್ಯಕ್ರಮಗಳು ಹಾಗೂ ಪಂಚಾಯಿತಿ ಕಾರ್ಯಕ್ರಮಗಳನ್ನೊಳಗೊಂಡ ಸ್ತಬ್ಧ ಚಿತ್ರಗಳು ಮತ್ತು ಕಲಾತಂಡಗಳು ಭಾಗವಹಿಸುವಂತೆ ಮಾಡಬೇಕು, ಹನೂರು ಶಾಸಕ ಆರ್‌.ನರೇಂದ್ರ ಅವರು ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಚಂದ್ರ ಅವರಿಗೆ ಸೂಚಿಸಿದರು. ಅಲ್ಲದೇ ಪ್ರತಿ ಇಲಾಖೆಯಿಂದ ಒಂದು ಸ್ತಬ್ಧಚಿತ್ರ ಮೆರವಣಿಗೆಯಲ್ಲಿಭಾಗವಹಿಸುವಂತೆ ಇಲಾಖಾ ಮುಖ್ಯಸ್ಥರಿಗೆ ಸೂಚಿಸಿದರು.

ಇದೇ ರೀತಿ ಅ. 5ರಂದು ಹನೂರು ಪಟ್ಟಣದ ಆರ್‌.ಎಂ.ಸಿ ಯಿಂದ ಮೆರವಣಿಗೆ ಹೊರಟು ಬಂಡಳ್ಳಿ ರಸ್ತೆ ಮೂಲಕ ಸಾಗಿ ಹೊರವಲಯದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿಗ್ರಾಮೀಣ ದಸರಾದ ವೇದಿಕೆ ಕಾರ್ಯಕ್ರಮವನ್ನು ನಡೆಸುವಂತೆ ಹನೂರು ತಹಸೀಲ್ದಾರ್‌ ನಾಗರಾಜು ಅವರಿಗೆ ಸೂಚನೆ ನೀಡಿದರು.

ಗ್ರಾಮೀಣ ದಸರಾ ಆಚರಣೆ ಮಾಡುವುದರಿಂದ ಮೆರವಣಿಗೆಯ ಕೊನೆಯಲ್ಲಿನಮ್ಮ ಭಾಗದ ಆರಾಧ್ಯ ದೈವ ಮಲೆ ಮಹದೇಶ್ವರ ಭಾವಚಿತ್ರದ ಇರುವ ಸ್ತಬ್ಧಚಿತ್ರ ಹಾಗೂ ಚಾಮುಂಡೇಶ್ವರಿ ತಾಯಿಯ ಸ್ತಬ್ಧಚಿತ್ರಗಳು ಮೆರವಣಿಗೆ ಬರುವಂತೆ ಮಾಡಬೇಕು ಎಂದು ಶಾಸಕರಾದ ಎನ್‌, ಮಹೇಶ್‌ ಮತ್ತು ಆರ್‌.ನರೇಂದ್ರ ಸೂಚಿಸಿದರು.

ಸಭೆಯಲ್ಲಿಜಿ.ಪಂ ಅಧ್ಯಕ್ಷೆ ಶಿವಮ್ಮ ಕೃಷ್ಣ, ಸದಸ್ಯೆ ಲೇಖಾರವೀಂದ್ರ, ತಾ.ಪಂ ಅಧ್ಯಕ್ಷ ರಾಜೇಂದ್ರ, ಉಪಾಧ್ಯಕ್ಷೆ ಲತಾರಾಜಣ್ಣ, ಸದಸ್ಯ ಜವಾದ್‌ ಅಹಮದ್‌, ತಹಶೀಲ್ದಾರ್‌ಗಳಾದ ಕುನಾಲ್‌, ನಾಗರಾಜು, ತಾ.ಪಂ ಇಒ ಚಂದ್ರ, ಬಿಇಒ ಚಂದ್ರಪಾಟೀಲ್‌, ವೃತ್ತ ನೀರಿಕ್ಷಕ ಶ್ರೀಕಾಂತ್‌, ನಗರಸಭೆ ಸದಸ್ಯರು ನಾಶೀರ್‌ ಷರೀಪ್‌, ರಾಮಕೃಷ್ಣ, ಪೌರಯುಕ್ತ ನಾಗಶೆಟ್ಟಿ ಹಾಗÜೂ ಇತರೆ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ