ಆ್ಯಪ್ನಗರ

ಟಿಕೆಟ್‌ ವಂಚನೆ ಆರೋಪ

ಜೆಡಿಎಸ್‌ ಪಕ್ಷ ದಲ್ಲಿ ಕಳೆದ 5 ವರ್ಷದಿಂದ ಸಕ್ರಿಯ ಕಾರ್ಯಕರ್ತಳಾಗಿ ದುಡಿದ ನನಗೆ ಈ ಬಾರಿ ನಗರಸಭೆ ಚುನಾವಣೆಯಲ್ಲಿ ಟಿಕೆಟ್‌ ನೀಡುವುದಾಗಿ ಭರವಸೆ ನೀಡಿ ವಂಚಿಸಲಾಗಿದೆ ಎಂದು ಜಾಲಹಳ್ಳಿಹುಂಡಿ ನಾಗಮಣಿ ಆರೋಪಿಸಿದ್ದಾರೆ.

Vijaya Karnataka 21 Aug 2018, 5:00 am
ಚಾಮರಾಜನಗರ : ಜೆಡಿಎಸ್‌ ಪಕ್ಷ ದಲ್ಲಿ ಕಳೆದ 5 ವರ್ಷದಿಂದ ಸಕ್ರಿಯ ಕಾರ್ಯಕರ್ತಳಾಗಿ ದುಡಿದ ನನಗೆ ಈ ಬಾರಿ ನಗರಸಭೆ ಚುನಾವಣೆಯಲ್ಲಿ ಟಿಕೆಟ್‌ ನೀಡುವುದಾಗಿ ಭರವಸೆ ನೀಡಿ ವಂಚಿಸಲಾಗಿದೆ ಎಂದು ಜಾಲಹಳ್ಳಿಹುಂಡಿ ನಾಗಮಣಿ ಆರೋಪಿಸಿದ್ದಾರೆ.
Vijaya Karnataka Web ticket fraud charges
ಟಿಕೆಟ್‌ ವಂಚನೆ ಆರೋಪ


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಪಕ್ಷ ಸಂಘಟನೆ ಜತೆಗೆ ನಾಡು ನುಡಿ ರಕ್ಷ ಣೆಯ ನಾನಾ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ನನಗೆ ಪಕ್ಷ ದ ಮುಖಂಡರು ನಗರಸಭೆ ಚುನಾವಣೆಯಲ್ಲಿ 24ನೇ ವಾರ್ಡ್‌ನಿಂದ ಟಿಕೆಟ್‌ ಕೊಡುವುದಾಗಿ ಭರವಸೆ ನೀಡಿದ್ದರು. ವಾರ್ಡಿನ ಜನರಿಂದಲೂ ಉತ್ತಮ ಸ್ಪಂದನೆ ಸಿಕ್ಕಿತ್ತು. ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿರುವ ವೇಳೆ ಟಿಕೆಟ್‌ ಕೊಡಿಸಬೇಕಾದರೆ ಹಣ ಕೊಡಬೇಕು ಎಂದು ಹೇಳಿ, ಬೇರೆ ಪಕ್ಷ ದಿಂದ ಬಂದವರಿಗೆ ಟಿಕೆಟ್‌ ನೀಡಿ ವಂಚಿಸಿದ್ದಾರೆ,'' ಎಂದು ದೂರಿದರು.

''ಈ ಬಗ್ಗೆ ಪಕ್ಷ ದ ವರಿಷ್ಠ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರ ಗಮನಕ್ಕೂ ತಂದಿದ್ದೇನೆ. ವಂಚಿಸಿದ ಮುಖಂಡರ ವಿರುದ್ಧ ವರಿಷ್ಠರು ಶಿಸ್ತುಕ್ರಮ ಕೈಗೊಳ್ಳಬೇಕು,'' ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಜಾಲಹಳ್ಳಿಹುಂಡಿ ಗೌರಮ್ಮ, ಮಂಜುಳಾ, ಶಿವಣ್ಣ, ಮಧು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ