ಆ್ಯಪ್ನಗರ

ಹುಲಿ ಉಗುರು ಮಾರಾಟ: ಇಬ್ಬರ ಬಂಧನ

ಹುಲಿ ಉಗುರು ಮತ್ತು ನರಿ ಹಲ್ಲುಮಾರಾಟ ಮಾಡಲೆತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನದ ಗುಂಡ್ಲುಪೇಟೆ ಅರಣ ವಲಯ ಅಧಿಕಾರಿಗಳು ಬಂಧಿಸಿದ್ದಾರೆ.

Vijaya Karnataka 1 Nov 2019, 5:00 am
ವಿಕ ಸುದ್ದಿಲೋಕ ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ)
Vijaya Karnataka Web tiger nail sale the arrest of two men
ಹುಲಿ ಉಗುರು ಮಾರಾಟ: ಇಬ್ಬರ ಬಂಧನ


ಹುಲಿ ಉಗುರು ಮತ್ತು ನರಿ ಹಲ್ಲುಮಾರಾಟ ಮಾಡಲೆತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನದ ಗುಂಡ್ಲುಪೇಟೆ ಅರಣ ವಲಯ ಅಧಿಕಾರಿಗಳು ಬಂಧಿಸಿದ್ದಾರೆ.

ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಅಂಗಡಿ ಗ್ರಾಮದವರಾದ ಧವನ್‌(45), ಗೋಕುಲ್‌(21) ಬಂಧಿತ ಆರೋಪಿಗಳು. ಇವರು ಪಟ್ಟಣದಲ್ಲಿಶಂಕಾಸ್ಪದ ರೀತಿಯಲ್ಲಿಓಡಾಡುತ್ತಿದ್ದು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ ನಂತರ ತಪೊ್ಪಪ್ಪಿಕೊಂಡಿದ್ದಾರೆ. ಇವರು ಹಕ್ಕಿಪಿಕ್ಕಿ ಜನಾಂಗದವರು ಎಂಬುದು ವಿಚಾರಣೆ ವೇಳೆ ತಿಳಿಸಿದ್ದಾರೆ. ಆರೋಪಿಗಳಿಂದ 6 ಹುಲಿ ಉಗುರು ಮತ್ತು 5 ನರಿ ಹಲ್ಲುಗಳನ್ನು ವಶಪಡಿಸಿಕೊಳ್ಳಲಾಯಿತು. ನಂತರ ಆರೋಪಿಗಳನ್ನು ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಹಾಜರಿಪಡಿಸಲಾಯಿತು. ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

''ಮೂರು ವರ್ಷಗಳಿಂದ ಹಾಸನ ಜಿಲ್ಲೆಯಲ್ಲಿಸಕ್ರಿಯರಾಗಿದ್ದ ಇವರು ಖಚಿತ ಮಾಹಿತಿ ಹಿನ್ನೆಲೆಯಲ್ಲಿಗುಂಡ್ಲುಪೇಟೆ ಭಾಗದಲ್ಲಿಹುಲಿ ಉಗುರು, ವನ್ಯಪ್ರಾಣಿಗಳ ಇತರೆ ಅಂಗಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ನಿಗಾ ಇಡಲಾಗಿತ್ತು. ಈ ಸಂಬಂಧ ಕೇಸು ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ,'' ಎಂದು ಗುಂಡ್ಲುಪೇಟೆ ವಲಯ ಅರಣ್ಯಾಧಿಕಾರಿ ಡಾ.ಲೋಕೇಶ್‌ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿಡಿಆರ್‌ಎಫ್‌ಒ ಮುದ್ದುರಾಜ್‌, ನೌಕರರಾದ ಹರೀಶ್‌, ಶ್ರೀನಿವಾಸ್‌, ಸಿದ್ದನಾಯಕ, ದೇವರಾಜು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ