ಆ್ಯಪ್ನಗರ

ಚಾಮರಾಜನಗರ: ತೆರಕಣಾಂಬಿ ಸಮೀಪ ಹುಲಿ ಹೆಜ್ಜೆ ಪತ್ತೆ

ಮಳೆ ನೀರು ಹಳ್ಳ ಇತರೆ ಕಡೆಗಳಲ್ಲೂ ಪೊದೆಗಳು ಹೆಚ್ಚಾಗಿ ಬೆಳೆದಿರುವ ಕಾರಣ ಜನಸಂಚಾರ ವಿರಳವಾಗಿರುವುದರಿಂದ ಆಹಾರ ಅರಸಿ ಬಂದಿರುವ ಸಾಧ್ಯತೆ ಇದೆ ಎಂಬುದು ರೈತರ ಅಭಿಪ್ರಾಯವಾಗಿದೆ.

Vijaya Karnataka Web 17 Nov 2020, 10:06 pm
ಗುಂಡ್ಲುಪೇಟೆ (ಚಾ.ನಗರ ಜಿಲ್ಲೆ): ತಾಲೂಕಿನ ತೆರಕಣಾಂಬಿ ಹೊರ ವಲಯದಲ್ಲಿ ಹುಲಿಹೆಜ್ಜೆ ಗುರುತು ಮೂಡಿದ್ದು, ಈ ಭಾಗದ ರೈತರು ಮತ್ತು ತೋಟದ ಮನೆ ನಿವಾಸಿಗಳು ಭೀತಿಗೊಂಡಿದ್ದಾರೆ.
Vijaya Karnataka Web ಹುಲಿ ಹೆಜ್ಜೆ ಗುರುತು
ಹುಲಿ ಹೆಜ್ಜೆ ಗುರುತು


ಗ್ರಾಮದ ತೋಪು (ಸ್ಮಶಾನ)ದಿಂದ ದಕ್ಷಿಣದ ಕಡೆಗೆ ಹೋಗುವ ದಾರಿಯಲ್ಲಿರುವ ಚೆಕ್‌ಡ್ಯಾಂಗೆ ಹೊಂದಿಕೊಂಡ ಪ್ರದೇಶದಲ್ಲಿ ಹುಲಿ ಅತ್ತಿತ್ತ ಅಡ್ಡಾಡಿ, ನಂತರ ಈ ಭಾಗದಲ್ಲೇ ಇರುವ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಹೋಗಿರುವುದು ಮಳೆ ಕಾರಣ ಮೂಡಿರುವ ಹೆಜ್ಜೆ ಗುರುತುಗಳಿಂದ ಸ್ಪಷ್ಟವಾಗಿದೆ.

ಈ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಭೂಮಿ ಬೀಳು ಬಿದ್ದಿವೆ. ಇಲ್ಲಿಚುಕ್ಕಿ ಜಿಂಕೆಗಳು ಮತ್ತು ನವಿಲುಗಳು ಆಶ್ರಯ ಪಡೆದಿವೆ. ಮಳೆ ನೀರು ಹಳ್ಳ ಇತರೆ ಕಡೆಗಳಲ್ಲೂ ಪೊದೆಗಳು ಹೆಚ್ಚಾಗಿ ಬೆಳೆದಿರುವ ಕಾರಣ ಜನಸಂಚಾರ ವಿರಳವಾಗಿರುವುದರಿಂದ ಆಹಾರ ಅರಸಿ ಬಂದಿರುವ ಸಾಧ್ಯತೆ ಇದೆ ಎಂಬುದು ರೈತರ ಅಭಿಪ್ರಾಯವಾಗಿದೆ.

ವರ್ಷದ ಹಿಂದೆ ದೇಪಾಪುರ ತಿರುವಿನಲ್ಲಿ ವಾಯುವಿಹಾರಕ್ಕೆ ಹೋಗಿದ್ದವರಿಗೆ ಹುಲಿ ಕಾಣಿಸಿಕೊಂಡು ಜನರು ಆತಂಕಗೊಂಡಿದ್ದರು. ಇದಾದ ನಂತರ ಮೇಯಲು ಹೋಗಿದ್ದ ಜಾನುವಾರುಗಳು ಮೃತಪಟ್ಟ ಹಿನ್ನೆಲೆಯಲ್ಲಿ ಹುಲಿ ದಾಳಿಯ ಶಂಕೆ ವ್ಯಕ್ತವಾಗುತ್ತಿತ್ತು. ಆದರೆ ಹುಲಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಸೋಮವಾರ ರಾತ್ರಿ ಮಳೆ ಕಾರಣ ಮೂಡಿರುವ ಹೆಜ್ಜೆ ಗುರುತುಗಳಿಂದ ಈ ಭಾಗದಲ್ಲೇ ಹುಲಿ ಸಂಚಾರ ಇರುವುದು ಸ್ಪಷ್ಟವಾಗಿದೆ. ಇದರಿಂದ ನಮಗೆ ಆತಂಕವಾಗಿದೆ ಎಂದು ಸ್ಥಳೀಯ ರೈತರು ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ