ಆ್ಯಪ್ನಗರ

ಜಿಲ್ಲೆಯಲ್ಲಿ ಸಂಕ್ರಾಂತಿ ಸಂಭ್ರಮ

ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಮಂಗಳವಾರ ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

Vijaya Karnataka 16 Jan 2019, 5:00 am
ಚಾಮರಾಜನಗರ : ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಮಂಗಳವಾರ ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
Vijaya Karnataka Web sankranti celebration in the district
ಜಿಲ್ಲೆಯಲ್ಲಿ ಸಂಕ್ರಾಂತಿ ಸಂಭ್ರಮ


ಫಸಲು ಕೈ ಸೇರಿದ ನಂತರ ಬರುವ ಮೊದಲ ಹಬ್ಬವಾದ್ದರಿಂದ ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗಕ್ಕೆ ಸಂಕ್ರಾಂತಿ ನವೋಲ್ಲಾಸದ ಸುಗ್ಗಿ ಹಬ್ಬ. ಹಾಗಾಗಿ ತಾವು ಬೆಳೆದು, ಕಟಾವು ಮಾಡಿದ ಧವಸ, ಧಾನ್ಯಗಳಿಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬ ಆಚರಿಸಿದರು.

ಇನ್ನು ನಗರ ಸೇರಿದಂತೆ ನಾನಾ ಕಡೆ ಹೆಂಗಳೆಯರು, ಮಕ್ಕಳು ಮನೆ ಮನೆಗೆ ತೆರಳಿ ಎಳ್ಳು, ಬೆಲ್ಲ ಹಂಚಿಕೆ ಮಾಡುವ ದೃಶ್ಯ ಸಾಮಾನ್ಯವಾಗಿತ್ತು. ಮನೆ ಮುಂದೆ ಬಣ್ಣದ ರಂಗೋಲಿಗಳು ಗಮನ ಸೆಳೆದವು.

ಜಿಲ್ಲಾ ಕೇಂದ್ರದಲ್ಲಿ ಸಂಜೆ ಆಗುತ್ತಿದ್ದಂತೆ ಹೆಣ್ಣು ಮಕ್ಕಳು ಹೊಸ ಬಟ್ಟೆ ತೊಟ್ಟು ತಮ್ಮ ಸ್ನೇಹಿತರು, ಸಂಬಂಧಿಕರು, ನೆರೆ-ಹೊರೆಯವರ ಮನೆಗಳಿಗೆ ತೆರಳಿ ಎಳ್ಳು -ಬೆಲ್ಲ ಹಂಚುತ್ತಿದ್ದರು.

ಗ್ರಾಮೀಣ ಭಾಗದಲ್ಲಿ ಜಾನುವಾರುಗಳ ಕೊಂಬಿಗೆ ಹಾಗೂ ಮರ, ಗಿಡಗಳಿಗೆ ಬಣ್ಣ ಹಚ್ಚುವ ಮೂಲಕ ಸುಗ್ಗಿಯ ಹಬ್ಬವನ್ನು ಪೂರೈಸಲಾಯಿತು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.

ಹಬ್ಬ ಕೆಲವೆಡೆ ಭಾನುವಾರವೇ ನಡೆದಿತ್ತು. ಇನ್ನು ಮಂಗಳವಾರ ಹಬ್ಬ ಮಾಡಿದವರು ಸೋಮವಾರ ಸಂಜೆಯಿಂದಲೇ ಹಬ್ಬದ ಸಿದ್ಧತೆಗಳನ್ನು ನಡೆಸಿದ್ದರು.

ಹಬ್ಬದೊಂದಿಗೆ ಜಾತ್ರೆ ರಂಗು: ಮತ್ತೊಂದೆಡೆ ಸಂಕ್ರಾಂತಿ ಹಬ್ಬದ ಅಂಗವಾಗಿ ಗುಂಡ್ಲುಪೇಟೆ ತಾಲೂಕಿನ ಹುಲಗನಮುರುಡಿಯಲ್ಲಿ ಮಂಗಳವಾರ ಜಾತ್ರೆಯ ಸಂಭ್ರಮ ನೆಲೆಸಿತ್ತು. ಸಂಕ್ರಾಂತಿಯೊಂದಿಗೆ ರಥೋತ್ಸವವೂ ಇದ್ದರಿಂದ ಜನಸಾಗರವೇ ನೆರೆದಿತ್ತು. ಹಬ್ಬದಂದು ದೇವರ ದರ್ಶನ ಪಡೆಯಲು ಭಕ್ತರು ಮುಗಿ ಬಿದ್ದರು.



ಏರಿಕೆಯಾಗಿದ್ದ ಅವರೆಕಾಯಿ ಬೆಲೆ


ಇನ್ನು ಸಂಕ್ರಾಂತಿ ಹಬ್ಬದಲ್ಲಿ ಕಿಚಡಿ ಅಡುಗೆ ಪ್ರಸಿದ್ಧ. ಕಿಚಡಿಯೊಂದಿಗಿನ ಹುಳಿಗೆ ಅವರೆಕಾಯಿ ಘಮಲು ಆವರಿಸಿದರೇನೆ ರುಚಿ. ಹೀಗಾಗಿ ಮಾಗಿ ಚಳಿಯ ಅವರೆಕಾಯಿಗೆ ಮಾರುಕಟ್ಟೆಯಲ್ಲಿ ಡಿಮ್ಯಾಂಡ್‌ ಹೆಚ್ಚಿತ್ತು. ಪರಿಣಾಮ ಕೆಜಿ ಅವರೆಗೆ 50 ರಿಂದ 60 ರೂ. ಬೆಲೆ ಇತ್ತು. ಇಷ್ಟು ದಿನ 30 ರಿಂದ 40 ರೂ.ಗೆ ದೊರೆಯುತ್ತಿದ್ದ ಅವರೆ, ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಏರಿಕೆ ಕಂಡಿತ್ತು. ಆದರೂ ಗ್ರಾಹಕರು ಖರೀದಿಸಲು ಹಿಂದೇಟು ಹಾಕಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ