ಆ್ಯಪ್ನಗರ

ಸ್ವಾಮೀಜಿಯೇ ವಿಲನ್‌

ರಾಷ್ಟ್ರವ್ಯಾಪಿ ಗಮನ ಸೆಳೆದ ಸುಳವಾಡಿ ವಿಷ ಪ್ರಸಾದ ದುರಂತಕ್ಕೆ ಮಾರಮ್ಮ ದೇವಾಲಯ ಟ್ರಸ್ಟ್‌ ಅಧ್ಯಕ್ಷನೂ ಆಗಿರುವ ಸಾಲೂರು ಮಠದ ಕಿರಿಯ ಸ್ವಾಮೀಜಿ ಮಹದೇವ ಸ್ವಾಮಿಯೇ ಮುಖ್ಯ ಸಂಚುಕೋರ ಎಂಬುದು ಬಯಲಾಗಿದೆ. ಈತನ ಆದೇಶದಂತೆ ವಿಷವಿಕ್ಕಿದ ಅಂಬಿಕಾ(35), ಈಕೆಯ ಪತಿ ಹಾಗೂ ಟ್ರಸ್ಟ್‌ ವ್ಯವಸ್ಥಾಪಕ ಮಾದೇಶ (46)ಮತ್ತು ಅರ್ಚಕ ದೊಡ್ಡಯ್ಯ ತಂಬಡಿ (35) ಅವರನ್ನು ಪೊಲೀಸರು ಬಂಧಿಸಿದ್ದಾರೆ.

Vijaya Karnataka 20 Dec 2018, 12:44 am
ಸುಳವಾಡಿ ಪ್ರಕರಣ: ದೇಗುಲದ ಗಂಟಿಗಾಗಿ ಭಕ್ತರಿಗೆ ವಿಷವಿಕ್ಕಿದರು
Vijaya Karnataka Web villen of swamiji
ಸ್ವಾಮೀಜಿಯೇ ವಿಲನ್‌

ಟ್ರಸ್ಟ್‌ ಅಧ್ಯಕ್ಷ, ಮ್ಯಾನೇಜರ್‌, ಆತನ ಪತ್ನಿ ಸೇರಿ ನಾಲ್ವರ ಬಂಧನ


ಚಾಮರಾಜನಗರ: ರಾಷ್ಟ್ರವ್ಯಾಪಿ ಗಮನ ಸೆಳೆದ ಸುಳವಾಡಿ ವಿಷ ಪ್ರಸಾದ ದುರಂತಕ್ಕೆ ಮಾರಮ್ಮ ದೇವಾಲಯ ಟ್ರಸ್ಟ್‌ ಅಧ್ಯಕ್ಷನೂ ಆಗಿರುವ ಸಾಲೂರು ಮಠದ ಕಿರಿಯ ಸ್ವಾಮೀಜಿ ಮಹದೇವ ಸ್ವಾಮಿಯೇ ಮುಖ್ಯ ಸಂಚುಕೋರ ಎಂಬುದು ಬಯಲಾಗಿದೆ. ಈತನ ಆದೇಶದಂತೆ ವಿಷವಿಕ್ಕಿದ ಅಂಬಿಕಾ(35), ಈಕೆಯ ಪತಿ ಹಾಗೂ ಟ್ರಸ್ಟ್‌ ವ್ಯವಸ್ಥಾಪಕ ಮಾದೇಶ (46)ಮತ್ತು ಅರ್ಚಕ ದೊಡ್ಡಯ್ಯ ತಂಬಡಿ (35) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ದೇಗುಲದ ಆದಾಯದ ಮೇಲೆ ಕಣ್ಣಿಟ್ಟಿದ್ದ ಟ್ರಸ್ಟ್‌ ಅಧ್ಯಕ್ಷ ಇಮ್ಮಡಿ ಮಹದೇವ ಸ್ವಾಮಿಯ(52) ದುಷ್ಟ ತಂತ್ರದಿಂದಲೇ 15 ಅಮಾಯಕ ಜೀವಗಳ ಸಾವು ಸಂಭವಿಸಿದೆ ಎಂದು ತನಿಖೆಯಿಂದ ದೃಢಪಟ್ಟಿದೆ.

ಘಟನೆಗೆ ಒಂದು ವಾರ ಮುಂಚೆಯೇ ಪ್ರಸಾದದಲ್ಲಿ ವಿಷ ಮಿಶ್ರಣ ಮಾಡುವ ಯೋಜನೆಯನ್ನು ಆರೋಪಿಗಳು ರೂಪಿಸಿದ್ದರು. ಹೀಗಾಗಿ ಪ್ರತಿಯೊಂಧಿದನ್ನು ಯೋಜನಾಬದ್ಧವಾಗಿ ಮಾಡಿ, ಈ ದುರಂತಕ್ಕೆ ಕಾರಣರಾಗಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಆರೋಪಿಗಳ ಹಿನ್ನೆಲೆಯನ್ನು ಕೆದಕಿದಾಗ ಹಲವು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಚಾರವೂ ಬಯಲಾಗಿದೆ. ದಕ್ಷಿಣ ವಲಯ ಐಜಿಪಿ ಶರತ್‌ಚಂದ್ರ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಆರೋಪಿಗಳ ಬಂಧನ ವಿವರ ನೀಡಿದರು.

‘‘ತನಿಖೆ ವೇಳೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಯಿತು. ಈ ಪ್ರಕರಣದಲ್ಲಿ ಮತ್ಯಾರ ಕೈವಾಡ ಇರಬಹುದು ಎಂಬ ಬಗ್ಗೆ ಕುರಿತು ತನಿಖೆ ಮುಂದುವರಿಯಲಿದೆ,’’ ಎಂದು ಐಜಿಪಿ ತಿಳಿ­ಧಿಸಿದರು ಜಿಲ್ಲಾ ಪೊಲೀಸ್‌ ವರಿಷ್ಠಾಧಿ­ಕಾರಿ ಧರ್ಮೇಂದ್ರ ಕುಮಾರ್‌ ಮೀನಾ, ಹೆಚ್ಚು­ವರಿ ಎಸ್ಪಿ ಗೀತಾ ಪ್ರಸನ್ನ, ಡಿವೈಎಸ್ಪಿಗಳಾದ ಪುಟ್ಟಮಾದಯ್ಯ, ಜಯಕುಮಾರ್‌ ಹಾಗೂ ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ವಿಷ ಪ್ರಸಾದ ಉದ್ದೇಶವೇನು?

ಟ್ರಸ್ಟ್‌ ಅಧ್ಯಕ್ಷ ಇಮ್ಮಡಿ ಮಹದೇವ ಸ್ವಾಮಿ ಮತ್ತು ಉಳಿದ ಟ್ರಸ್ಟ್‌ಗಳಿಗೆ ಹಿಂದಿನಿಂಧಿದಲೂ ಇದ್ದ ಭಿನ್ನಾಭಿಪ್ರಾಯ ಗೋಪುರ ನಿರ್ಮಾಣ ವಿಷಯದಲ್ಲಿ ತಾರಕಕ್ಕೇರಿತ್ತು. ಸ್ವಾಮೀಜಿಯ 1.5 ಕೋಟಿ ಗಾತ್ರದ ಯೋಜನೆಯನ್ನು ಇತರ ಟ್ರಸ್ಟಿಗಳು ಒಪ್ಪದೆ ತಮ್ಮದೇ ಮಾದರಿಯ ಗೋಪುರ ನಿರ್ಮಾಧಿಣಕ್ಕೆ ಮುಂದಾದರು. ಡಿ. 14ರಂದು ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಹಾಳು ಮಾಡಿ ಟ್ರಸ್ಟಿಗಳನ್ನು ಜೈಲಿಗೆ ಕಳುಹಿಸಲು ಮತ್ತು ದೇಗುಲದ ಆಸ್ತಿಗೆ ಕನ್ನ ಹಾಕಲು ಹುಟ್ಟಿದ್ದೇ ಈ ವಿಷ ಪ್ರಸಾದ ಪ್ಲ್ಯಾನ್‌.

15 ಕೆಜಿ ಭಾತ್‌ಗೆ ಅರ್ಧ ಲೀಟರ್‌ ವಿಷ!

ದೇಗುಲದಲ್ಲಿ 15 ಕೆಜಿ ಅಕ್ಕಿಯಲ್ಲಿ ತಯಾರಿಸಿದ ರೈಸ್‌ ಭಾತ್‌ಗೆ 500 ಮಿ.ಲೀ. ಕೀಟ ನಾಶಕ ಸುರಿಯಲಾಗಿತ್ತು. 100ರಿಂದ 120 ಮಂದಿ ಅದನ್ನು ಸ್ವೀಕರಿಸಿಧಿದ್ದಾರೆ.

ಕೈ ಜೋಡಿಸಿದ ಅಂಬಿಕಾ, ಮಾದೇಶ

ಸ್ವಾಮಿಯ ಕುತಂತ್ರಕ್ಕೆ ಬಳಕೆಯಾಧಿಗಿದ್ದು ಮ್ಯಾನೇಜರ್‌ ಮಾದೇಶನ ಪತ್ನಿ ಅಂಬಿಕಾ. ಒಂದೇ ಊರಿನವಧಿರಾದ ಸ್ವಾಮಿ- ಅಂಬಿಕಾ ಮಧ್ಯೆ ಹಿಂದಿನಿಂದಲೂ ಆತ್ಮೀಯತೆ ಇತ್ತು.

ಕೃಷಿ ಅಧಿಕಾರಿಯಿಂದ ಬಂದಿತ್ತು ಕೀಟನಾಶಕ

ವಾರದ ಹಿಂದೆಯೇ ಪ್ಲ್ಯಾನ್‌ ಮಾಡಿ, ಅಂಬಿಕಾ ಮನೆಯ ಗಿಡಗಳಿಗೆಂದು ಸಂಬಂಧಿಕ ಕೃಷಿ ಅಧಿಕಾರಿ ಮೂಲಕ ಕೀಟನಾಶಕ ತರಿಸಿದ್ದಳು.

ಮಿಶ್ರಣ ಮಾಡಿದ್ದು ಅರ್ಚಕ ದೊಡ್ಡಯ್ಯ

ಟ್ರಸ್ಟ್‌ನಲ್ಲಿರುವ ಚಿನ್ನಪ್ಪಿ ಜತೆ ದ್ವೇಷ ಹೊಂದಿರುವ ದೊಡ್ಡಯ್ಯ ತಂಬಡಿ ರೈಸ್‌ ಭಾತ್‌ಗೆ ಕೀಟನಾಶಕ ಮಿಶ್ರಣ ಮಾಡಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ