ಆ್ಯಪ್ನಗರ

ಬಸ್‌ನಲ್ಲಿ ಬಿಟ್ಟು ಹೋದ ಚಿನ್ನಾಭರಣ ಹಿಂದಿರುಗಿಸಿದ ನಿರ್ವಾಹಕ

ಬಸ್‌ ಪ್ರಯಾಣದ ವೇಳೆ ಚಿನ್ನಾಭರಣ ಬ್ಯಾಗ್‌ ಮರೆತು ಇಳಿದಿದ್ದ ಪ್ರಯಾಣಿಕರಿಗೆ 2 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಹಿಂದಿರುಗಿಸಿ, ಚಾಲಕ ಮತ್ತು ನಿರ್ವಾಹಕ ಎಂ.ಜಯದೇವ ಪ್ರಾಮಾಣಿಕತೆ ಮೆರೆದಿದ್ದು, ಅವರನ್ನು ರಸ್ತೆ ಸಾರಿಗೆ ಸಂಸ್ಥೆ ಚಾಮರಾಜನಗರ ವಿಭಾಗದ ವಿಭಾಗಿಯ ನಿಯಂತ್ರಣಾಧಿಕಾರಿ ಆರ್‌. ಅಶೋಕ್‌ಕುಮಾರ್‌ ವಿಭಾಗಿಯ ಕಚೇರಿಯಲ್ಲಿ ಸನ್ಮಾನಿಸಿದರು.

Vijaya Karnataka 31 Aug 2018, 5:00 am
ಚಾಮರಾಜನಗರ : ಬಸ್‌ ಪ್ರಯಾಣದ ವೇಳೆ ಚಿನ್ನಾಭರಣ ಬ್ಯಾಗ್‌ ಮರೆತು ಇಳಿದಿದ್ದ ಪ್ರಯಾಣಿಕರಿಗೆ 2 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಹಿಂದಿರುಗಿಸಿ, ಚಾಲಕ ಮತ್ತು ನಿರ್ವಾಹಕ ಎಂ.ಜಯದೇವ ಪ್ರಾಮಾಣಿಕತೆ ಮೆರೆದಿದ್ದು, ಅವರನ್ನು ರಸ್ತೆ ಸಾರಿಗೆ ಸಂಸ್ಥೆ ಚಾಮರಾಜನಗರ ವಿಭಾಗದ ವಿಭಾಗಿಯ ನಿಯಂತ್ರಣಾಧಿಕಾರಿ ಆರ್‌. ಅಶೋಕ್‌ಕುಮಾರ್‌ ವಿಭಾಗಿಯ ಕಚೇರಿಯಲ್ಲಿ ಸನ್ಮಾನಿಸಿದರು.
Vijaya Karnataka Web the manager who returned the gold left on the bus
ಬಸ್‌ನಲ್ಲಿ ಬಿಟ್ಟು ಹೋದ ಚಿನ್ನಾಭರಣ ಹಿಂದಿರುಗಿಸಿದ ನಿರ್ವಾಹಕ


ಕೊಳ್ಳೇಗಾಲದಿಂದ ಬೆಂಗಳೂರಿಗೆ ಬರುವ ಮಾರ್ಗಮಧ್ಯೆ ಮಳವಳ್ಳಿಯಿಂದ ಚನ್ನಪಟ್ಟಣದಿಂದ ಬಂದ ನಾಲ್ವರು ಪ್ರಯಾಣಿಕರ ತಂಡ 2 ಲಕ್ಷ ರೂ. ಮೌಲ್ಯದ 2 ಚಿನ್ನದ ಸರಗಳು, 2 ಕಿವಿಯೋಲೆ, ಜುಮುಕಿ, ಒಂದು ಮೂಗುತಿಯನ್ನು ಬಸ್‌ನಲ್ಲಿ ಮರೆತು ಚನ್ನಪಟ್ಟಣದಲ್ಲಿ ಇಳಿದು ಹೋಗಿದ್ದರು. ಬಸ್‌ ಘಟಕಕ್ಕೆ ಬಂದ ನಂತರ ನಿರ್ವಾಹಕ ಜಯದೇವ ತಪಾಸಣೆ ಮಾಡಿದಾಗ ಸೀಟಿನ ಮೇಲೆ ದೊರೆತ ಬ್ಯಾಗ್‌ ಅನ್ನು ನೋಡಿ, ಸ್ಯಾಟ್‌ಲೈಟ್‌ ನಿಲ್ದಾಣದ ಮೇಲ್ವಿಚಾರಕರಿಗೆ ಸುದ್ದಿಮುಟ್ಟಿಸಿದ್ದಾರೆ. ಟಿಕೆಟ್‌ ಮೂಲಕ ಪ್ರಯಾಣಿಕರ ಗುರುತು ಪತ್ತೆ ಹಚ್ಚಿ ಅವರ ಒಡವೆಗಳನ್ನು ಒಪ್ಪಿಸಿದ್ದಾರೆ

ನಿರ್ವಾಹಕನ ಪ್ರಾಮಾಣಿಕತೆಯನ್ನು ಕೊಂಡಾಡಿ ಸನ್ಮಾನಿಸಲಾಯಿತು. ವಿಭಾಗಿಯ ಸಂಚಾರಾಧಿಕಾರಿ ವೇಣುಗೋಪಾಲ್‌, ಕಾರ್ಮಿಕ ವಿಭಾಗದ ಅಧಿಕಾರಿ ರಶ್ಮಿ, ಉಗ್ರಣಾಧಿಕಾರಿ ಚಂದ್ರಮೌಳಿ, ಸಹಾಯಕ ಅಂಕಿ ಅಂಶ ಅಧಿಕಾರಿ ರೂಪ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ