ಆ್ಯಪ್ನಗರ

ಶಿಕ್ಷಣ ಕ್ಷೇತ್ರಕ್ಕೆ ಸುತ್ತೂರು ರಾಜೇಂದ್ರ ಶ್ರೀಗಳ ಕೊಡುಗೆ ಅಪಾರ

ಜೆಎಸ್‌ಎಸ್‌ ಶಿಕ್ಷ ಣ ಸಂಸ್ಥೆಯನ್ನು ಸಾಂಸ್ಕೃತಿಕ, ಶೈಕ್ಷ ಣಿಕ ಹಾಗೂ ಆಧ್ಯಾತ್ಮಿಕವಾಗಿ ಕಟ್ಟಿ ಬೆಳೆಸಿದ ಕೀರ್ತಿ ಲಿಂಗ್ಯಕ್ಯ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದು ಮುದ್ದು ವೀರಪ್ಪ ಆಸ್ಪತ್ರೆಯ ಡಾ. ಶಿವರುದ್ರಸ್ವಾಮಿ ಹೇಳಿದರು.

Vijaya Karnataka 30 Sep 2018, 5:00 am
ಕೊಳ್ಳೇಗಾಲ: ಜೆಎಸ್‌ಎಸ್‌ ಶಿಕ್ಷ ಣ ಸಂಸ್ಥೆಯನ್ನು ಸಾಂಸ್ಕೃತಿಕ, ಶೈಕ್ಷ ಣಿಕ ಹಾಗೂ ಆಧ್ಯಾತ್ಮಿಕವಾಗಿ ಕಟ್ಟಿ ಬೆಳೆಸಿದ ಕೀರ್ತಿ ಲಿಂಗ್ಯಕ್ಯ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದು ಮುದ್ದು ವೀರಪ್ಪ ಆಸ್ಪತ್ರೆಯ ಡಾ. ಶಿವರುದ್ರಸ್ವಾಮಿ ಹೇಳಿದರು.
Vijaya Karnataka Web the contribution of rajendra swamiji to the education sector is immense
ಶಿಕ್ಷಣ ಕ್ಷೇತ್ರಕ್ಕೆ ಸುತ್ತೂರು ರಾಜೇಂದ್ರ ಶ್ರೀಗಳ ಕೊಡುಗೆ ಅಪಾರ


ಪಟ್ಟಣದ ಜೆಎಸ್‌ಎಸ್‌ ಕಾಲೇಜಿನಲ್ಲಿ ಅಕ್ಕನಬಳಗ ಆಯೋಜಿಸಿದ್ದ ರಾಜೇಂದ್ರ ಸ್ವಾಮೀಜಿ ಅವರ 103ನೇ ಜನ್ಮದಿನೋತ್ಸವ ಉದ್ಘಾಟಿಸಿ ಮಾತನಾಡಿದರು.

ಶ್ರೀಗಳಿಗಿದ್ದ ಶಿಕ್ಷ ಣ ಕಾಳಜಿ ಫಲವಾಗಿ ಜೆಎಸ್‌ಎಸ್‌ ಶಿಕ್ಷ ಣ ಸಂಸ್ಥೆ ಬೃಹತ್‌ ಸಂಸ್ಥೆಯಾಗಿ ಬೆಳೆದಿದೆ. ಕಾಯಕ ನಿಷ್ಟರಾಗಿದ್ದ ಅವರು ಬಸವಣ್ಣನ ಹಾದಿಯಲ್ಲಿ ನಡೆದು ಸಮಾಜಕ್ಕೆ ಬೆಳಕಾದರು. ಅವರ ತತ್ತ್ವ, ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.

ಹನೂರು ಸಾಹಿತ್ಯ ಪರಿಷತ್‌ ಅಧ್ಯಕ್ಷ ಶಾಂತಮೂರ್ತಿ ಮಾತನಾಡಿ, ರಾಜೇಂದ್ರ ಸ್ವಾಮೀಜಿಯವರು ಬಡವರ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದರು. ಬಡ ವಿದ್ಯಾರ್ಥಿಗಳು ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಬೇಕು. ಈ ಮೂಲಕ ಸಮಾಜಕ್ಕೆ ಅವರು ಕೊಡುಗೆಯಾಗಬೇಕು ಎಂಬ ಕಾರಣಕ್ಕೆ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ ಅವರಿಗೆ ಅನ್ನದಾಸೋಹದ ಜತೆಗೆ ಜ್ಞಾನ ದಾಸೋಹ ನಡೆಸಿದರು. ಶರಣ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಅವರು ಶರಣ ವಿಚಾರಗಳನ್ನು ನಾಡಿನಾದ್ಯಂತ ಪಸರಿಸುವಂತೆ ಮಾಡಲು ಶರಣ ಸಾಹಿತ್ಯ ಪರಿಷತ್‌ ಸ್ಥಾಪಿಸಿದರು. ಅವರ 103ನೇ ಜಯಂತಿಯನ್ನು ಅಕ್ಕನ ಬಳಗದವರು ಆಚರಿಸುತ್ತಿರುವುದ ಅರ್ಥ ಪೂರ್ಣ ಎಂದರು.

ಬಳಗದ ಅಧ್ಯಕ್ಷೆ ರೂಪ ತೋಟೇಶ್‌ ಅಧ್ಯಕ್ಷ ತೆ ವಹಿಸಿದ್ದರು. ಗೀತಾ ಮಂಜುನಾಥ್‌, ಶಿವಲಿಂಗಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ