ಊರೊಳಗೆಲ್ಲ ನೀರು ಊರ ಕೆರೆ ಮಾತ್ರ ಖಾಲಿ !
ತಾಲೂಕು ವ್ಯಾಪ್ತಿಯಲ್ಲಿ ಕಾವೇರಿ ನದಿ ಉಕ್ಕಿ ಹರಿದು ನದಿ ಪಾತ್ರಗಳು ನೀರಿನಲ್ಲಿ ಮುಳುಗಡೆಗೊಂಡಿದ್ದರೂ ಆ ಗ್ರಾಮಗಳ ಕೆರೆಗಳಲ್ಲಿ ನೀರಿಲ್ಲದೇ ಭಣಗುಡುತ್ತಿವೆ.
Vijaya Karnataka 18 Aug 2018, 5:00 am
ಕೊಳ್ಳೇಗಾಲ: ತಾಲೂಕು ವ್ಯಾಪ್ತಿಯಲ್ಲಿ ಕಾವೇರಿ ನದಿ ಉಕ್ಕಿ ಹರಿದು ನದಿ ಪಾತ್ರಗಳು ನೀರಿನಲ್ಲಿ ಮುಳುಗಡೆಗೊಂಡಿದ್ದರೂ ಆ ಗ್ರಾಮಗಳ ಕೆರೆಗಳಲ್ಲಿ ನೀರಿಲ್ಲದೇ ಭಣಗುಡುತ್ತಿವೆ.
ಕೊಳ್ಳೇಗಾ ತಾಲೂಕಿನ ಗಡಿ ಗ್ರಾಮ ಮುಳ್ಳೂರಿನಿಂದ ಹಿಡಿದು ತಮಿಳುನಾಡು ಗಡಿಯ ತನಕ ಸುಮಾರು 130 ಕಿ.ಮೀ ಉದ್ದದವರಗೆ ಕಾವೇರಿ ನದಿ ಹರಿಯುತ್ತದೆ. ಪ್ರವಾಹ ಸಂದರ್ಭದಲ್ಲಿ ನದಿ ತೀರದ ಗ್ರಾಮಗಳು ಮುಳುಗಡೆಯಾಗುತ್ತವೆ. ವಿಪರ್ಯಾಸವೆಂದರೆ ಈ ಭಾಗದ ಕೆರೆಗಳಿಗೆ ಮಾತ್ರ ನೀರಿಲ್ಲ !
ತಾಲೂಕಿನಲ್ಲಿ ಈ ಪ್ರವಾಹದಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗುತ್ತದೆ. ನದಿಯಲ್ಲಿ ಹರಿದು ಹೋಗುವ ನೀರನ್ನು ಜನ ನೋಡಿ ಕಣ್ತುಂಬಿಸಿಕೊಳುತ್ತಾರೆ. ಮುಳುಗಡೆಯಾದ ಗ್ರಾಮಗಳಿಗೆ ಸಚಿವರು, ಶಾಸಕರು, ಮಾಜಿ ಶಾಸಕರು ಭೇಟಿ ನೀಡಿ ಅಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಾರೆ. ಜನರ ಸಮಸ್ಯೆಗಳನ್ನು ಕೇಳಿ ಬಗೆಹರಿಸುವ ಭರವಸೆಗಳನ್ನು ನೀಡುತ್ತಾರೆ.
ಆದರೆ, ಅಪಾರ ಪ್ರಮಾಣದ ನೀರು ಹರಿದು ತಮಿಳುನಾಡಿಗೆ ಹೋಗುತ್ತಿದೆ. ಅದೇ ನೀರನ್ನು ಕೆರೆಗಳಿಗೆ ತುಂಬಿಸಿದ್ದರೆ, ಪ್ರವಾಹದೊಂದಿಗೆ ಊರಿಗೆ, ಅಂತರ್ಜಲಕ್ಕಾದರೂ ಲಾಭವಾಗುತ್ತಿತ್ತು. ಆದರೀಗ ಆಗುತ್ತಿರುವುದು ಬರೀ ನಷ್ಟ.
ಒಂದೆಡೆ ಕೆರೆಗಳು ಭಣಗುಡುತ್ತಿದ್ದರೆ, ಅದೇ ಕಾವೇರಿ ತೀರದ ಗ್ರಾಮಗಳ ಜನತೆ ಪ್ರವಾಹದಿಂದಾಗಿ ಸಮಸ್ಯೆಗೆ ಸಿಲುಕಿದ್ದಾರೆ. ಇಂಥ ವ್ಯವಸ್ಥೆ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಾರೆ.
ತಾಲೂಕು ವ್ಯಾಪ್ತಿಯಲ್ಲಿ ಗುಂಡಾಲ್, ಉಡುತೊರೆ ಹಳ್ಳ, ಮಿನ್ನತ್ತು ಹಳ್ಳ, ಕೌಳಿಹಳ್ಳ. ಗೋಪಿನಾಥಂ. ಹುಬ್ಬೆ ಉಣಸೆ ಸೇರಿದಂತೆ 10ಕ್ಕೂ ಹೆಚ್ಚು ಜಲಾಶಯಗಳಿವೆ. 46 ಕೆರೆಗಳಿವೆ. ಮಳೆಯ ಕೊರತೆಯಿಂದಾಗಿ ಬಹುತೇಕ ಜಲಾಶಯಗಳು ಹಾಗೂ ಕೆರೆಗಳು ಬತ್ತಿ ಹೋಗಿವೆ. ಆದರೆ, ಇದೀಗ ಎರಡು ಜಲಾಶಗಳಿಂದ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಪ್ರವಾಹ ಬಂದಿದ್ದರೂ ಈ ಕೆರೆಗಳಲ್ಲಿ ನೀರಿಲ್ಲ .
ಬರಿದಾಗಿರುವ ಕೆರೆಗಳು: ಕಬಿನಿ ಅಚ್ಚುಕಟ್ಟು ಪ್ರದೇಶದ ದೊಡ್ಡರಂಗನಾಥ, ಪಾಳ್ಯ. ಧನಗೆರೆ, ಚಿಕ್ಕರಂಗನಾಥ, ಕೊಂಗಳಕೆರೆ, ತಟ್ಟೆಕರೆ, ಹಂಪಾಪುರ ಕರೆ, ಪಾಪನ ಕರೆ, ಇದ್ದು ಸುಮಾರು 643.10 ಎಂಸಿಎಫ್ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ.
ಕಬಿನಿ ಜಲಾಶಯ ಎರಡು ಬಾರಿ ಭರ್ತಿಯಾಗಿ ಕಳೆದ ಒಂದು ತಿಂಗಳಿಂದ ಪ್ರತಿ ದಿನ 50 ಸಾವಿರ ಕ್ಯೂಸೆಕ್ ನೀರನ್ನು ಕಬಿನಿ ಜಲಾಶಯದಿಂದ ನದಿಗೆ ಬಿಡಲಾಗಿದೆ. ಹೀಗಿದ್ದರೂ ಕೊಳ್ಳೇಗಾಲ ಭಾಗದ ಕೆರೆಗಳು ಈವರೆಗೆ ಭರ್ತಿಯಾಗಿಲ್ಲ, ನಾಲೆಗಳಲ್ಲಿಯು ಸಮರ್ಪಕವಾಗಿ ನೀರು ಹರಿಯುತ್ತಿಲ್ಲ.
ಕಾವೇರಿ ನೀರಾವರಿ ನಿಗಮ ಕಾಲುವೆಗಳನ್ನು ನಿರ್ವಹಣೆ ಮಾಡದೆ ಇರುವುದು ಹಾಗೂ ಜನ ಪ್ರತಿನಿಧಿಗಳಲ್ಲಿನ ನಿರ್ಲಕ್ಷ್ಯ ರೈತರ ಅಸಹಾಯಕತೆಯನ್ನು ತೋರಿಸುತ್ತಿದೆ.
ಕೆರೆಗಳಲ್ಲಿನ ನೀರಿನ ಮಟ್ಟ: ಕಾವೇರಿ ನೀರಾವರಿ ನಿಗಮದ ಅಂಕಿ ಅಂಶಗಳ ಪ್ರಕಾರ ದೊಡ್ಡರಂಗನಾಥ ಕೆರೆ ಶೇ 80, ಪಾಳ್ಯ ಕೆರೆ ಶೇ 90, ಧನಗೆರೆ ಶೇ 80, ಚಿಕ್ಕರಂಗನಾಥ ಕೆರೆ ಶೇ 45, ಕೊಂಗಳಕೆರೆ ಶೇ 40, ತಟ್ಟೆಕೆರೆ ಶೇ 45, ಪಾಪನ ಕೆರೆ ಶೇ 0, ಹಂಪಾಪುರ ಕೆರೆ ಶೇ 25ರಷ್ಟು,ತೇರಂಬಳ್ಳಿ ಶೇ 15. ಮುಳ್ಳೂರು ಶೇ 0. ಕುಂತೂರು ಶೇ 15, ಹೊಂಡರಬಾಳು ಕೆರೆಗಳನ್ನು ಶೇ 50ರಷ್ಟು ನೀರು ತುಂಬಿಸಲಾಗಿದೆ ಎಂದು ತಿಳಿಸುತ್ತದೆ. ಆದರೆ, ವಾಸ್ತವದಲ್ಲಿ ಈ ಎಲ್ಲ ಕೆರೆಗಳು ಭಣಭಣ.
==
ರೈತರ ಕೂಗಿಗೆ ಸ್ಪಂದನೆ ಇಲ್ಲ
ಈ ಭಾಗದ ರೈತರು ನೀರಾವರಿ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ನೀರು ಬಿಡುವಂತೆ ಹಲವು ಬಾರಿ ಕೇಳಿಕೊಂಡರೂ ಒಂದಿಲ್ಲೊಂದು ನೆಪ ಹೇಳಿಕೊಂಡೆ ಬರುತ್ತಿರುವುದು ವಿಪರ್ಯಾಸ.
ನೀರು ಬಿಡದಿದ್ದ ಮೇಲೆ ಕಾಲುವೆಗಳನ್ನಾದರೂ ಯಾಕಾದರು ಮಾಡಿದರು ಎಂಬುದು ಅಚ್ಚುಕಟ್ಟು ಪ್ರದೇಶದ ರೈತರ ಪ್ರಶ್ನೆ. ಇದಕ್ಕೆ ಉತ್ತರ ನೀಡುವವರು ಯಾರು ಎಂಬುದು ಮತ್ತೊಂದು ಪ್ರಶ್ನೆ.
==
*ಪ್ರವಾಹ ನೋಡಿ ಆನಂದಿಸಬೇಕೋ, ದುಃಖ ಪಡಬೇಕೋ ಎಂಬುದೆ ತಿಳಿಯುತ್ತಿಲ್ಲ, ಆಗಸ್ಟ್ ತಿಂಗಳು ಕಳೆಯುತ್ತಿದ್ದರೂ ನಾಲೆಗಳಿಗೆ ನೀರು ಬಿಡದೆ ಭತ್ತ ನಾಟಿ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಡಾಲ್ ಅಚ್ಚು ಕಟ್ಟು ಪ್ರದೇಶದ 5100 ಎಕರೆ ಪ್ರದೇಶದ ರೈತರಿಗೆ ಇತ್ತ ಕಬಿನಿ ನಾಲೆಯಿಂದಲು ನೀರಿಲ್ಲ. ಇದೆಂಥ ಸ್ಥಿತಿ.
- ರವೀಂದ್ರನಾಥ್, ರೈತ ಮುಖಂಡರು, ಮಧುವನಹಳ್ಳಿ
==
ಕೆರೆಗಳನ್ನು ತುಂಬಿಸುವ ಕಾರ್ಯ ನಡೆಯುತ್ತಿದೆ. ನಾಲೆಗಳಿಗೂ ನೀರು ಬಿಡಲಾಗುತ್ತಿದೆ. 2017-18ನೇ ಸಾಲಿನ ಖಾರೀಫ್ ಬೆಳೆಗೆ ಗುಂಡಾಲ್ ಜಲಾಶಯದಿಂದ ನೀರು ಬಿಡುವ ಬಗ್ಗೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚೆರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ.
-ಪ್ರಶಾಂತ್, ಪ್ರಭಾರ ಇಇ, ಕಾವೇರಿ ನೀರಾವರಿ ನಿಗಮ, ಕೊಳ್ಳೇಗಾಲ.
ಕೊಳ್ಳೇಗಾ ತಾಲೂಕಿನ ಗಡಿ ಗ್ರಾಮ ಮುಳ್ಳೂರಿನಿಂದ ಹಿಡಿದು ತಮಿಳುನಾಡು ಗಡಿಯ ತನಕ ಸುಮಾರು 130 ಕಿ.ಮೀ ಉದ್ದದವರಗೆ ಕಾವೇರಿ ನದಿ ಹರಿಯುತ್ತದೆ. ಪ್ರವಾಹ ಸಂದರ್ಭದಲ್ಲಿ ನದಿ ತೀರದ ಗ್ರಾಮಗಳು ಮುಳುಗಡೆಯಾಗುತ್ತವೆ. ವಿಪರ್ಯಾಸವೆಂದರೆ ಈ ಭಾಗದ ಕೆರೆಗಳಿಗೆ ಮಾತ್ರ ನೀರಿಲ್ಲ !
ತಾಲೂಕಿನಲ್ಲಿ ಈ ಪ್ರವಾಹದಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗುತ್ತದೆ. ನದಿಯಲ್ಲಿ ಹರಿದು ಹೋಗುವ ನೀರನ್ನು ಜನ ನೋಡಿ ಕಣ್ತುಂಬಿಸಿಕೊಳುತ್ತಾರೆ. ಮುಳುಗಡೆಯಾದ ಗ್ರಾಮಗಳಿಗೆ ಸಚಿವರು, ಶಾಸಕರು, ಮಾಜಿ ಶಾಸಕರು ಭೇಟಿ ನೀಡಿ ಅಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಾರೆ. ಜನರ ಸಮಸ್ಯೆಗಳನ್ನು ಕೇಳಿ ಬಗೆಹರಿಸುವ ಭರವಸೆಗಳನ್ನು ನೀಡುತ್ತಾರೆ.
ಆದರೆ, ಅಪಾರ ಪ್ರಮಾಣದ ನೀರು ಹರಿದು ತಮಿಳುನಾಡಿಗೆ ಹೋಗುತ್ತಿದೆ. ಅದೇ ನೀರನ್ನು ಕೆರೆಗಳಿಗೆ ತುಂಬಿಸಿದ್ದರೆ, ಪ್ರವಾಹದೊಂದಿಗೆ ಊರಿಗೆ, ಅಂತರ್ಜಲಕ್ಕಾದರೂ ಲಾಭವಾಗುತ್ತಿತ್ತು. ಆದರೀಗ ಆಗುತ್ತಿರುವುದು ಬರೀ ನಷ್ಟ.
ಒಂದೆಡೆ ಕೆರೆಗಳು ಭಣಗುಡುತ್ತಿದ್ದರೆ, ಅದೇ ಕಾವೇರಿ ತೀರದ ಗ್ರಾಮಗಳ ಜನತೆ ಪ್ರವಾಹದಿಂದಾಗಿ ಸಮಸ್ಯೆಗೆ ಸಿಲುಕಿದ್ದಾರೆ. ಇಂಥ ವ್ಯವಸ್ಥೆ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಾರೆ.
ತಾಲೂಕು ವ್ಯಾಪ್ತಿಯಲ್ಲಿ ಗುಂಡಾಲ್, ಉಡುತೊರೆ ಹಳ್ಳ, ಮಿನ್ನತ್ತು ಹಳ್ಳ, ಕೌಳಿಹಳ್ಳ. ಗೋಪಿನಾಥಂ. ಹುಬ್ಬೆ ಉಣಸೆ ಸೇರಿದಂತೆ 10ಕ್ಕೂ ಹೆಚ್ಚು ಜಲಾಶಯಗಳಿವೆ. 46 ಕೆರೆಗಳಿವೆ. ಮಳೆಯ ಕೊರತೆಯಿಂದಾಗಿ ಬಹುತೇಕ ಜಲಾಶಯಗಳು ಹಾಗೂ ಕೆರೆಗಳು ಬತ್ತಿ ಹೋಗಿವೆ. ಆದರೆ, ಇದೀಗ ಎರಡು ಜಲಾಶಗಳಿಂದ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಪ್ರವಾಹ ಬಂದಿದ್ದರೂ ಈ ಕೆರೆಗಳಲ್ಲಿ ನೀರಿಲ್ಲ .
ಬರಿದಾಗಿರುವ ಕೆರೆಗಳು: ಕಬಿನಿ ಅಚ್ಚುಕಟ್ಟು ಪ್ರದೇಶದ ದೊಡ್ಡರಂಗನಾಥ, ಪಾಳ್ಯ. ಧನಗೆರೆ, ಚಿಕ್ಕರಂಗನಾಥ, ಕೊಂಗಳಕೆರೆ, ತಟ್ಟೆಕರೆ, ಹಂಪಾಪುರ ಕರೆ, ಪಾಪನ ಕರೆ, ಇದ್ದು ಸುಮಾರು 643.10 ಎಂಸಿಎಫ್ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ.
ಕಬಿನಿ ಜಲಾಶಯ ಎರಡು ಬಾರಿ ಭರ್ತಿಯಾಗಿ ಕಳೆದ ಒಂದು ತಿಂಗಳಿಂದ ಪ್ರತಿ ದಿನ 50 ಸಾವಿರ ಕ್ಯೂಸೆಕ್ ನೀರನ್ನು ಕಬಿನಿ ಜಲಾಶಯದಿಂದ ನದಿಗೆ ಬಿಡಲಾಗಿದೆ. ಹೀಗಿದ್ದರೂ ಕೊಳ್ಳೇಗಾಲ ಭಾಗದ ಕೆರೆಗಳು ಈವರೆಗೆ ಭರ್ತಿಯಾಗಿಲ್ಲ, ನಾಲೆಗಳಲ್ಲಿಯು ಸಮರ್ಪಕವಾಗಿ ನೀರು ಹರಿಯುತ್ತಿಲ್ಲ.
ಕಾವೇರಿ ನೀರಾವರಿ ನಿಗಮ ಕಾಲುವೆಗಳನ್ನು ನಿರ್ವಹಣೆ ಮಾಡದೆ ಇರುವುದು ಹಾಗೂ ಜನ ಪ್ರತಿನಿಧಿಗಳಲ್ಲಿನ ನಿರ್ಲಕ್ಷ್ಯ ರೈತರ ಅಸಹಾಯಕತೆಯನ್ನು ತೋರಿಸುತ್ತಿದೆ.
ಕೆರೆಗಳಲ್ಲಿನ ನೀರಿನ ಮಟ್ಟ: ಕಾವೇರಿ ನೀರಾವರಿ ನಿಗಮದ ಅಂಕಿ ಅಂಶಗಳ ಪ್ರಕಾರ ದೊಡ್ಡರಂಗನಾಥ ಕೆರೆ ಶೇ 80, ಪಾಳ್ಯ ಕೆರೆ ಶೇ 90, ಧನಗೆರೆ ಶೇ 80, ಚಿಕ್ಕರಂಗನಾಥ ಕೆರೆ ಶೇ 45, ಕೊಂಗಳಕೆರೆ ಶೇ 40, ತಟ್ಟೆಕೆರೆ ಶೇ 45, ಪಾಪನ ಕೆರೆ ಶೇ 0, ಹಂಪಾಪುರ ಕೆರೆ ಶೇ 25ರಷ್ಟು,ತೇರಂಬಳ್ಳಿ ಶೇ 15. ಮುಳ್ಳೂರು ಶೇ 0. ಕುಂತೂರು ಶೇ 15, ಹೊಂಡರಬಾಳು ಕೆರೆಗಳನ್ನು ಶೇ 50ರಷ್ಟು ನೀರು ತುಂಬಿಸಲಾಗಿದೆ ಎಂದು ತಿಳಿಸುತ್ತದೆ. ಆದರೆ, ವಾಸ್ತವದಲ್ಲಿ ಈ ಎಲ್ಲ ಕೆರೆಗಳು ಭಣಭಣ.
==
ರೈತರ ಕೂಗಿಗೆ ಸ್ಪಂದನೆ ಇಲ್ಲ
ಈ ಭಾಗದ ರೈತರು ನೀರಾವರಿ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ನೀರು ಬಿಡುವಂತೆ ಹಲವು ಬಾರಿ ಕೇಳಿಕೊಂಡರೂ ಒಂದಿಲ್ಲೊಂದು ನೆಪ ಹೇಳಿಕೊಂಡೆ ಬರುತ್ತಿರುವುದು ವಿಪರ್ಯಾಸ.
ನೀರು ಬಿಡದಿದ್ದ ಮೇಲೆ ಕಾಲುವೆಗಳನ್ನಾದರೂ ಯಾಕಾದರು ಮಾಡಿದರು ಎಂಬುದು ಅಚ್ಚುಕಟ್ಟು ಪ್ರದೇಶದ ರೈತರ ಪ್ರಶ್ನೆ. ಇದಕ್ಕೆ ಉತ್ತರ ನೀಡುವವರು ಯಾರು ಎಂಬುದು ಮತ್ತೊಂದು ಪ್ರಶ್ನೆ.
==
*ಪ್ರವಾಹ ನೋಡಿ ಆನಂದಿಸಬೇಕೋ, ದುಃಖ ಪಡಬೇಕೋ ಎಂಬುದೆ ತಿಳಿಯುತ್ತಿಲ್ಲ, ಆಗಸ್ಟ್ ತಿಂಗಳು ಕಳೆಯುತ್ತಿದ್ದರೂ ನಾಲೆಗಳಿಗೆ ನೀರು ಬಿಡದೆ ಭತ್ತ ನಾಟಿ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಡಾಲ್ ಅಚ್ಚು ಕಟ್ಟು ಪ್ರದೇಶದ 5100 ಎಕರೆ ಪ್ರದೇಶದ ರೈತರಿಗೆ ಇತ್ತ ಕಬಿನಿ ನಾಲೆಯಿಂದಲು ನೀರಿಲ್ಲ. ಇದೆಂಥ ಸ್ಥಿತಿ.
- ರವೀಂದ್ರನಾಥ್, ರೈತ ಮುಖಂಡರು, ಮಧುವನಹಳ್ಳಿ
==
ಕೆರೆಗಳನ್ನು ತುಂಬಿಸುವ ಕಾರ್ಯ ನಡೆಯುತ್ತಿದೆ. ನಾಲೆಗಳಿಗೂ ನೀರು ಬಿಡಲಾಗುತ್ತಿದೆ. 2017-18ನೇ ಸಾಲಿನ ಖಾರೀಫ್ ಬೆಳೆಗೆ ಗುಂಡಾಲ್ ಜಲಾಶಯದಿಂದ ನೀರು ಬಿಡುವ ಬಗ್ಗೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚೆರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ.
-ಪ್ರಶಾಂತ್, ಪ್ರಭಾರ ಇಇ, ಕಾವೇರಿ ನೀರಾವರಿ ನಿಗಮ, ಕೊಳ್ಳೇಗಾಲ.