ಆ್ಯಪ್ನಗರ

ದೇಶದ ಅಭಿವೃದ್ಧಿಯಲ್ಲಿ ಯುವಶಕ್ತಿ ಪಾತ್ರ ದೊಡ್ಡದು

ಯುವ ಸಮುದಾಯದ ಪ್ರೇರಕ ಶಕ್ತಿಯಾಗಿದ್ದ ಸ್ವಾಮಿ ವಿವೇಕಾನಂದರು ನಿತ್ಯ ಸ್ಮರಣೀಯರು ಎಂದು ತಾ.ಪಂ ಮಾಜಿ ಸದಸ್ಯ ಸಿ. ಮಹದೇವ ಪ್ರಸಾದ್‌ ಅಭಿಪ್ರಾಯಪಟ್ಟರು.

Vijaya Karnataka 13 Jan 2019, 5:00 am
ಗುಂಡ್ಲುಪೇಟೆ : ಯುವ ಸಮುದಾಯದ ಪ್ರೇರಕ ಶಕ್ತಿಯಾಗಿದ್ದ ಸ್ವಾಮಿ ವಿವೇಕಾನಂದರು ನಿತ್ಯ ಸ್ಮರಣೀಯರು ಎಂದು ತಾ.ಪಂ ಮಾಜಿ ಸದಸ್ಯ ಸಿ. ಮಹದೇವ ಪ್ರಸಾದ್‌ ಅಭಿಪ್ರಾಯಪಟ್ಟರು.
Vijaya Karnataka Web the youthful character in the countrys development is huge
ದೇಶದ ಅಭಿವೃದ್ಧಿಯಲ್ಲಿ ಯುವಶಕ್ತಿ ಪಾತ್ರ ದೊಡ್ಡದು


ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸ್ವಾಮಿವಿವೇಕಾನಂದರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.

ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ದೊಡ್ಡದು ಎಂಬುದನ್ನು ವಿವೇಕಾನಂದರು ಮನಗಂಡಿದ್ದರು. ಇದೇ ಕಾರಣಕ್ಕೆ ಅವರು ಯುವ ಸಮುದಾಯ ಸ್ಪಷ್ಟ ಗುರಿ ಹೊಂದಬೇಕು ಎಂದು ಸಾರಿದರು. ಆದ್ದರಿಂದ ಯುವ ಸಮುದಾಯ ಸಮಾಜಪರ ಚಿಂತನೆಗಳನ್ನು ನಿಮ್ಮದಾಗಿಸಿಕೊಳ್ಳಬೇಕು. ದೇಶದ ಒಳಿತಗಾಗಿ ದುಡಿಯುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಈ ರೀತಿ ಆದಲ್ಲಿ ವಿವೇಕರ ವಿಚಾರಧಾರೆಗಳು ಜಾರಿ ಸಾಧ್ಯವಾಗುತ್ತದೆ ಎಂದರು.

ಪಕ್ಷ ದ ಯುವ ಘಟಕದ ಅಧ್ಯಕ್ಷ ಬಿ.ಎಂ.ನಂದೀಶ್‌, ಪದಾಧಿಕಾರಿಗಳಾದ ಎಸ್‌.ಸಿ.ಮಂಜುನಾಥ್‌, ಎಸ್‌.ಟಿ.ಮಹದೇವಸ್ವಾಮಿ, ಚಂದ್ರು, ಮಹದೇವಸ್ವಾಮಿ, ನಮೋಮಂಜುನಾಥ್‌, ಬಸವಣ್ಣ, ಅಭಿಷೇಕ್‌, ಬಸವಣ್ಣ, ರಾಜೇಶ, ನಾಗೇಂದ್ರ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ