ಆ್ಯಪ್ನಗರ

ಆರೋಪಿ ಸ್ವಾಮಿಗೆ ಅಕ್ರಮ ಖಾತೆ: ಆರ್‌ಐ ಸೇರಿ ಮೂವರ ಅಮಾನತು

ಹನೂರು ತಾಲೂಕು ಸುಳವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನ ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಸಾಲೂರು ಮಠದ ಇಮ್ಮಡಿ ಮಹದೇವ ಸ್ವಾಮಿ ಜೈಲಿನಲ್ಲಿದ್ದುಕೊಂಡೇ ಮಠದ ಆಸ್ತಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಮೂವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

Vijaya Karnataka 1 Jun 2019, 5:00 am
ಕೊಳ್ಳೇಗಾಲ: ಹನೂರು ತಾಲೂಕು ಸುಳವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನ ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಸಾಲೂರು ಮಠದ ಇಮ್ಮಡಿ ಮಹದೇವ ಸ್ವಾಮಿ ಜೈಲಿನಲ್ಲಿದ್ದುಕೊಂಡೇ ಮಠದ ಆಸ್ತಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಮೂವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
Vijaya Karnataka Web sulavadi tragedy
ಆರೋಪಿ ಸ್ವಾಮಿಗೆ ಅಕ್ರಮ ಖಾತೆ: ಆರ್‌ಐ ಸೇರಿ ಮೂವರ ಅಮಾನತು


ಇಮ್ಮಡಿ ಮಹದೇವಸ್ವಾಮಿಯವರ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದು ತನಿಖೆಯಿಂದ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಯವರು ಕಸಬಾ ರಾಜಸ್ವ ನಿರೀಕ್ಷ ಕ ನಿರಂಜನ್‌, ಗ್ರಾಮ ಲೆಕ್ಕಾಧಿಕಾರಿಗಳಾದ ಹೇಮಾ ಮತ್ತು ಸತೀಶ್‌ ಅವರನ್ನು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.

ಏನಿದು ಅಕ್ರಮ ಖಾತೆ?: ಪಟ್ಟಣದಿಂದ ಕೆಂಪನಪಾಳ್ಯಕ್ಕೆ ಹೋಗುವ ರಸ್ತೆಯಲ್ಲಿರುವ ಲಿಂಗಣಾಪುರ ಸರ್ವೇ ನಂ 203ರಲ್ಲಿ 2.44 ಎಕರೆ ಭೂಮಿ ಸಾಲೂರು ಮಠಕ್ಕೆ ಸೇರಿದ್ದಾಗಿದ್ದು, ಇಲ್ಲಿ ಸಾಲೂರು ಸ್ವಾಮಿ ಕೃಪಾ ಪ್ರೌಢಶಾಲೆ ಇದೆ. 1997 ಆ.26ರಲ್ಲಿ ಮಲೆ ಮಹದೇಶ್ವರ ಕೃಪಾ ಎಜ್ಯುಕೇಶನ್‌ ಸೊಸೈಟಿ ಕಾರ್ಯದರ್ಶಿ ಇಮ್ಮಡಿ ಮಹದೇವಸ್ವಾಮಿ, ಸಾಲೂರು ಬೃಹನ್‌ ಮಠದ ಹೆಸರಿಗೆ ಈ ಭೂಮಿ ನೋಂದಣಿಯಷ್ಟೇ ಆಗಿತ್ತು. ಅದೇ ಜಾಗದಲ್ಲಿ 1999ರಲ್ಲಿ ಸಾಲೂರು ಕೃಪಾ ಪ್ರೌಢಶಾಲೆ ತೆರೆಯಲಾಗಿದೆ. ಆದರೆ, ಅಷ್ಟು ವರ್ಷಗಳ ಬಳಿಕ ಮೇ 5ರಂದು ಇಮ್ಮಡಿ ಮಹದೇವಸ್ವಾಮಿ ಹೆಸರಿಗೆ ಈ ಭೂಮಿಯನ್ನು ಖಾತೆ ಮಾಡಿ ಪಹಣಿಯನ್ನು ಅವರ ಹೆಸರಿಗೆ ನೀಡಲಾಗಿದೆ.

ಅಪರಾಧ ಪ್ರಕರಣದ ಪ್ರಮುಖ ಅರೋಪಿಯಾಗಿ ಕಾರಾಗೃಹದಲ್ಲಿರುವ ಇಮ್ಮಡಿ ಮಹದೇವಸ್ವಾಮಿಗೆ ಅಸ್ತಿಯನ್ನು ಖಾತೆ ಮಾಡಿಕೊಟ್ಟಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಅಲ್ಲದೇ ಮಠದ ಭಕ್ತರ ಆಕ್ರೋಶಕ್ಕೂ ಕಾರಣವಾಗಿತ್ತು. ಇದೀಗ ಖಾತೆ ಮಾಡಿಕೊಟ್ಟ ಅಧಿಕಾರಿಗಳು ಸೇವೆಯಿಂದ ಅಮಾನತುಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ