ಚಾಮರಾಜನಗರ: ಬಿಜೆಪಿ ನುಡಿದಂತೆ ನಡೆದಿಲ್ಲ. ಬಿಜೆಪಿ ಎಂದರೆ ಸುಳ್ಳಿನ ಫ್ಯಾಕ್ಟರಿ, ಇದೊಂದು ಅತ್ಯಂತ ಭ್ರಷ್ಟ ಹಾಗೂ ಹೇಡಿ ಸರಕಾರ ಎಂದು ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರಕಾರವನ್ನು ಟೀಕಿಸಿದರು. ನಗರದಲ್ಲಿ ಗುರುವಾರ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿಯವರು ಅಚ್ಚೆ ದಿನ್ ಆಯೇಗಾ ಎಂದಿದ್ದರು. ಆದರೆ, ದೇಶದಲ್ಲಿಅಚ್ಚೆ ದಿನ ಬಂದಿದ್ದು ಯಾರಿಗೆ ಎಂಬುದು ಗೊತ್ತಾಗಿದೆ. ಎಲ್ಲಅಗತ್ಯ ವಸ್ತುಗಳ ಬೆಲೆಗಳೂ ಗಗನಕ್ಕೇರಿವೆ. 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದ ಮೋದಿ ಅವರು, ಕೊನೆಗೆ ಪಕೋಡ ಮಾರಿ ಎಂದು ಹೇಳಿಕೆ ಕೊಟ್ಟರು ಎಂದು ವ್ಯಂಗ್ಯವಾಡಿದರು.
''ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂದು ಬಿಜೆಪಿ ಹೇಳುತ್ತಿದೆ. ನಾವು ಅಧಿಕಾರದಲ್ಲಿದ್ದಾಗ ಪ್ರತಿಪಕ್ಷದಲ್ಲಿಇದ್ದದ್ದೂ ನೀವೆ. ಆಗ ಏನು ಮಾಡುತ್ತಿದ್ದಿರಿ, ಹೋಗಲಿ ಈಗ ಅಧಿಕಾರದಲ್ಲಿದ್ದೀರಿ. ತನಿಖೆ ಮಾಡಿಸಲಿ,'' ಎಂದು ಸವಾಲು ಹಾಕಿದರು.
ನಿಮಗೆ ಧಂ ಇದ್ದರೆ ಸಿಬಿಐ ತನಿಖೆ ಮಾಡಿಸಿ
''ನಾನು ಸಿಎಂ ಆಗಿದ್ದಾಗ ಯಾವುದೇ ಸಣ್ಣ ಆರೋಪ ಬಂದರೂ, ಸಿಬಿಐಗೆ ಆದೇಶ ನೀಡಿ ತನಿಖೆ ಮಾಡಿಸಿದ್ದೆ. ಡಿ.ಕೆ.ರವಿ ಪ್ರಕರಣದಲ್ಲಿ ಜಾರ್ಜ್ ವಿರುದ್ಧ ಆರೋಪ ಸಿಬಿಐಯಿಂದ ತನಿಖೆ ನಡೆಸಿದೆ. ಗಣಪತಿ ಆತ್ಮಹತ್ಯೆ, ಒಂದಂಕಿ ಲಾಟರಿ, ಮೇಸ್ತಾ ಕೇಸ್ ಸಿಬಿಐಗೆ ಕೊಟ್ಟೆ. ಬಿ ರಿಪೋರ್ಟ್ ಕೊಟ್ಟರು. ನೀವು ಕೊಡಿ ಸಿಬಿಐಗೆ. ಬಸವರಾಜ ಬೊಮ್ಮಾಯಿ ನಿಮಗೆ ತಾಕತ್ತಿದ್ದರೆ, ಧಮ್ಮಿದ್ದರೆ ತನಿಖೆ ಮಾಡಿಸಿ ಎಂದರೆ ಉತ್ತರ ಇಲ್ಲ,'' ಎಂದು ಮೂದಲಿಸಿದರು.
ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಚಾಮರಾಜನಗರ ಜಿಲ್ಲೆಯಲ್ಲಿ ನಾನಾ ಕಾರ್ಯಕ್ರಮಗಳು ಹಾಗೂ ಹೆಚ್ಚು ಅನುದಾನ ನೀಡಲಾಗಿತ್ತು. ಆದರೀಗ ಬಿಜೆಪಿ ಸರಕಾರ ಗಡಿ ಜಿಲ್ಲೆಗೆ ಏನು ಮಾಡಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
''ಈ ಹಿಂದೆ ನಮ್ಮ ಸರಕಾರ ಇದ್ದ ಸಂದರ್ಭದಲ್ಲಿ ಮಹದೇವ ಪ್ರಸಾದ್ ಉಸ್ತುವಾರಿ ಸಚಿವರಾಗಿದ್ದ ವೇಳೆ ಸಾಕಷ್ಟು ಕಾರ್ಯಕ್ರಮಗಳನ್ನು ಜಿಲ್ಲೆಗೆ ನೀಡಿದ್ದೇವೆ. 8 ರಿಂದ 10 ಸಾವಿರ ಕೋಟಿ ರೂ. ಅನುದಾನವನ್ನು 5 ವರ್ಷಗಳ ಅವಧಿಯಲ್ಲಿ ನಾನಾ ಕಾಮಗಾರಿಗಳಿಗೆ ನೀಡಿದ್ದೆವು. ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ, ಮೆಡಿಕಲ್ ಕಾಲೇಜು, ಎಂಜಿನಿ ಯರಿಂಗ್ ಕಾಲೇಜು, ಕೃಷಿ ಕಾಲೇಜು, ಕಾನೂನು ಕಾಲೇಜು, ಮೊರಾರ್ಜಿ ಶಾಲೆಗಳು, ಚಾಮರಾಜೇಶ್ವರ ದೇವಾಲಯಕ್ಕೆ 3.50 ಕೋಟಿ ಕೊಟ್ಟು, ರಥ ನಿರ್ಮಿಸಿದ್ದು ನಮ್ಮ ಸರಕಾರ, ನಳಂದ ಬುದ್ಧ ವಿಹಾರಕ್ಕೆ ಭೂಮಿ ಹನೂರು ಕೆರೆಗಳಿಗೆ ನೀರು ತುಂಬಿಸಿದ್ದು, 1400 ಎಕರೆ ಕೈಗಾರಿಕಾ ವಸಾಹತು ಮಾಡಿದ್ದು ನಾವು,'' ಎಂದು ಹೇಳಿದರು.
''ಚಾಮರಾಜನಗರ ಜಿಲ್ಲೆ ಮೊದಲಿಂದಲೂ ಶಿಸ್ತಿಗೆ ಹೆಸರಾದ ಜಿಲ್ಲೆ. ಯಾವಾಗ ಚಾಮರಾಜನಗರಕ್ಕೆ ಬಂದರೂ ಅಪಾರವಾದ ಪ್ರೀತಿ ಅಭಿಮಾನ ತೋರಿಸಿರುವ ಜಿಲ್ಲೆಇದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ, ನಾಲ್ಕಕ್ಕೆ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಡಬೇಕೆಂದು ಮನವಿ ಮಾಡುತ್ತೇನೆ ,'' ಎಂದರು.
''ಕಾಂಗ್ರೆಸ್ ಪಕ್ಷ ಡಾ.ಅಂಬೇಡ್ಕರ್ ನೀಡಿರುವ ಸಂವಿಧಾನದ ಬಗ್ಗೆ ನಂಬಿಕೆ ಇಟ್ಟಿರುವ ಪಕ್ಷ. ಸಂವಿಧಾನದಲ್ಲಿ ಸಮಾನ ಸಮಾಜ. ಜಾತ್ಯತೀತತೆಯಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಆದರೆ ಬಿಜೆಪಿ ಇದಕ್ಕೆ ವಿರುದ್ಧವಾಗಿದೆ. ಸಮಾಜದಲ್ಲಿಒಡಕು ಉಂಟು ಮಾಡುವುದೇ ಅದರ ಉದ್ದೇಶ,'' ಎಂದು ಆರೋಪಿಸಿದರು.
ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಉಚಿತ
''ಹಿಂದೆ ನಮ್ಮ ಸರಕಾರ ಅಧಿಕಾರಕ್ಕೆ ಬರುತ್ತಲೇ 7 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿತ್ತು. ಬಿಜೆಪಿ ಸರಕಾರ ಬಂದ ಬಳಿಕ ಅದನ್ನು 5 ಕೆ.ಜಿ.ಗೆ ಇಳಿಸಲಾಗಿದೆ. ಮುಂದೆ ನಮ್ಮ ಸರಕಾರವನ್ನು ಅಧಿಕಾರಕ್ಕೆ ತಂದರೆ 10 ಕೆ.ಜಿ. ಉಚಿತ ಅಕ್ಕಿ ನೀಡಲಾಗುವುದು ಎಂದು ಭರವಸೆ ನೀಡಿದರು. ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆಯುತ್ತದೆ,'' ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ಸಿಂಗ್ ಸುರ್ಜೇವಾಲ, ರೋಜಿಜಾನ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್, ವಿಧಾನಪರಿಷತ್ ಸದಸ್ಯ ತಿಮ್ಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಮಾಜಿ ಶಾಸಕರಾದ ಎಸ್.ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜ್, ಯುವ ಮುಖಂಡ ಗಣೇಶ್ಪ್ರಸಾದ್, ಮಾಜಿ ಸಂಸದರಾದ ಎ.ಸಿದ್ದರಾಜು, ಎಂ.ಶಿವಣ್ಣ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಮುಖಂಡರಾದ ಎಸ್. ನಂಜುಂಡಸ್ವಾಮಿ, ಸದಾಶಿವಮೂರ್ತಿ, ಸೈಯದ್ ರಫಿ, ಬಿ.ಕೆ.ರವಿಕುಮಾರ್, ಚಿಕ್ಕಮಹದೇವ್, ಆರ್.ಮಹಾದೇವ್, ಅರಕಲವಾಡಿ ಗುರುಸ್ವಾಮಿ, ನಂಜುಂಡಪ್ರಸಾದ್, ಕೆರೆಹಳ್ಳಿ ನವೀನ್, ಆಲೂರು ಪ್ರದೀಪ್ ಇತರರು ಹಾಜರಿದ್ದರು.
''ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂದು ಬಿಜೆಪಿ ಹೇಳುತ್ತಿದೆ. ನಾವು ಅಧಿಕಾರದಲ್ಲಿದ್ದಾಗ ಪ್ರತಿಪಕ್ಷದಲ್ಲಿಇದ್ದದ್ದೂ ನೀವೆ. ಆಗ ಏನು ಮಾಡುತ್ತಿದ್ದಿರಿ, ಹೋಗಲಿ ಈಗ ಅಧಿಕಾರದಲ್ಲಿದ್ದೀರಿ. ತನಿಖೆ ಮಾಡಿಸಲಿ,'' ಎಂದು ಸವಾಲು ಹಾಕಿದರು.
ನಿಮಗೆ ಧಂ ಇದ್ದರೆ ಸಿಬಿಐ ತನಿಖೆ ಮಾಡಿಸಿ
''ನಾನು ಸಿಎಂ ಆಗಿದ್ದಾಗ ಯಾವುದೇ ಸಣ್ಣ ಆರೋಪ ಬಂದರೂ, ಸಿಬಿಐಗೆ ಆದೇಶ ನೀಡಿ ತನಿಖೆ ಮಾಡಿಸಿದ್ದೆ. ಡಿ.ಕೆ.ರವಿ ಪ್ರಕರಣದಲ್ಲಿ ಜಾರ್ಜ್ ವಿರುದ್ಧ ಆರೋಪ ಸಿಬಿಐಯಿಂದ ತನಿಖೆ ನಡೆಸಿದೆ. ಗಣಪತಿ ಆತ್ಮಹತ್ಯೆ, ಒಂದಂಕಿ ಲಾಟರಿ, ಮೇಸ್ತಾ ಕೇಸ್ ಸಿಬಿಐಗೆ ಕೊಟ್ಟೆ. ಬಿ ರಿಪೋರ್ಟ್ ಕೊಟ್ಟರು. ನೀವು ಕೊಡಿ ಸಿಬಿಐಗೆ. ಬಸವರಾಜ ಬೊಮ್ಮಾಯಿ ನಿಮಗೆ ತಾಕತ್ತಿದ್ದರೆ, ಧಮ್ಮಿದ್ದರೆ ತನಿಖೆ ಮಾಡಿಸಿ ಎಂದರೆ ಉತ್ತರ ಇಲ್ಲ,'' ಎಂದು ಮೂದಲಿಸಿದರು.
ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಚಾಮರಾಜನಗರ ಜಿಲ್ಲೆಯಲ್ಲಿ ನಾನಾ ಕಾರ್ಯಕ್ರಮಗಳು ಹಾಗೂ ಹೆಚ್ಚು ಅನುದಾನ ನೀಡಲಾಗಿತ್ತು. ಆದರೀಗ ಬಿಜೆಪಿ ಸರಕಾರ ಗಡಿ ಜಿಲ್ಲೆಗೆ ಏನು ಮಾಡಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
''ಈ ಹಿಂದೆ ನಮ್ಮ ಸರಕಾರ ಇದ್ದ ಸಂದರ್ಭದಲ್ಲಿ ಮಹದೇವ ಪ್ರಸಾದ್ ಉಸ್ತುವಾರಿ ಸಚಿವರಾಗಿದ್ದ ವೇಳೆ ಸಾಕಷ್ಟು ಕಾರ್ಯಕ್ರಮಗಳನ್ನು ಜಿಲ್ಲೆಗೆ ನೀಡಿದ್ದೇವೆ. 8 ರಿಂದ 10 ಸಾವಿರ ಕೋಟಿ ರೂ. ಅನುದಾನವನ್ನು 5 ವರ್ಷಗಳ ಅವಧಿಯಲ್ಲಿ ನಾನಾ ಕಾಮಗಾರಿಗಳಿಗೆ ನೀಡಿದ್ದೆವು. ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ, ಮೆಡಿಕಲ್ ಕಾಲೇಜು, ಎಂಜಿನಿ ಯರಿಂಗ್ ಕಾಲೇಜು, ಕೃಷಿ ಕಾಲೇಜು, ಕಾನೂನು ಕಾಲೇಜು, ಮೊರಾರ್ಜಿ ಶಾಲೆಗಳು, ಚಾಮರಾಜೇಶ್ವರ ದೇವಾಲಯಕ್ಕೆ 3.50 ಕೋಟಿ ಕೊಟ್ಟು, ರಥ ನಿರ್ಮಿಸಿದ್ದು ನಮ್ಮ ಸರಕಾರ, ನಳಂದ ಬುದ್ಧ ವಿಹಾರಕ್ಕೆ ಭೂಮಿ ಹನೂರು ಕೆರೆಗಳಿಗೆ ನೀರು ತುಂಬಿಸಿದ್ದು, 1400 ಎಕರೆ ಕೈಗಾರಿಕಾ ವಸಾಹತು ಮಾಡಿದ್ದು ನಾವು,'' ಎಂದು ಹೇಳಿದರು.
''ಚಾಮರಾಜನಗರ ಜಿಲ್ಲೆ ಮೊದಲಿಂದಲೂ ಶಿಸ್ತಿಗೆ ಹೆಸರಾದ ಜಿಲ್ಲೆ. ಯಾವಾಗ ಚಾಮರಾಜನಗರಕ್ಕೆ ಬಂದರೂ ಅಪಾರವಾದ ಪ್ರೀತಿ ಅಭಿಮಾನ ತೋರಿಸಿರುವ ಜಿಲ್ಲೆಇದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ, ನಾಲ್ಕಕ್ಕೆ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಡಬೇಕೆಂದು ಮನವಿ ಮಾಡುತ್ತೇನೆ ,'' ಎಂದರು.
''ಕಾಂಗ್ರೆಸ್ ಪಕ್ಷ ಡಾ.ಅಂಬೇಡ್ಕರ್ ನೀಡಿರುವ ಸಂವಿಧಾನದ ಬಗ್ಗೆ ನಂಬಿಕೆ ಇಟ್ಟಿರುವ ಪಕ್ಷ. ಸಂವಿಧಾನದಲ್ಲಿ ಸಮಾನ ಸಮಾಜ. ಜಾತ್ಯತೀತತೆಯಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಆದರೆ ಬಿಜೆಪಿ ಇದಕ್ಕೆ ವಿರುದ್ಧವಾಗಿದೆ. ಸಮಾಜದಲ್ಲಿಒಡಕು ಉಂಟು ಮಾಡುವುದೇ ಅದರ ಉದ್ದೇಶ,'' ಎಂದು ಆರೋಪಿಸಿದರು.
ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಉಚಿತ
''ಹಿಂದೆ ನಮ್ಮ ಸರಕಾರ ಅಧಿಕಾರಕ್ಕೆ ಬರುತ್ತಲೇ 7 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿತ್ತು. ಬಿಜೆಪಿ ಸರಕಾರ ಬಂದ ಬಳಿಕ ಅದನ್ನು 5 ಕೆ.ಜಿ.ಗೆ ಇಳಿಸಲಾಗಿದೆ. ಮುಂದೆ ನಮ್ಮ ಸರಕಾರವನ್ನು ಅಧಿಕಾರಕ್ಕೆ ತಂದರೆ 10 ಕೆ.ಜಿ. ಉಚಿತ ಅಕ್ಕಿ ನೀಡಲಾಗುವುದು ಎಂದು ಭರವಸೆ ನೀಡಿದರು. ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆಯುತ್ತದೆ,'' ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ಸಿಂಗ್ ಸುರ್ಜೇವಾಲ, ರೋಜಿಜಾನ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್, ವಿಧಾನಪರಿಷತ್ ಸದಸ್ಯ ತಿಮ್ಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಮಾಜಿ ಶಾಸಕರಾದ ಎಸ್.ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜ್, ಯುವ ಮುಖಂಡ ಗಣೇಶ್ಪ್ರಸಾದ್, ಮಾಜಿ ಸಂಸದರಾದ ಎ.ಸಿದ್ದರಾಜು, ಎಂ.ಶಿವಣ್ಣ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಮುಖಂಡರಾದ ಎಸ್. ನಂಜುಂಡಸ್ವಾಮಿ, ಸದಾಶಿವಮೂರ್ತಿ, ಸೈಯದ್ ರಫಿ, ಬಿ.ಕೆ.ರವಿಕುಮಾರ್, ಚಿಕ್ಕಮಹದೇವ್, ಆರ್.ಮಹಾದೇವ್, ಅರಕಲವಾಡಿ ಗುರುಸ್ವಾಮಿ, ನಂಜುಂಡಪ್ರಸಾದ್, ಕೆರೆಹಳ್ಳಿ ನವೀನ್, ಆಲೂರು ಪ್ರದೀಪ್ ಇತರರು ಹಾಜರಿದ್ದರು.