ಹನೂರು (ಚಾಮರಾಜನಗರ): ತಾಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾದ ಮಲೈ ಮಹದೇಶ್ವರ ಬೆಟ್ಟದಲ್ಲಿ ಸರಳ ದಸರಾ ಪೂಜೆಗೆ ಪ್ರಾಧಿಕಾರದ ವತಿಯಿಂದ ದೇವಾಲಯ ಸುತ್ತ ವಿಶೇಷ ವಿದ್ಯುತ್ ದೀಪಾಲಂಕಾರ ಸಿದ್ಧತೆ ಮಾಡಲಾಗುತ್ತಿದೆ. ಭಕ್ತರಿಗೆ ಪ್ರವೇಶ ನಿಷೇಧ: ಕೊರೊನಾ ಮಹಾಮಾರಿ ಎಲ್ಲೆಡೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಸರಾ ಜಾತ್ರೆ ದಿನಗಳಂದು, ಮುಂಬರುವ ಎಣ್ಣೆ ಮಜ್ಜನ ಹಾಗೂ ಅಮಾವಾಸ್ಯೆ ದಿನಗಳಂದು ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಬರುವ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ಡುಕೊಳ್ಳುವುದು ಕಷ್ಟ ಸಾಧ್ಯವಾದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ವಿಶೇಷ ದಿನಗಳಂದು ಪ್ರವೇಶ ನಿಷೇಧಿಸಲಾಗಿದೆ.
ವಿಶೇಷ ಕ್ಯೂ: ವಿಶೇಷ ದಿನಗಳನ್ನು ಬಿಟ್ಟು ಉಳಿದ ದಿನಗಳು ಮಾದಪ್ಪನ ದರ್ಶನ ಪಡೆಯಲು ಬರುವ ಭಕ್ತಾಧಿಗಳಿಗೆ ಎಂದಿನಂತೆ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ದರ್ಶನ ಹಾಗೂ ದಾಸೋಹ (ತಿಂಡಿ) ವ್ಯವಸ್ಥೆ ಮುಂದುವರೆಯಲಿದೆ. ಈ ಸಮಯದಲ್ಲಿ ಭಾನುವಾರ ಮತ್ತು ಸೋಮವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 3 ರವರೆಗೆ ಹೆಚ್ಚು ಭಕ್ತರು ಭೇಟಿ ನೀಡಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ನೂಕುನುಗ್ಗಲು ಇಲ್ಲದೆ ದೇವಾಲಯದೊಳಗೆ ಹೋಗಿ ಬರಲು ವಿಶೇಷ ಕ್ಯೂಲೈನ್ ಕಲ್ಪಿಸಲಾಗಿದೆ.
ದಸರಾ, ಕಾರ್ತಿಕ ಮಾಸದಲ್ಲಿ ಭಕ್ತರಿಗೆ ಮಲೆ ಮಹದೇಶ್ವರನ ದರ್ಶನ ಭಾಗ್ಯ ಇಲ್ಲ..!
ಪ್ರಾಧಿಕಾರದ ಪೆಟ್ರೋಲ್ ಬಂಕ್, ಅಂಗಡಿಗಳು, ಲಾಡು ಪ್ರಸಾದದ ಕೌಂಟರ್ಗಳು, ವಿಶೇಷ ದಾಸೋಹದ ಕೌಂಟರ್ಗಳು, ಮಾಹಿತಿ ಕೇಂದ್ರ ತೆರೆದಿರಲಿವೆ. ದೇವಾಲಯದಲ್ಲಿ ದೇವರ ದರ್ಶನ, ಪೂಜೆ, ದಾಸೋಹ ಸೇವೆಗಳು ಮಾತ್ರ ಇರಲಿವೆ. ಭಕ್ತರು ಎಲ್ಲಿಯೂ ಗುಂಪುಗುಂಪಾಗಿ ಸೇರದೆ, ಪೊಲೀಸ್ ಠಾಣೆ ಕಡೆಯಿಂದ ರಂಗಮಂದಿರಕ್ಕೆ ತೆರಳಿ, ವಿಶೇಷ ಕ್ಯೂ ಲೈನಿನ ಮೂಲಕವೇ ದೇವಾಲಯದ ಒಳಗೆ ಪ್ರವೇಶ ನೀಡಲಾಗಿದೆ.
ವೀರಪ್ಪನ್ ಅಬ್ಬರಿಸಿದ್ದ ಕಾಡಿನಲ್ಲಿ ಅರಣ್ಯ ಅಪರಾಧ ಹೆಚ್ಚಳ..! ಕೊರೊನಾ ಎಫೆಕ್ಟ್..?
ಅಂತರಗಂಗೆಯಲ್ಲಿ ಸ್ನಾನ ಮಾಡಲು ಅವಕಾಶವಿಲ್ಲ. ಬೃಹತ್ ಶೌಚಾಲಯದಲ್ಲಿ ಮಾತ್ರ ಸ್ನಾನ ಮಾಡಬಹುದು. ರಾತ್ರಿ ವಾಸ್ತವ್ಯ ಇರುವುದಿಲ್ಲ. ಕೊಠಡಿ ನೀಡುವಿಕೆ ನಿಷೇಧಿಸಿದೆ. ಈ ಸಂದರ್ಭ ಮುಡಿ ಸೇವೆ ನೀಡಲು ಅವಕಾಶವಿಲ್ಲ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.
ಕೊರೊನಾ ಭೀತಿಯ ನಡುವೆಯೂ ಮಲೆಮಹದೇಶ್ವನ ದರ್ಶನಕ್ಕೆ ಸಾವಿರ ಸಾವಿರ ಭಕ್ತರು..!
ವಿಶೇಷ ಕ್ಯೂ: ವಿಶೇಷ ದಿನಗಳನ್ನು ಬಿಟ್ಟು ಉಳಿದ ದಿನಗಳು ಮಾದಪ್ಪನ ದರ್ಶನ ಪಡೆಯಲು ಬರುವ ಭಕ್ತಾಧಿಗಳಿಗೆ ಎಂದಿನಂತೆ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ದರ್ಶನ ಹಾಗೂ ದಾಸೋಹ (ತಿಂಡಿ) ವ್ಯವಸ್ಥೆ ಮುಂದುವರೆಯಲಿದೆ. ಈ ಸಮಯದಲ್ಲಿ ಭಾನುವಾರ ಮತ್ತು ಸೋಮವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 3 ರವರೆಗೆ ಹೆಚ್ಚು ಭಕ್ತರು ಭೇಟಿ ನೀಡಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ನೂಕುನುಗ್ಗಲು ಇಲ್ಲದೆ ದೇವಾಲಯದೊಳಗೆ ಹೋಗಿ ಬರಲು ವಿಶೇಷ ಕ್ಯೂಲೈನ್ ಕಲ್ಪಿಸಲಾಗಿದೆ.
ದಸರಾ, ಕಾರ್ತಿಕ ಮಾಸದಲ್ಲಿ ಭಕ್ತರಿಗೆ ಮಲೆ ಮಹದೇಶ್ವರನ ದರ್ಶನ ಭಾಗ್ಯ ಇಲ್ಲ..!
ಪ್ರಾಧಿಕಾರದ ಪೆಟ್ರೋಲ್ ಬಂಕ್, ಅಂಗಡಿಗಳು, ಲಾಡು ಪ್ರಸಾದದ ಕೌಂಟರ್ಗಳು, ವಿಶೇಷ ದಾಸೋಹದ ಕೌಂಟರ್ಗಳು, ಮಾಹಿತಿ ಕೇಂದ್ರ ತೆರೆದಿರಲಿವೆ. ದೇವಾಲಯದಲ್ಲಿ ದೇವರ ದರ್ಶನ, ಪೂಜೆ, ದಾಸೋಹ ಸೇವೆಗಳು ಮಾತ್ರ ಇರಲಿವೆ. ಭಕ್ತರು ಎಲ್ಲಿಯೂ ಗುಂಪುಗುಂಪಾಗಿ ಸೇರದೆ, ಪೊಲೀಸ್ ಠಾಣೆ ಕಡೆಯಿಂದ ರಂಗಮಂದಿರಕ್ಕೆ ತೆರಳಿ, ವಿಶೇಷ ಕ್ಯೂ ಲೈನಿನ ಮೂಲಕವೇ ದೇವಾಲಯದ ಒಳಗೆ ಪ್ರವೇಶ ನೀಡಲಾಗಿದೆ.
ವೀರಪ್ಪನ್ ಅಬ್ಬರಿಸಿದ್ದ ಕಾಡಿನಲ್ಲಿ ಅರಣ್ಯ ಅಪರಾಧ ಹೆಚ್ಚಳ..! ಕೊರೊನಾ ಎಫೆಕ್ಟ್..?
ಅಂತರಗಂಗೆಯಲ್ಲಿ ಸ್ನಾನ ಮಾಡಲು ಅವಕಾಶವಿಲ್ಲ. ಬೃಹತ್ ಶೌಚಾಲಯದಲ್ಲಿ ಮಾತ್ರ ಸ್ನಾನ ಮಾಡಬಹುದು. ರಾತ್ರಿ ವಾಸ್ತವ್ಯ ಇರುವುದಿಲ್ಲ. ಕೊಠಡಿ ನೀಡುವಿಕೆ ನಿಷೇಧಿಸಿದೆ. ಈ ಸಂದರ್ಭ ಮುಡಿ ಸೇವೆ ನೀಡಲು ಅವಕಾಶವಿಲ್ಲ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.
ಕೊರೊನಾ ಭೀತಿಯ ನಡುವೆಯೂ ಮಲೆಮಹದೇಶ್ವನ ದರ್ಶನಕ್ಕೆ ಸಾವಿರ ಸಾವಿರ ಭಕ್ತರು..!