ಜಿಲ್ಲಾಭಿವೃದ್ಧಿಗೆ ಆಗ್ರಹಿಸಿ ವಾಟಾಳ್ ಮನವಿ
ಚಾಮರಾಜನಗರ ಸಮಗ್ರ ಅಭಿವೃದ್ಧಿಗಾಗಿ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷ ದ ಅಧ್ಯಕ್ಷ ವಾಟಾಳ್ ನಾಗರಾಜ್ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka 22 Jun 2019, 5:00 am
ಚಾಮರಾಜನಗರ: ಚಾಮರಾಜನಗರ ಸಮಗ್ರ ಅಭಿವೃದ್ಧಿಗಾಗಿ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷ ದ ಅಧ್ಯಕ್ಷ ವಾಟಾಳ್ ನಾಗರಾಜ್ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರನ್ನು ಭೇಟಿ ಮಾಡಿದ ಅವರು, ಚಾ.ನಗರ ಜಿಲ್ಲೆ ಅಭಿವೃದ್ಧಿ ಕುರಿತು ಮನವಿ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಚಾಮರಾಜನಗರ ಜಿಲ್ಲೆ ಹಿಂದುಳಿದ ಗಡಿ ಪ್ರದೇಶವಾಗಿದ್ದು, ಬಹಳ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿವೆ. ಚಾಮರಾಜನಗರವು ಜಿಲ್ಲೆಯಾಗಲು ನನ್ನ ಶ್ರಮವು ಸಹ ಅಪಾರವಾಗಿದೆ. ಈ ಜಿಲ್ಲೆಗೆ ವಿಶೇಷ ಅನುದಾನ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಒಂದು ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿದರು.
ಚಾಮರಾಜನಗರ ತೀವ್ರ ಭೀಕರ ಬರಗಾಲವಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವು ತ್ವರಿತವಾಗಿ ವ್ಯವಸ್ಥೆ ಮಾಡಬೇಕಾದ ಪರಿಸ್ಥಿತಿ ಇದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ನಗರದಲ್ಲಿ ಪ್ರತಿನಿತ್ಯ ಕಾವೇರಿ ನೀರು ಬಿಡಬೇಕು. ಕೆರಗಳಿಗೆ ನೀರು ತುಂಬಿಸುವಲ್ಲಿ ಸರಕಾರಗಳು ವಿಫಲವಾಗಿವೆ. ಪ್ರತಿಹಳ್ಳಿಹಳ್ಳಿಯಲ್ಲೂ ತಕ್ಷ ಣ ಕೊಳವೆಬಾವಿ ಕೊರೆಸಿ ಸಂಪೂರ್ಣ ನೀರು ಕೊಡಬೇಕು. ನಗರದಲ್ಲಿ ಒಳಚರಂಡಿ ಕಾಮಗಾರಿ ಅವೈಜ್ಞಾನಿವಾಗಿದ್ದು ಪರಿಣಾಮಕಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಪ್ರತಿಹಳ್ಳಿಹಳ್ಳಿಗಳಿಗೆ ಭೇಟಿ ಅಲ್ಲಿನ ಕುಂದುಕೊರತಗಳನ್ನು ಆಲಿಸಿ ಸರಕಾರದ ಗಮನ ಸೆಳೆಯಲಾಗುವುದು. ಅಲ್ಲದೆ ಚಾಮರಾಜನಗರ ನಗರಸಭಾ ವ್ಯಾಪ್ತಿಯ ಎಲ್ಲ ವಾರ್ಡ್ಗಳಿಗೂ ಭೇಟಿ ನೀಡಲಾಗುವುದು ಎಂದರು.
ಈ ಸಂದಭದಲ್ಲಿ ದಳಪತಿ ವೀರತಪ್ಪ, ಕಾರ್ನಾಗೇಶ್, ಚಾ.ರಂ. ಶ್ರೀನಿವಾಸಗೌಡ, ಶಿವಲಿಂಗಮೂರ್ತಿ, ಗು.ಪುರುಷೋತ್ತಮ, ಚಿಕ್ಕಲಿಂಗಪ್ಪ, ನಾಗರಾಜಮೂರ್ತಿ, ವರದರಾಜು, ಗೋವಿಂದರಾಜು, ನಾಗರಾಜು ಇತರರು ಹಾಜರಿದ್ದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರನ್ನು ಭೇಟಿ ಮಾಡಿದ ಅವರು, ಚಾ.ನಗರ ಜಿಲ್ಲೆ ಅಭಿವೃದ್ಧಿ ಕುರಿತು ಮನವಿ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಚಾಮರಾಜನಗರ ಜಿಲ್ಲೆ ಹಿಂದುಳಿದ ಗಡಿ ಪ್ರದೇಶವಾಗಿದ್ದು, ಬಹಳ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿವೆ. ಚಾಮರಾಜನಗರವು ಜಿಲ್ಲೆಯಾಗಲು ನನ್ನ ಶ್ರಮವು ಸಹ ಅಪಾರವಾಗಿದೆ. ಈ ಜಿಲ್ಲೆಗೆ ವಿಶೇಷ ಅನುದಾನ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಒಂದು ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿದರು.
ಚಾಮರಾಜನಗರ ತೀವ್ರ ಭೀಕರ ಬರಗಾಲವಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವು ತ್ವರಿತವಾಗಿ ವ್ಯವಸ್ಥೆ ಮಾಡಬೇಕಾದ ಪರಿಸ್ಥಿತಿ ಇದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ನಗರದಲ್ಲಿ ಪ್ರತಿನಿತ್ಯ ಕಾವೇರಿ ನೀರು ಬಿಡಬೇಕು. ಕೆರಗಳಿಗೆ ನೀರು ತುಂಬಿಸುವಲ್ಲಿ ಸರಕಾರಗಳು ವಿಫಲವಾಗಿವೆ. ಪ್ರತಿಹಳ್ಳಿಹಳ್ಳಿಯಲ್ಲೂ ತಕ್ಷ ಣ ಕೊಳವೆಬಾವಿ ಕೊರೆಸಿ ಸಂಪೂರ್ಣ ನೀರು ಕೊಡಬೇಕು. ನಗರದಲ್ಲಿ ಒಳಚರಂಡಿ ಕಾಮಗಾರಿ ಅವೈಜ್ಞಾನಿವಾಗಿದ್ದು ಪರಿಣಾಮಕಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಪ್ರತಿಹಳ್ಳಿಹಳ್ಳಿಗಳಿಗೆ ಭೇಟಿ ಅಲ್ಲಿನ ಕುಂದುಕೊರತಗಳನ್ನು ಆಲಿಸಿ ಸರಕಾರದ ಗಮನ ಸೆಳೆಯಲಾಗುವುದು. ಅಲ್ಲದೆ ಚಾಮರಾಜನಗರ ನಗರಸಭಾ ವ್ಯಾಪ್ತಿಯ ಎಲ್ಲ ವಾರ್ಡ್ಗಳಿಗೂ ಭೇಟಿ ನೀಡಲಾಗುವುದು ಎಂದರು.
ಈ ಸಂದಭದಲ್ಲಿ ದಳಪತಿ ವೀರತಪ್ಪ, ಕಾರ್ನಾಗೇಶ್, ಚಾ.ರಂ. ಶ್ರೀನಿವಾಸಗೌಡ, ಶಿವಲಿಂಗಮೂರ್ತಿ, ಗು.ಪುರುಷೋತ್ತಮ, ಚಿಕ್ಕಲಿಂಗಪ್ಪ, ನಾಗರಾಜಮೂರ್ತಿ, ವರದರಾಜು, ಗೋವಿಂದರಾಜು, ನಾಗರಾಜು ಇತರರು ಹಾಜರಿದ್ದರು.