ಆ್ಯಪ್ನಗರ

ಜಾನಪದ ಗಾಯಕಿ ಮರಿಸಿದ್ದಮ್ಮ ನಿಧನ

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜಾನಪದ ಗಾಯಕಿ ಮರಿಸಿದ್ದಮ್ಮ ಅನಾರೋಗ್ಯದಿಂದ ನಿಧನರಾದರು.

Vijaya Karnataka 17 Aug 2019, 5:00 am
ಹನೂರು: ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜಾನಪದ ಗಾಯಕಿ ಮರಿಸಿದ್ದಮ್ಮ ಅನಾರೋಗ್ಯದಿಂದ ನಿಧನರಾದರು.
Vijaya Karnataka Web CHN-CHN16HNR2


ಹನೂರು ತಾಲೂಕಿನ ಭೈರನತ್ತ ಗ್ರಾಮದ ಮರಿಸಿದ್ದಮ್ಮ (69) ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಇವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಅಂತ್ಯಕ್ರಿಯೆಯನ್ನು ಸ್ವಗ್ರಾಮದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.

ಮರಿಸಿದ್ದಮ್ಮ ಅವರು ಮಂಟೇಸ್ವಾಮಿ ಮತ್ತು ಮಾದೇಶ್ವರರ ಬಿಡಿ ಗೀತೆಗಳನ್ನು ಹಾಡುವುದರಲ್ಲಿ ಹೆಸರುವಾಸಿಯಾಗಿದ್ದರು. ಇವರು ಹಳ್ಳಿಗಳಲ್ಲಿ ಮದುವೆ, ಸಭೆ ಸಮಾರಂಭ, ಗುಡ್ಡನ ಬಿಡಿಸುವುದು, ದಾಸನ ಬಿಡುವುದು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸೋಬಾನೆ ಮರಿಸಿದ್ದಮ್ಮ ಎಂದು ಚಿರಪರಿಚಿತರಾಗಿದ್ದರು. ಸತತ 25 ವರ್ಷಗಳಿಂದ ಜನಪದ ಗೀತೆಗಳನ್ನು ಹಾಡುತ್ತಾ ಬಂದವರು. ಇವರ ಕಂಠಸಿರಿ ಆಕಾಶವಾಣಿಯಲ್ಲಿಯೂ ಕೂಡ ಮೊಳಗಿರುವುದು ಇವರ ಸಾಧನೆಗೆ ಹಿಡಿದ ಕನ್ನಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ