ಆ್ಯಪ್ನಗರ

’ಸಾರ್ವಜನಿಕ ಶೌಚಾಲಯ’ ನಿರ್ಮಾಣಕ್ಕೆ ಆಗ್ರಹ

ನಗರಸಭೆ ವ್ಯಾಪ್ತಿಯ ಪ್ರಮುಖ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕæೖಗೆತ್ತಿಕೊಳ್ಳಬೇಕು ಎಂದು ನಗರಸಭೆ ಸದಸ್ಯರು ಒಕ್ಕೂರಲಿನಿಂದ ಆಗ್ರಹಿಸಿದರು.

Vijaya Karnataka 29 Jun 2018, 5:00 am
ಚಾಮರಾಜನಗರ: ನಗರಸಭೆ ವ್ಯಾಪ್ತಿಯ ಪ್ರಮುಖ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕæೖಗೆತ್ತಿಕೊಳ್ಳಬೇಕು ಎಂದು ನಗರಸಭೆ ಸದಸ್ಯರು ಒಕ್ಕೂರಲಿನಿಂದ ಆಗ್ರಹಿಸಿದರು.
Vijaya Karnataka Web news/chamarajnagara/toiletdemand
’ಸಾರ್ವಜನಿಕ ಶೌಚಾಲಯ’ ನಿರ್ಮಾಣಕ್ಕೆ ಆಗ್ರಹ


ನಗರಸಭೆ ಸಭಾಂಗಣದಲ್ಲಿ ಗುರುವಾರ ಶೋಭಾ ಅವರ ಅಧ್ಯಕ್ಷ ತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡದೇ ನಗರಕ್ಕೆ ನಾನಾ ಕಡೆಯಿಂದ ಆಗಮಿಸುವ ಸಾರ್ವಜನಿಕರು ದೇಹಬಾಧೆ ತೀರಿಸಿಕೊಳ್ಳಲು ಸಂದಿಗೊಂದಿಗಳನ್ನು ಹುಡುಕಾಡುವಂತಾಗಿದೆ ಎಂಬ ಅಸಮಾಧಾನ ವ್ಯಕ್ತವಾಯಿತು.

ಇದೇ ಸಂದರ್ಭದಲ್ಲಿ 17ನೇ ವಾರ್ಡ್‌ ಸದಸ್ಯ ಚಂಗುಮಣಿ ತಮ್ಮ ವಾರ್ಡಿನಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೇ, ಬಯಲು ಶೌಚ ಅವ್ಯಾಹತವಾಗಿ ನಡೆಯುತ್ತಿದೆ, ಕಳೆದ 4 ವರ್ಷದಿಂದಲೂ ಒಂದೇ ಒಂದು ಸಾರ್ವಜನಿಕ ಶೌಚಾಲಯ ನಿರ್ಮಿಸಲಿಲ್ಲ ಎಂದರೆ ಏನು ಪ್ರಯೋಜನ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯರ ಮಾತಿಗೆ ಪ್ರತಿಕ್ರಿಯಿಸಿದ ಎಇಇ ಸತ್ಯಮೂರ್ತಿ, ನಗರಸಭೆ ವ್ಯಾಪ್ತಿಯಲ್ಲಿ 26 ಸಾರ್ವಜನಿಕ ಶೌಚಾಲಯ ನಿರ್ಮಿಸಲು ಟೆಂಡರ್‌ ಕರೆಯಲಾಗಿದ್ದು, 7ಕ್ಕೆ ಕಾಮಗಾರಿ ಆದೇಶ ನೀಡಲಾಗಿದೆ ಎಂದರು.

ಹಿರಿಯ ಸದಸ್ಯ ಎಸ್‌.ನಂಜುಂಡಸ್ವಾಮಿ ಮಾತನಾಡಿ, ನಗರದ ಹಳೇ ಖಾಸಗಿ ಬಸ್‌ ನಿಲ್ದಾಣದಲ್ಲಿರುವ ಮಹಾವೀರ ಕಲ್ಯಾಣ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದ ಸಾರ್ವಜನಿಕ ಶೌಚಾಲಯವನ್ನು ನಗರಸಭೆ ಮತ್ತು ಜಿಲ್ಲಾಧಿಕಾರಿಯವರು 5 ವರ್ಷಕ್ಕೆ ನಿರ್ಣಯ ಮಾಡಿ, ಟೆಂಡರ್‌ ನೀಡಲಾಗಿತ್ತು. ಅಗ್ರಿಮೆಂಟ್‌ನಲ್ಲಿ 15 ವರ್ಷಕ್ಕೆ ಅಂತ ಬರೆದುಕೊಡಲಾಗಿದೆ, ಸುಳ್ಳು ದಾಖಲೆ ಸೃಷ್ಟಿಸಿ ಹಣ ದೋಚುವ ಹುನ್ನಾರ ನಡೆಸಲಾಗಿದೆ, ಕೂಡಲೇ ಪೌರಾಯುಕ್ತರು ಇದಕ್ಕೆ ಸಂಬಂಧಪಟ್ಟ ಹಾಗೇ ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜತೆಗೆ ಸಾಮೂಹಿಕ ಶೌಚಾಲಯ ನಿರ್ಮಾಣವಾಗುವವರೆಗೆ ಈಗಾಗಲೇ ಬಂದ್‌ ಆಗಿರುವ ಹಳೇ ಖಾಸಗಿ ಬಸ್‌ ನಿಲ್ದಾಣದಲ್ಲಿರುವುದನ್ನು ನಗರಸಭೆಯ ಸುಪರ್ದಿಗೆ ತೆಗೆದುಕೊಂಡು ಸಾರ್ವಜನಿಕರ ಉಪಯೋಗಕ್ಕೆ ಕೊಡಬೇಕು ಎಂದರು.

ಪೌರಾಯುಕ್ತೆ ಫೌಜಿಯಾ ತರನ್ನುಮ್‌' ಮಾತನಾಡಿ, ಹಳೇ ಖಾಸಗಿ ಬಸ್‌ ನಿಲ್ದಾಣದ ಸಾರ್ವಜನಿಕ ಶೌಚಾಲಯ ಸಮಸ್ಯೆ ಕುರಿತಂತೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ತಿಳಿಸಿದರು.

ಪೌರ ಕಾರ್ಮಿಕರ ಕಷ್ಟ ಆಲಿಸಿ; ನಗರಸಭೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಕಳೆದ 9 ತಿಂಗಳಿಂದ ವೇತನ ನೀಡದೇ ಅವರು ಜೀವನ ನಿರ್ವಹಿಸುವುದೇ ಕಷ್ಟವಾಗಿದೆ ಎಂದು ಸದಸ್ಯರಾದ ಮಹೇಶ್‌, ಸೈಯ್ಯದ್‌ ಆರಿಫ್‌ ಸಭೆಗೆ ಮನವರಿಕೆ ಮಾಡಿಕೊಟ್ಟರು.

ಪರಿಸರ ಎಂಜಿನಿಯರ್‌ ಗಿರಿಜಾ ಮಾತನಾಡಿ, ಪೌರ ಕಾರ್ಮಿಕರಿಗೆ ವೇತನ ನೀಡುವುದನ್ನು ಆನ್‌ಲೈನ್‌ ಮಾಡಲಾಗಿದೆ, ಇದು ಚಾಮರಾಜನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ರಾಜ್ಯದ ಸಮಸ್ಯೆ ಹಾಗಾಗಿ ವೇತನ ನೀಡುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೂಲ ಸೌಕರ್ಯ ಕಲ್ಪಿಸಿ; ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ಐಡಿಎಸ್‌ಎಂಟಿ ವತಿಯಿಂದ ಮಾಂಸ ಮೀನು ಮಾರಾಟ ಮಾಡುವ 16 ಮಳಿಗೆ ನಿರ್ಮಿಸಿದ್ದು, ಅದರಲ್ಲಿ 1 ಮಳಿಗೆಗೆ ಮೀಟರ್‌ ಅಳವಡಿಸಿದ್ದು, ಉಳಿದ ಮಳಿಗೆಗಳನ್ನು ಬಹಿರಂಗ ಹರಾಜು ಮಾಡಿ ವಿಲೇವಾರಿ ಮಾಡುವ ವಿಚಾರ ಚರ್ಚೆಗೆ ಬಂತು. ಆ ವೇಳೆ ಸದಸ್ಯ ಮಹೇಶ್‌, ಮಾಂಸ ಮೀನು ಮಾರಾಟ ಮಾಡುವ 16 ಮಳಿಗೆ ನಿರ್ಮಿಸಲಾಗಿದ್ದು, ಅವುಗಳಿಗೆ ಮೂಲಸೌಕರ್ಯ ಕಲ್ಪಿಸಿಲ್ಲ. ಅದನ್ನು ಕಲ್ಪಿಸಿದ ನಂತರ ಬಹಿರಂಗ ಹರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಆರ್‌.ಎಂ.ರಾಜಪ್ಪ, ನಗರಸಭೆ ಎಂಜಿನಿಯರ್‌, ಎಲ್ಲ ವಾರ್ಡಿನ ಸದಸ್ಯರು ಹಾಜರಿದ್ದರು.

ಸರ್ವಸದಸ್ಯರ ಒಪ್ಪಿಗೆ

ಸಾಮಾನ್ಯ ಸಭೆಯಲ್ಲಿ ಅಜೆಂಡಾದಲ್ಲಿ ಪ್ರಸ್ತಾಪಿಸಿದ್ದ ಬೀದಿಬದಿ ವ್ಯಾಪಾರಿ, ಕಾರು ಹಾಗೂ ಗೂಡ್ಸ್‌ ಆಟೋ ನಿಲ್ದಾಣ ಸ್ಥಳಾಂತರ ಮಾಡುವ ನಾನಾ ವಿಚಾರಗಳನ್ನು ಸದಸ್ಯರು ಅನುಮೋದಿಸಿದರು. ಕಾರು ನಿಲ್ದಾಣವನ್ನು ಗ್ರಾಮಾಂತರ ಪೊಲೀಸ್‌ ಠಾಣೆ ಹಿಂಭಾಗಕ್ಕೆ, ಈಗಿರುವ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವ ಮಾರಾಟಗಾರರನ್ನು ಹಳೇ ಖಾಸಗಿ ಬಸ್‌ ನಿಲ್ದಾಣಕ್ಕೆ ಸ್ಥಳಾಂತರ ಮಾಡುವುದು, ನಗರಸಭೆ ಕಚೇರಿಯ ಕೆಳಭಾಗ ಹಾಗೂ ಖಾಸಗಿ ಬಸ್‌ ನಿಲ್ದಾಣದ ಅಂಗಡಿ ಮಳಿಗೆಗಳ ಅವಧಿ ಮುಗಿದಿದ್ದು, ಹಾಲಿಯಿರುವವರಿಗೆ ಹೆಚ್ಚಿನ ಬಾಡಿಗೆ ದರ ನಿಗದಿಪಡಿಸಿ ಬಹಿರಂಗ ಹರಾಜು ಮಾಡುವುದಕ್ಕೆ ಸದಸ್ಯರು ಅನುಮೋದನೆ ನೀಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ