ಆ್ಯಪ್ನಗರ

ಸುಳುವಾಡಿಯಲ್ಲಿ ಮೃತರಿಗೆ ಶ್ರದ್ಧಾಂಜಲಿ

ಸುಳವಾಡಿ ದುರಂತದಲ್ಲಿಸಂತ್ರಸ್ತರಾದ ಕುಟುಂಬದವರು ಕಹಿ ಘಟನೆಗಳನ್ನು ಮರೆತು ಜೀವನ ರೂಪಿಸಿಕೊಳ್ಳುವ ನಿಟ್ಟಿನಲ್ಲಿಮುಂದಾಗಿ ಎಂದು ಶಾಸಕ ಆರ್‌.ನರೇಂದ್ರ ಧೈರ್ಯ ತುಂಬಿದರು.

Vijaya Karnataka 15 Dec 2019, 5:00 am
ಹನೂರು : ಸುಳವಾಡಿ ದುರಂತದಲ್ಲಿಸಂತ್ರಸ್ತರಾದ ಕುಟುಂಬದವರು ಕಹಿ ಘಟನೆಗಳನ್ನು ಮರೆತು ಜೀವನ ರೂಪಿಸಿಕೊಳ್ಳುವ ನಿಟ್ಟಿನಲ್ಲಿಮುಂದಾಗಿ ಎಂದು ಶಾಸಕ ಆರ್‌.ನರೇಂದ್ರ ಧೈರ್ಯ ತುಂಬಿದರು.
Vijaya Karnataka Web ಹನೂರು ತಾಲೂಕಿನ ಸುಳವಾಡಿಗ್ರಾಮದ ಬ್ರಹ್ಮೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ಮಾರ್ಟಳ್ಳಿ ಗ್ರಾಪಂ ಹಾಗೂ ಗ್ರಾಮಸ್ಥರ ವತಿಯಿಂದ ವಿಷಪ್ರಸಾದ ದುರಂತದಲ್ಲಿ ಮತಪಟ್ಟವರಿಗೆ ಶಾಸಕ ಆರ್.ನರೇಂದ್ರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.


ತಾಲೂಕಿನ ಸುಳ್ವಾಡಿ ಗ್ರಾಮದ ಬ್ರಹ್ಮೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿಮಾರ್ಟಳ್ಳಿ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ವತಿಯಿಂದ ಹಮ್ಮಿಕೊಂಡಿದ್ದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನ ವಿಷಪ್ರಸಾದ ದುರಂತದಲ್ಲಿಮೃತಪಟ್ಟವರಿಗೆ ಮೊದಲ ವರ್ಷದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿಮಾತನಾಡಿದರು.

ಪ್ರಸಾದಕ್ಕೆ ವಿಷ ಬೆರೆಸುವ ಇಂತಹ ಘಟನೆ ಇತಿಹಾಸದಲ್ಲೇ ಎಲ್ಲೂನಡೆದಿಲ್ಲ, ಈ ದುರಂತದಲ್ಲಿಅಮಾಯಕರು ಮೃತಪಟ್ಟರು. ಇದರಿಂದ ತೊಂದರೆಗೊಳಗಾದ ಕುಟುಂಬಸ್ಥರು, ಆ ಕಹಿ ಘಳಿಗೆಯನ್ನು ಮರೆತು ಸರಕಾರ ನೀಡಿರುವ ಪರಿಹಾರ, ಇತರೆ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.

ಈಗಾಗಲೇ ಸರಕಾರದ ವತಿಯಿಂದ ಪರಿಹಾರ ನೀಡುವ ನಿಟ್ಟಿನಲ್ಲಿಕ್ರಮ ವಹಿಸಿ ಮೃತಪಟ್ಟ 17 ಕುಟುಂಬಗಳಿಗೆ ರಾಜ್ಯ ಸರಕಾರದಿಂದ ತಲಾ 5 ಲಕ್ಷ ರೂ. ಪರಿಹಾರ, ಕೇಂದ್ರ ಸರಕಾರದಿಂದ 2 ಲಕ್ಷ ರೂ, ಕೆಪಿಸಿಸಿಯಿಂದ 1 ಲಕ್ಷ ರೂ. ಪರಿಹಾರ ನೀಡಲಾಗಿದೆ. ದುರಂತದಲ್ಲಿ ತೀವ್ರವಾಗಿ ಅಸ್ವಸ್ಥರಾದ 55 ಮಂದಿಗೆ ಮೊದಲ ಹಂತವಾಗಿ ತಲಾ 1 ಲಕ್ಷ ರೂ. ನೀಡಲಾಗಿದೆ. ಸಾಮಾನ್ಯ ಅಸ್ವಸ್ಥರಾದ 10 ಮಂದಿಗೆ ಸಂತ್ರಸ್ತರಿಗೆ 25 ಸಾವಿರ, ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 1.25 ಸಾವಿರ ರೂ. ಹಾಗೂ 75 ಸಾವಿರ ರೂ. ಆರ್ಥಿಕ ನೆರವು ನೀಡಲಾಗಿದೆ. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ 14.80 ಲಕ್ಷ ರೂ.ವೆಚ್ಚದಲ್ಲಿ38 ಕುಟುಂಬಗಳಿಗೆ ಮೇಕೆ ಮತ್ತು ಕುರಿಗಳನ್ನು ನೀಡಲಾಗಿದೆ. ಅಲ್ಲದೆ ಇನ್ನೂ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

ಡಿಸಿ ಕಾರ್ಯವೈಖರಿಗೆ ಪ್ರಶಂಸೆ :
ಸುಳವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿಕಳೆದ ವರ್ಷ ನಡೆದ ಘೋರ ವಿಷ ಪ್ರಸಾದ ದುರಂತ ವೇಳೆಯಲ್ಲಿಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಒಬ್ಬ ಹೆಣ್ಣು ಮಗಳಾಗಿ ವಿಷ ಪ್ರಸಾದ ಸೇವಿಸಿ ನರಳಾಡುತ್ತಿದ್ದವರನ್ನು ಬದುಕಿಸುವ ನಿಟ್ಟಿನಲ್ಲಿಹಗಲು ರಾತ್ರಿ ಎನ್ನದೇ ಶ್ರಮ ವಹಿಸಿ ತಮ್ಮ ಕರ್ತವ್ಯ ನಿಷ್ಠೆ ಮೆರೆದರು. ಜಿಲ್ಲಾಧಿಕಾರಿಗಳ ಅವಿರತ ಶ್ರಮದಿಂದ ಸಂತ್ರಸ್ತರಿಗೆ ಬಿದರಹಳ್ಳಿ ಗ್ರಾಮದಲ್ಲಿಸರ್ವೇ ನಂ. 42 ರಲ್ಲಿ2 ಎಕರೆ ಜಮೀನಿನ್ನು ಮಂಜೂರು ಮಾಡಿ ಸೈಟ್‌ ಹಂಚಿಕೆ ಮಾಡುವ ನಿಟ್ಟಿನಲ್ಲಿಕ್ರಮವಹಿಸಿದ್ದಾರೆ ಎಂದು ಶಾಸಕ ಆರ್‌.ನರೇಂದ್ರ ಪ್ರಶಂಸಿದರು.

ದುರಂತ ನಡೆದ ಕೆಲವು ಹೊತ್ತಿನಲ್ಲೇ ವಿಷಪೂರಿತ ಆಹಾರ ಸೇವನೆ ಬಗ್ಗೆ ಶೀಘ್ರವಾಗಿ ಪತ್ತೆ ಹಚ್ಚಿದ ಹೋಲಿಕ್ರಾಸ್‌ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಬಾಧಿತರಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಹಲವರನ್ನು ಬದುಕಿಸುವ ನಿಟ್ಟಿನಲ್ಲಿಕಾರ್ಯಪ್ರವೃತರಾಗಿದ್ದರು ಎಂದು ಸ್ಮರಿಸಿದರು.

ಸುಳ್ವಾಡಿ ಪ್ರಾಂತ್ಯದ ಕ್ರೈಸ್ತ ಧರ್ಮಗುರು ಟೆನ್ನಿ ಕುರಿಯನ್‌ ಮಾತನಾಡಿದರು. ಈರೋಡ್‌ ನಿವೃತ್ತ ನ್ಯಾಯಧೀಶರಾದ ಎಸ್‌.ಸಾತಪಿಳೈ, ಜಿ.ಪಂ. ಸದಸ್ಯ ಬಸವರಾಜು, ತಾ.ಪಂ. ಅಧ್ಯಕ್ಷ ರಾಜೇಂದ್ರ, ವಕೀಲರ ಸಂಘದ ಅಧ್ಯಕ್ಷ ಮಹಾದೇವು, ಗ್ರಾಪಂ ಅಧ್ಯಕ್ಷ ಸಾವಿತ್ರಿಬಾಯಿ, ಸದಸ್ಯ ರಾಮಲೀಂಗಂ, ದಸಂಸದ ಅಧ್ಯಕ್ಷ ಸಿದ್ದರಾಜು, ಹೋಲಿಕ್ರಾಸ್‌ ಆಸ್ಪತ್ರೆಯ ವೈದ್ಯರು ಹಾಗೂ ಮುಖಂಡರಾದ ಪೆದ್ದನಪಾಳ್ಯ ಮಣಿ ಇತರರು ಹಾಜರಿದ್ದರು.

ಶೀಘ್ರದಲ್ಲೇ ದೇಗುಲ ಪುನಾರಂಭ

ವಿಷ ಪ್ರಸಾದ ಪ್ರಕರಣ ನಡೆದ ಮಾರನೇ ದಿನದಿಂದ ದೇವಾಲಯದ ಬಾಗಿಲು ಮುಚ್ಚಿದ್ದು , ಶೀಘ್ರದಲ್ಲಿದೇಗುಲದ ಬಾಗಿಲು ತೆರೆದು ಭಕ್ತರ ಪೂಜೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿಮುಂದಿನ ಹತ್ತು ಹದಿನೈದು ದಿನದೊಳಗೆ ಕ್ರಮ ವಹಿಸಲಾಗುವುದು.

ಕಿಚ್ಚುಗುತ್ತಿ ಮಾರಮ್ಮ ದೇಗುಲವನ್ನು ಸರಕಾರ ಮುಜುರಾಯಿ ಇಲಾಖೆ ಅಧೀನಕ್ಕೊಳಪಡಿಸಿ, ತಹಸೀಲ್ದಾರ್‌ ಅವರನ್ನು ಆಡಳಿತ ಅಧಿಕಾರಿಯನ್ನಾಗಿ ನೇಮಕ ಮಾಡಿದೆ. ಮುಜರಾಯಿ ಇಲಾಖೆ ವತಿಯಿಂದ ದೇವಾಲಯದ ನಿರ್ವಹಣೆಗಾಗಿ ವಿಶೇಷ ಆಡಳಿತಾಧಿಕಾರಿಯಾಗಿ ಸುರೇಶ್‌ ಎಂಬುವರನ್ನು ನೇಮಕ ಮಾಡಲಾಗಿದೆ. ರಾಜ್ಯ ಮುಜರಾಯಿ ಇಲಾಖೆ ಮುಖ್ಯ ಆಗಮ ಪಂಡಿತರಿಂದ ವಿಶೇಷ ಪೂಜೆ ಹೋಮ ಹವನ ನೆರವೇರಿಸಿ ದೇವಾಲಯದಲ್ಲಿನಿತ್ಯದ ಧಾರ್ಮಿಕ ವಿಧಿಗಳನ್ನು ಪುನರಾಂಭಿಸಲಾಗುವುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ