ಆ್ಯಪ್ನಗರ

ಸಮನ್ವಯ ಸಮಿತಿ ನಿರ್ಧರಿಸಿದರೆ ಸಿಎಂ ಬದಲಾಗಬಹುದು: ಕೃಷಿ ಸಚಿವ

ಸಮ್ಮಿಶ್ರ ಸರಕಾರದ ನಡುವೆ ಸಮನ್ವಯ ಸಾಧಿಸಲು ರಚಿಸಲಾಗಿರುವ ಸಮನ್ವಯ ಸಮಿತಿ ನಿರ್ಧಾರಗಳು ಬದಲಾದರೆ ಮುಖ್ಯಮಂತ್ರಿಯೂ ಬದಲಾಗಬಹುದು ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

Vijaya Karnataka 28 Aug 2018, 5:00 am
ಚಾಮರಾಜನಗರ: ಸಮ್ಮಿಶ್ರ ಸರಕಾರದ ನಡುವೆ ಸಮನ್ವಯ ಸಾಧಿಸಲು ರಚಿಸಲಾಗಿರುವ ಸಮನ್ವಯ ಸಮಿತಿ ನಿರ್ಧಾರಗಳು ಬದಲಾದರೆ ಮುಖ್ಯಮಂತ್ರಿಯೂ ಬದಲಾಗಬಹುದು ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
Vijaya Karnataka Web the cm may change if the coordination committee decides agriculture minister
ಸಮನ್ವಯ ಸಮಿತಿ ನಿರ್ಧರಿಸಿದರೆ ಸಿಎಂ ಬದಲಾಗಬಹುದು: ಕೃಷಿ ಸಚಿವ


ನಗರದಲ್ಲಿ ಕೃಷಿ ಕಾಲೇಜು ಉದ್ಘಾಟನಾ ಕಾರ್ಯಕ್ರಮದಲ್ಲಿ ಸೋಮವಾರ ಆಗಮಿಸಿದ್ದ ಅವರನ್ನು ಸುದ್ದಿಗಾರರು, ಸಿದ್ದರಾಮಯ್ಯ ಅವರು ಮತ್ತೆ ನಾನೇ ಸಿಎಂ ಎಂದು ಹೇಳಿದ್ದಾರಲ್ಲ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

''ಜಾ.ದಳ, ಕಾಂಗ್ರೆಸ್‌ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ನಮ್ಮ ಉದ್ದೇಶ,'' ಎಂದರು.

''ಇನ್ನು ಬಿಜೆಪಿಯವರು ಯಾವ ಕಾಲಕ್ಕೆ ಸಾಲ ಮನ್ನಾ ಮಾಡಿದ್ದಾರೆ. ಅವರದ್ದು ಬರೀ ಮಾತು ಅಷ್ಟೇ, ಯಡಿಯೂರಪ್ಪ ಅವರು ಹಸಿರು ಶಾಲು ಹಾಕಿಕೊಂಡು ಪ್ರತ್ಯೇಕ ಕೃಷಿ ಕೃಷಿ ಬಜೆಟ್‌ ಮಂಡಿಸಿದರು. ಆದರೆ, ಅದರಿಂದ ಏನಾದರೂ ರೈತರಿಗೆ ಪ್ರಯೋಜನವಾಯಿತಾ ಎಂಬ ಬಗ್ಗೆ ಆಲೋಚಿಸಬೇಕು,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ