ಆ್ಯಪ್ನಗರ

ಚಾಮರಾಜನಗರ: ಈ ಬಾರಿಯೂ ಬಿಳಿಗಿರಿ ರಂಗನಾಥಸ್ವಾಮಿ ರಥೋತ್ಸವ ಇಲ್ಲ..!

ಕಳೆದ 4 ವರ್ಷಗಳಿಂದ ಸ್ಥಗಿತಗೊಂಡಿದ್ದ ಬಿಳಿಗಿರಿ ರಂಗನಾಥಸ್ವಾಮಿಯ ರಥೋತ್ಸವವು ಈ ಬಾರಿಯು ರದ್ದಾಗಿದೆ. ಇದಕ್ಕೆ ಕಾರಣ ಕೊರೊನಾ ಹಿನ್ನೆಲೆ ದೇಗಲುದ ಕಾಮಗಾರಿ ಪೂರ್ಣಗೊಳ್ಳದಿರುವುದಾಗಿದೆ. ಸಂಕ್ರಾಂತಿ ಹಬ್ಬದ ಮಾರನೇ ದಿನ ಪ್ರತಿವರ್ಷ ಬಿಳಿಗಿರಿ ರಂಗನಾಥ ಸ್ವಾಮಿ ಚಿಕ್ಕಜಾತ್ರೆ ರಥೋತ್ಸವ ನಡೆಯುತ್ತಿತ್ತು.

Vijaya Karnataka Web 14 Jan 2021, 10:15 am
ಯಳಂದೂರು (ಚಾಮರಾಜನಗರ): ಕೊರೊನಾ ಹಿನ್ನೆಲೆ ದೇಗುಲ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಂಕ್ರಾಂತಿ ಹಬ್ಬದ ಮಾರನೇ ದಿನ ನಡೆಯುತ್ತಿದ್ದ ಬಿಳಿಗಿರಿ ರಂಗನಾಥ ಸ್ವಾಮಿ ಚಿಕ್ಕಜಾತ್ರೆ ರಥೋತ್ಸವ ಈ ಬಾರಿಯೂ ನಡೆಯದಿರುವುದು ಭಕ್ತರಲ್ಲಿ ನಿರಾಸೆ ಮೂಡಿಸಿದೆ.
Vijaya Karnataka Web BiliGiri Ranganath Temple
ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ (ಸಂಗ್ರಹ ಚಿತ್ರ)


ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಬಿಳಿಗಿರಿ ರಂಗನ ಬೆಟ್ಟದಲ್ಲಿ 4 ವರ್ಷಗಳಿಂದ 6 ಜಾತ್ರೆಗಳು ನಡೆಯದೆ ಸ್ಥಗಿತಗೊಂಡಿದೆ. ಕಳೆದ ಬಾರಿ ದೇವಾಲಯದ ಕಾಮಗಾರಿ ಮುಗಿದು ಕಾಶಿ ಮಂಟಪದಲ್ಲಿದ್ದ ತಾತ್ಕಾಲಿಕ ಬಿಳಿಗಿರಿ ರಂಗನಾಥ ಸ್ವಾಮಿ ಹಾಗೂ ಅಲಮೇಲು ಮಂಗಮ್ಮನವರ ವಿಗ್ರಹಕ್ಕೆ 4 ವರ್ಷಗಳಿಂದ ಪೂಜೆ ನಡೆಸಲಾಗುತ್ತಿದೆ.

ಆದರೆ, ಮೂಲ ದೇವರನ್ನು ಬೇರೆಡೆ ಇರಿಸಲಾಗಿದೆ. ಈ ಬಾರಿಯಾದರೂ ಮೂಲ ದೇವರನ್ನು ಗರ್ಭ ಗುಡಿಯಲ್ಲಿ ಇರಿಸಿ ಪೂಜೆ ಮಾಡಲು ಅವಕಾಶ ಸಿಗಲಿದೆ ಎಂದು ಭಕ್ತರು ನಿರೀಕ್ಷೆ ಇಟ್ಟಿದ್ದರು. ಆದರೆ ಈ ಬಾರಿಯೂ ಭಕ್ತರ ಆಸೆ ಈಡೇರಲಿಲ್ಲ. ದೇವಾಲಯದ ಕಾಮಗಾರಿ ಪೂರ್ಣ ಗೊಳ್ಳದೆ ಇರುವುದರಿಂದ ಹಾಗೂ ಕೊರೊನಾ ಹಿನ್ನೆಲೆಯಲ್ಲಿ ಸಂಕ್ರಾಂತಿ ಹಬ್ಬದ ಮರುದಿನ ನಡೆಯುತ್ತಿದ್ದ ಚಿಕ್ಕ ಜಾತ್ರೆಯನ್ನು ನಡೆಸ ದಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದು, ಈ ಬಾರಿಯೂ ರಥೋತ್ಸವ ರದ್ದಾಗಿದೆ.
ಕಾಂಗ್ರೆಸ್‌ಗೆ ಗಾಂಧಿ, ಅಂಬೇಡ್ಕರ್ ಶಾಪ: ನಳಿನ್‌ ಕುಮಾರ್ ಕಟೀಲ್‌ಧಾನ್ಯ ಎರಚುವ ವಾಡಿಕೆ
ಸುಗ್ಗಿ ಕಾಲದಲ್ಲಿ ಬರುವ ರಥೋತ್ಸವ ಸಮಯದಲ್ಲಿ ರೈತರು ಬೆಳೆದ ದವಸ ಧಾನ್ಯಗಳನ್ನು ವಾಡಿಕೆಯಂತೆ ಹರಕೆ ಹೊತ್ತು ಪ್ರತಿ ವರ್ಷ ನಡೆಯುವ ಬಿಳಿಗಿರಿ ರಂಗನಾಥ ದೇಗುಲದ ಚಿಕ್ಕಜಾತ್ರೆ ರಥೋತ್ಸವಕ್ಕೆ ಎರಚಿ ಹರಕೆ ತೀರಿಸುತ್ತಿದ್ದರು. ಆದರೆ 4 ವರ್ಷಗಳಿಂದ ಚಿಕ್ಕಜಾತ್ರೆ ರಥೋತ್ಸವ ಸ್ಥಗಿತವಾಗಿರುವುದರಿಂದ ಭಕ್ತರಿಗೆ ಬೇಸರ ಉಂಟುಮಾಡಿದೆ.
ಚಾಮರಾಜನಗರಕ್ಕೆ ಬಿಎಸ್‌ವೈ ಭೇಟಿ ನೀಡಲಿ, ಇಲ್ಲದಿದ್ದರೆ ಬಸವನನಾಡು ಎಂದು ಪ್ರತ್ಯೇಕ ರಾಜ್ಯ ಮಾಡಲಿಮಾ.24ಕ್ಕೆ ಉದ್ಘಾಟನೆನೂತನವಾಗಿ ನಿರ್ಮಿಸುತ್ತಿರುವ ದೊಡ್ಡ ತೇರು ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ದೇಗುಲದ ಗರ್ಭಗುಡಿ ಕಾಮಗಾರಿ ಪೂರ್ಣಗೊಂಡಿದೆ. ಸುತ್ತ ಸಮತಟ್ಟು ಮಾಡಲಾಗಿದೆ. ಯಾಗ ಶಾಲೆ, ಪಾಕಶಾಲೆಯ ಕಾಮಗಾರಿಯೂ ಮುಗಿದಿದ್ದು, ಸುತ್ತುಗೋಡೆ ಹಾಗೂ ವೈರಿಂಗ್‌ ಕಾಮಗಾರಿ ಪೂರ್ಣಗೊಂಡಿಲ್ಲ ಹಾಗೂ ದಾಸೋಹದ ಹಳೇ ಕಟ್ಟಡವನ್ನೇ ನವೀಕರಣ ಮಾಡಲಾಗಿದೆ. ಆದರೆ, ಸುತ್ತುಗೋಡೆ ಹಾಗೂ ವೈರಿಂಗ್‌ ಕಾಮಗಾರಿ ಪೂರ್ಣ ಗೊಂಡರೆ ಮಾ.24ರಂದು ದೇಗುಲ ಉದ್ಘಾಟನೆ ಯಾಗಲಿದೆ ಎಂದು ಜಿಲ್ಲಾಉಸ್ತುವಾರಿ ಸಚಿವ ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ