ಕೋಟಂಬಳ್ಳಿ ಗುರುಸ್ವಾಮಿ ಕೊಳ್ಳೇಗಾಲ
ಕರ್ನಾಟಕದ ನಯಾಗರ ಎಂದೇ ಕರೆಯಲ್ಪಡುವ ತಾಲೂಕಿನ ಭರಚುಕ್ಕಿ ಜಲಪಾತ ಇದೀಗ ಮೈದುಂಬಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ.
ಒಂದೆಡೆ ತಾಲೂಕಿನಲ್ಲಿ ಪ್ರವಾಹದ ಆತಂಕ ಎದುರಾಗಿದ್ದಾರೆ. ಅದೇ ಪ್ರವಾಹದಿಂದ ಭರಚುಕ್ಕಿ ಜಲಪಾತ ಮೈದುಂಬಿದ್ದು, ಕಾವೇರಿ ನದಿ ಜಲವೈಭವಕ್ಕೆ ಪ್ರವಾಸಿಗರು ಮೂಕವಿಸ್ಮಿತರಾಗಿದ್ದಾರೆ.
ಭರಚುಕ್ಕಿ ಪ್ರದೇಶದ ಎತ್ತರದ ಬಂಡೆಗಲ್ಲುಗಳ ಮೂಲಕ ನೀರು ಭೋರ್ಗರೆದು ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತಿದೆ.
ಭರಚುಕ್ಕಿ ಜಲಪಾತದ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ವರ್ಣಿಸಲು ಅಸಾಧ್ಯ. ಮಳೆ ನಡುವೆಯೂ ಪ್ರವಾಸಿಗರು ಭರಚುಕ್ಕಿಯತ್ತ ಮುಖ ಮಾಡಿ, ಜಲರಾಶಿಯ ಮೋಡಿಗೆ ಫುಲ್ ಖುಷಿಗೊಂಡಿದ್ದಾರೆ.
ಇಲ್ಲಿ ಧುಮ್ಮಿಕ್ಕುವ ಜಲಪಾತ ದೇಶ ವಿದೇಶಗಳ ಪ್ರವಾಸಿರನ್ನೂ ತನ್ನತ್ತ ಸೆಳೆಯುತ್ತಿದೆ. ಈ ದಶಕದ ಹಿಂದೆ ಮಳೆಗಾಲ ಸೇರಿದಂತೆ ವರ್ಷಪೂರ್ತಿ ಈ ಜಲಪಾತ ಧುಮ್ಮಿಕ್ಕುತ್ತಿತ್ತು. ಜಲ ವಿದ್ಯುತ್ ಉತ್ಪಾದನ ಕೇಂದ್ರ ಪ್ರಾರಂಭವಾದ ನಂತರ ಮಳೆಗಾಲ ಹಾಗೂ ಪ್ರವಾಹದ ವೇಳೆ ಮಾತ್ರ ಮೈದುಂಬಿಕೊಳ್ಳುತ್ತದೆ. ಉಳಿದ ಸಮಯದಲ್ಲಿ ಭಣಗುಡುತ್ತಿರುತ್ತದೆ. ಬೇಸಿಗೆಯಲ್ಲಷ್ಟೇಯಲ್ಲ, ಇದೇ ಜುಲೈವರೆಗೂ ಇಲ್ಲಿ ನೀರಿಲ್ಲದೆ ಕಲ್ಲು ಬಂಡೆಗಳು ಗೋಚರಿಸುತ್ತಿದ್ದವು. ಆದರೀಗ ಕಬಿನಿ ಜಲಾಶಯದಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಜಲಪಾತ ಜೀವಕಳೆ ಪಡೆದುಕೊಂಡಿದೆ.
ಜಲಪಾತ ವೀಕ್ಷಿಸಲು ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಶನಿವಾರ, ಭಾನುವಾರ ಮತ್ತು ಸೋಮವಾರ ಸರಕಾರಿ ರಜೆ ಇರುವುದರಿಂದ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.
ಕರ್ನಾಟಕದ ನಯಾಗರ ಎಂದೇ ಕರೆಯಲ್ಪಡುವ ತಾಲೂಕಿನ ಭರಚುಕ್ಕಿ ಜಲಪಾತ ಇದೀಗ ಮೈದುಂಬಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ.
ಒಂದೆಡೆ ತಾಲೂಕಿನಲ್ಲಿ ಪ್ರವಾಹದ ಆತಂಕ ಎದುರಾಗಿದ್ದಾರೆ. ಅದೇ ಪ್ರವಾಹದಿಂದ ಭರಚುಕ್ಕಿ ಜಲಪಾತ ಮೈದುಂಬಿದ್ದು, ಕಾವೇರಿ ನದಿ ಜಲವೈಭವಕ್ಕೆ ಪ್ರವಾಸಿಗರು ಮೂಕವಿಸ್ಮಿತರಾಗಿದ್ದಾರೆ.
ಭರಚುಕ್ಕಿ ಪ್ರದೇಶದ ಎತ್ತರದ ಬಂಡೆಗಲ್ಲುಗಳ ಮೂಲಕ ನೀರು ಭೋರ್ಗರೆದು ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತಿದೆ.
ಭರಚುಕ್ಕಿ ಜಲಪಾತದ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ವರ್ಣಿಸಲು ಅಸಾಧ್ಯ. ಮಳೆ ನಡುವೆಯೂ ಪ್ರವಾಸಿಗರು ಭರಚುಕ್ಕಿಯತ್ತ ಮುಖ ಮಾಡಿ, ಜಲರಾಶಿಯ ಮೋಡಿಗೆ ಫುಲ್ ಖುಷಿಗೊಂಡಿದ್ದಾರೆ.
ಇಲ್ಲಿ ಧುಮ್ಮಿಕ್ಕುವ ಜಲಪಾತ ದೇಶ ವಿದೇಶಗಳ ಪ್ರವಾಸಿರನ್ನೂ ತನ್ನತ್ತ ಸೆಳೆಯುತ್ತಿದೆ. ಈ ದಶಕದ ಹಿಂದೆ ಮಳೆಗಾಲ ಸೇರಿದಂತೆ ವರ್ಷಪೂರ್ತಿ ಈ ಜಲಪಾತ ಧುಮ್ಮಿಕ್ಕುತ್ತಿತ್ತು. ಜಲ ವಿದ್ಯುತ್ ಉತ್ಪಾದನ ಕೇಂದ್ರ ಪ್ರಾರಂಭವಾದ ನಂತರ ಮಳೆಗಾಲ ಹಾಗೂ ಪ್ರವಾಹದ ವೇಳೆ ಮಾತ್ರ ಮೈದುಂಬಿಕೊಳ್ಳುತ್ತದೆ. ಉಳಿದ ಸಮಯದಲ್ಲಿ ಭಣಗುಡುತ್ತಿರುತ್ತದೆ. ಬೇಸಿಗೆಯಲ್ಲಷ್ಟೇಯಲ್ಲ, ಇದೇ ಜುಲೈವರೆಗೂ ಇಲ್ಲಿ ನೀರಿಲ್ಲದೆ ಕಲ್ಲು ಬಂಡೆಗಳು ಗೋಚರಿಸುತ್ತಿದ್ದವು. ಆದರೀಗ ಕಬಿನಿ ಜಲಾಶಯದಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಜಲಪಾತ ಜೀವಕಳೆ ಪಡೆದುಕೊಂಡಿದೆ.
ಜಲಪಾತ ವೀಕ್ಷಿಸಲು ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಶನಿವಾರ, ಭಾನುವಾರ ಮತ್ತು ಸೋಮವಾರ ಸರಕಾರಿ ರಜೆ ಇರುವುದರಿಂದ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.