ಆ್ಯಪ್ನಗರ

ಅಡ್ಡಾದಿಡ್ಡಿ ಸಂಚಾರ: ಪ್ರಾಣಕ್ಕೆ ಸಂಚಕಾರ

ಪಟ್ಟಣದ ರಾಷ್ಟ್ರೀಯ ಹೆದ್ದಾರಿ 209ರ ರಸ್ತೆ ಅಗಲೀಕರಣ ಮಾಡಿದ ನಂತರವೇ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಲೇ ಇವೆ. ಸಂಚಾರದ ನಿಯಮಗಳನ್ನು ಅರಿಯದೆ ಟ್ರ್ಯಾಕ್ಟರ್‌, ಲಾರಿ, ಬಸ್‌ಗಳು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆಯುವುದರಿಂದ ಹೆಚ್ಚಿನ ಅಪಘಾತಗಳು ಸಂಭಸುತ್ತಿವೆ.

Vijaya Karnataka 22 May 2019, 5:00 am
ಡಿ.ಪಿ. ಶಂಕರ್‌ ಯಳಂದೂರು
Vijaya Karnataka Web CHN-CHN21YLD1


ಪಟ್ಟಣದ ರಾಷ್ಟ್ರೀಯ ಹೆದ್ದಾರಿ 209ರ ರಸ್ತೆ ಅಗಲೀಕರಣ ಮಾಡಿದ ನಂತರವೇ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಲೇ ಇವೆ. ಸಂಚಾರದ ನಿಯಮಗಳನ್ನು ಅರಿಯದೆ ಟ್ರ್ಯಾಕ್ಟರ್‌, ಲಾರಿ, ಬಸ್‌ಗಳು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆಯುವುದರಿಂದ ಹೆಚ್ಚಿನ ಅಪಘಾತಗಳು ಸಂಭಸುತ್ತಿವೆ.

ಪಟ್ಟಣದ ಸರಕಾರಿ ಆಸ್ಪತ್ರೆಯಿಂದ ಕೆಸ್ತೂರಿಗೆ ತೆರಳುವ ರಸ್ತೆ ತಿರುವಿನಲ್ಲಿ ಹೆಚ್ಚಾಗಿ ಅಪಘಾತ ಸಂಭವಿಸಿವೆ, ಇಲ್ಲಿ ಯಾವುದೇ ಸಿಗ್ನಲ್‌ ಇಲ್ಲ, ರಸ್ತೆ ಡುಬ್ಬ ನಿರ್ಮಿಸಿಲ್ಲ ಹಾಗೂ ರಾತ್ರಿ ವೇಳೆಯಲ್ಲಿ ಲೈಟ್‌ ಇಲ್ಲದೆ ಇರುವುದರಿಂದ ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನ ಸವಾರರು ಸಂಚಾರದ ನಿಯಮದ ಅರಿವಿಲ್ಲದೆ ಅತೀ ವೇಗದಿಂದ ಸಂಚರಿಸುತ್ತಾರೆ. ಸರಕಾರಿ ಆಸ್ಪತ್ರೆಗೆ ಗ್ರಾಮೀಣ ಭಾಗದ ಜನರೇ ಹೆಚ್ಚಾಗಿ ಬರುತ್ತಾರೆ. ಈ ವೇಳೆ ರಸ್ತೆ ದಾಟುವಾಗ ಅತೀ ವೇಗದಲ್ಲಿ ವಾಹನಗಳು ಸಂಚರಿಸುತ್ತವೆ. ಆದ್ದರಿಂದ ಅಪಘಾತಗಳು ಸಂಭವಿಸುತ್ತಿವೆ. ತಾಲೂಕಿನ ಎಳೆ ಪಿಳ್ಳಾರಿವರೆಗೆ ಹಾಗೂ ಕಂದಹಳ್ಳಿ, ಮೆಳ್ಳಹಳ್ಳಿ ಗೇಟ್‌ವರೆಗೆ 2017-19ನೇ ಸಾಲಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ 25 ಮಂದಿ ಮೃತಪಟ್ಟಿದ್ದು, 70 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಮಹಿಳೆಯರು ಹಾಗೂ ಯುವಕರೇ ಹೆಚ್ಚಾಗಿ ಮೃತಪಟ್ಟಿದ್ದಾರೆ.

ಪಟ್ಟಣದ ಬಸ್‌ ನಿಲ್ದಾಣ, ಅರಣ್ಯ ಇಲಾಖೆ ಮುಂಭಾಗ, ಪಟ್ಟಣದಿಂದ ಕೆಸ್ತೂರಿಗೆ ತೆರಳುವ ತಿರುವಿನಲ್ಲಿ ಯರಿಯೂರು ಗ್ರಾಮದ ಬಳಿ, ಧನಲಕ್ಷ್ಮಿ ಪೆಟ್ರೋಲ್‌ ಬಂಕ್‌ ಬಳಿ, ಮೆಳ್ಳಹಳ್ಳಿ ಗೇಟ್‌ ಬಳಿ, ವೈ.ಕೆ. ಮೋಳೆ ರಸ್ತೆ, ಕೃಷ್ಣಾಪುರ ಬಳಿ, ಕೃಷ್ಣಾಪುರ ಸರ್ಕಲ್‌, ಮದ್ದೂರು ಗ್ರಾಮದ ಬಳಿ, ಗುಂಬಳ್ಳಿ ಕೃಷ್ಣಾಪುರ ರಸ್ತೆ, ಕಂದಹಳ್ಳಿ ಗ್ರಾಮದ ಬಳಿ, ಬಿ.ಆರ್‌ ಹಿಲ್ಸ್‌ ವಿಜಿಕೆಕೆ ಮುಂಭಾಗ, ಗೌಡಳ್ಳಿ ರಸ್ತೆ ಮಲಾರಪಾಳ್ಯ, ಈ ಭಾಗಗಳಲ್ಲಿ 18ರಿಂದ 30 ವರ್ಷದ ಒಳಗಿನ ಯುವಕರೇ ಹೆಚ್ಚಾಗಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಅನೇಕರು ಕಾಲು, ಕೈ, ಕಳೆದುಕೊಂಡು ವಿಕಲಚೇತನರಾಗಿದ್ದಾರೆ.

ಹಗಲು ರಾತ್ರಿ ಪಟ್ಟಣದಿಂದ ಯರಿಯೂರು ಗ್ರಾಮದವರೆಗೆ, ಪಟ್ಟಣದಿಂದ ಕಂದಹಳ್ಳಿ ಗ್ರಾಮದವರೆಗೆ ಅತೀ ವೇಗದಿಂದ ಯುವಕರು ವಾಹನ ಸಂಚರಿಸುತ್ತಾರೆ. ರಸ್ತೆ ನಿಯಮ ಪಾಲಿಸದೆ ಮನಸ್ಸೋ ಇಚ್ಚೆಯಂತೆ ವಾಹನ ಚಲಾಯಿಸುತ್ತಾರೆ. ಇದರಿಂದ ಎಷ್ಟೋ ಮಂದಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನು ರಸ್ತೆ ದಾಟುವ ಪಾದಚಾರಿಗಳಿಗೂ ಡಿಕ್ಕಿ ಹೊಡೆದು ಪ್ರಾಣವನ್ನೇ ತೆಗೆದಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ನಿಯಂತ್ರಣಕ್ಕೆ ತರುವಲ್ಲಿ ಮುಂದಾಗಬೇಕು.

ದೊಡ್ಡರಾಜು, ಯರಿಯೂರು

ನಾವು ದಿನನಿತ್ಯ ವಾಹನ ಸವಾರರನ್ನು ತಪಾಸಣೆ ನಡೆಸುತ್ತಿದ್ದೇವೆ ಡಿಎಲ್‌, ಎಲ್‌ಎಲ್‌ಆರ್‌, ಇನ್ಸುರೆನ್ಸ್‌, ಹೆಲ್ಮೇಟ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಎಚ್ಚರಿಕೆ ನೀಡುತ್ತೇವೆ. ಜತೆಗೆ ಕೆಲ ಶಾಲಾ ಕಾಲೇಜುಗಳಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಲಾಗಿದೆ. ಆದರೂ ಹೆಚ್ಚಾಗಿ ಯುವಕರೇ ಅತೀ ವೇಗದಲ್ಲಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಆದ್ದರಿಂದ ಇದನ್ನು ತಡೆಗಟ್ಟಲು 18 ವರ್ಷ ತುಂಬದೇ ವಾಹನ ಚಾಲಾಯಿಸಿ ಅಪಘಾತಕ್ಕೀಡಾದರೆ ವಾಹನ ಸವಾರರ ಪೋಷಕರೇ ಹೊಣೆಯಾಗಬೇಕಾಗುತ್ತದೆ.

ಸಿಪಿಐ ರಾಜೇಶ್‌, ಯಳಂದೂರು ಪೊಲೀಸ್‌ ಠಾಣೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ