ಆ್ಯಪ್ನಗರ

ಡೇರಿಗೆ ಗುಣಮಟ್ಟ ಹಾಲು ಪೂರೈಸಿ

ಚಾಮರಾಜನಗರ ತಾಲೂಕಿನ ಆಲೂರು ಹೊಮ್ಮ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.

Vijaya Karnataka 30 Sep 2018, 5:00 am
Vijaya Karnataka Web serve dairy milk to milk
ಡೇರಿಗೆ ಗುಣಮಟ್ಟ ಹಾಲು ಪೂರೈಸಿ
ಸಂತೇಮರಹಳ್ಳಿ : ಚಾಮರಾಜನಗರ ತಾಲೂಕಿನ ಆಲೂರು ಹೊಮ್ಮ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.

ಸಂಘದ ಅಧ್ಯಕ್ಷ ಎಚ್‌.ಎಸ್‌. ಮಹದೇವಸ್ವಾಮಿ ಮಾತನಾಡಿ, ರೈತರು ಡೇರಿಗೆ ಗುಣಮಟ್ಟ ಹಾಲು ಹಾಕುವ ಮೂಲಕ ಡೇರಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಉತ್ಪಾದಕರು ಡೇರಿಗೆ ಹಾಕುವ ಹಾಲಿನಲ್ಲಿ ಯಾವುದೇ ಕಲಬೆರಕೆ ಇರಬಾರದು. ಡೇರಿವತಿಯಿಂದ ಪಶು ಆಹಾರವನ್ನು ರಿಯಾಯಿತಿ ದರದಲ್ಲಿ ಉತ್ಪಾದಕರಿಗೆ ನೀಡಲಾಗುತ್ತದೆ. ಡೇರಿಯಿಂದ ಹಾಗೂ ಒಕ್ಕೂಟದ ವತಿಯಿಂದ ಉತ್ಪಾದಕರ ಮಕ್ಕಳ ಶೈಕ್ಷ ಣಿಕ ಬೆಳೆವಣಿಗೆಗೆ ಸಹಾಯಧನ ನೀಡಲಾಗುತ್ತಿದೆ ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಂ.ಎಸ್‌.ರವಿಶಂಕರ್‌, ಕೆ.ಆರ್‌.ಬಸವರಾಜು, ಹೇಮಂತ್‌ಕುಮಾರ್‌, ಜಿಲ್ಲಾ ಹಾಲು ಒಕ್ಕೂಟದ ಪ್ರಭಾರ ವ್ಯವಸ್ಥಾಪಕ ಸಿ.ರವಿಕುಮಾರ್‌, ಡೇರಿ ನಿರ್ದೇಶಕರಾದ ಎಚ್‌.ಎನ್‌. ನಾಗರಾಜು, ಮಲ್ಲೇಶ್‌, ರಾಜಶೇಖರ್‌ ಮೂರ್ತಿ, ಬಸವರಾಜು, ಬೋರಮ್ಮ, ಅಂಬಿಕಮ್ಮ, ಶಿವಮ್ಮ, ಚಿನ್ನಮ್ಮ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ. ನಾಗೇಂದ್ರಸ್ವಾಮಿ, ಹಾಲು ಪರಿವೀಕ್ಷ ಕ ನಂಜುಂಡನಾಯಕ ಸೇರಿದಂತೆ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ