ಆ್ಯಪ್ನಗರ

ಸುರ್‌ಸುರ್‌ ಬತ್ತಿ 16ಕ್ಕೆ ಬಿಡುಗಡೆ

ಸಂಬಂಧಗಳನ್ನು ಬೆಸೆಯುವ ಕಥಾಹಂದರವನ್ನೊಳಗೊಂಡ 'ಸುರ್‌ಸುರ್‌ ಬತ್ತಿ' ಚಲನಚಿತ್ರ ರಾಜ್ಯಾದ್ಯಂತ ನ. 16ರಂದು ತೆರೆಕಾಣಲಿದೆ ಎಂದು ಚಿತ್ರದ ನಾಯಕನಟ ಅರ್ವ(ಬಸವಟ್ಟಿ ಲೋಕೇಶ್‌) ತಿಳಿಸಿದರು.

Vijaya Karnataka 11 Nov 2018, 5:00 am
ಚಾಮರಾಜನಗರ : ಸಂಬಂಧಗಳನ್ನು ಬೆಸೆಯುವ ಕಥಾಹಂದರವನ್ನೊಳಗೊಂಡ 'ಸುರ್‌ಸುರ್‌ ಬತ್ತಿ' ಚಲನಚಿತ್ರ ರಾಜ್ಯಾದ್ಯಂತ ನ. 16ರಂದು ತೆರೆಕಾಣಲಿದೆ ಎಂದು ಚಿತ್ರದ ನಾಯಕನಟ ಅರ್ವ(ಬಸವಟ್ಟಿ ಲೋಕೇಶ್‌) ತಿಳಿಸಿದರು.
Vijaya Karnataka Web sursurbatti film relise on 16
ಸುರ್‌ಸುರ್‌ ಬತ್ತಿ 16ಕ್ಕೆ ಬಿಡುಗಡೆ


ದೀಪಾವಳಿ ಹಬ್ಬದಲ್ಲಿ ಸುರ್‌ಸುರ್‌ ಬತ್ತಿಯನ್ನು ಸುಡುವಾಗ ಅದರ ಪ್ರಕಾಶವಾದ ಬೆಳಕು ಹೇಗೆ ಮನಸ್ಸನ್ನು ಮುದಗೊಳಿಸುತ್ತದೆಯೋ ಅದನ್ನು ಇಟ್ಟುಕೊಂಡು ಚಿತ್ರದ ಕಥೆ ಹೆಣೆಯಲಾಗಿದೆ. ಮೂವರು ಅನಾಥರ ಮಧ್ಯೆ ಸಂಬಂಧ ಹೇಗೆ ಬೆಳೆಯುತ್ತದೆ? ಅದು ಮುಂದೇನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರದುದ್ದಕ್ಕೂ ಹಾಸ್ಯದೃಶ್ಯಗಳು ಖುಷಿ ನೀಡುತ್ತವೆ ಎಂದು ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿರ್ದೇಶಕ ಮುಗಿಲ್‌ ಮಾತನಾಡಿ, ಚಿತ್ರದಲ್ಲಿ 5 ಹಾಡುಗಳಿದ್ದು, ಲೋಕಿಸಂಗೀತ ಒದಗಿಸಿದ್ದಾರೆ. ರಾಮನಗರ, ಕುಶಾಲನಗರ, ಮಡಿಕೇರಿ ಬೆಂಗಳೂರು ಸುತ್ತಮುತ್ತ ಚಿತ್ರಿಸಲಾಗಿದೆ. ನಾಯಕಿಯಾಗಿ ವೈಷ್ಣವಿ, ಸಾಧುಕೋಕಿಲ, ಚಿತ್ರನಿರ್ಮಾಪಕ ಬಿ.ಡಿ.ಕುಮಾರ್‌ ಅವರೇ ಖಳನಟರಾಗಿ ಅಭಿನಯಿಸಿರುವುದು ವಿಶೇಷ ಎಂದರು.

ಜಿಲ್ಲಾ ವಕೀಲರಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌, ಆಲೂರುಮಲ್ಲು, ಕರಿನಂಜನಪುರ ಕೂಸಣ್ಣ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ