ಆ್ಯಪ್ನಗರ

ಪ್ರಚಲಿತ ವಿದ್ಯಾಮಾನಗಳ ಅರಿವುಹೊಂದಿ

ಯುವ ಪೀಳಿಗೆಯು ಸಕಾರಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದು ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊಎಚ್‌ಜಿ ನಟರಾಜನ್‌ ಹೇಳಿದರು...

Vijaya Karnataka 30 Mar 2019, 5:00 am
ಕೊಳ್ಳೇಗಾಲ: ಯುವ ಪೀಳಿಗೆಯು ಸಕಾರಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದು ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಎಚ್‌.ಜಿ. ನಟರಾಜನ್‌ ಹೇಳಿದರು.
Vijaya Karnataka Web with the knowledge of current educators
ಪ್ರಚಲಿತ ವಿದ್ಯಾಮಾನಗಳ ಅರಿವುಹೊಂದಿ


ಪಟ್ಟಣದ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ್ದ ಸಂಸ್ಕೃತಿ ದಿನಾಚರಣೆ ಮತ್ತು ಶಾರದಾ ಪೂಜೆ ಉದ್ಘಾಟಿಸಿ ಮಾತನಾಡಿದರು.

''ತಂತ್ರಜ್ಞಾನವನ್ನು ಅಗತ್ಯವಿದ್ದಾಗ ಅವಶ್ಯಕತೆಗೆ ತಕ್ಕಂತ ಬಳುಸುವುದು ಸೂಕ್ತ. ಪ್ರಸ್ತುತ ಪ್ರತೀ ಕ್ಷ ಣವು ಸ್ಪರ್ಧಾತ್ಮಕವಾಗಿದ್ದು , ಇದನ್ನು ಎದುರಿಸುವುದೇ ಸವಾಲಾಗಲಿದೆ. ಸಂಸ್ಕಾರ ಮತ್ತು ಸಂಸ್ಕೃತಿ ಜತೆಗೆ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಜ್ಞಾನ ಹೊಂದುವುದು ಅಗತ್ಯ. ಶಿಕ್ಷ ಣದ ಜತೆಗೆ ಕೌಶಲ್ಯಗಳನ್ನು ಕಲಿತು ಬದುಕನ್ನು ಕಟ್ಟಿಕೊಳ್ಳಿ '' ಎಂದರು.

ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಮಮತಾ ಮಾತನಾಡಿ,'' ಬಸವಾದಿ ಶರಣರ ವಚನಗಳಲ್ಲಿ ಜೀವನ ಮೌಲ್ಯಗಳ ಸಾರ ಅಡಗಿದ್ದು ಯುವ ಪೀಳಿಗೆಗೆ ಮಾರ್ಗದರ್ಶನವಾಗಿದೆ. ವಚನ ಸಾಹಿತ್ಯ ಎಲ್ಲಾ ಕಾಲದಲ್ಲೂ ಪ್ರಸ್ತುತವಾಗಿದೆ. ಬದುಕಿನ ಮಾರ್ಗವನ್ನು ಸರಳವಾಗಿ ಕಲಿಸುವ ಜತೆಗೆ ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ಸೌಹಾರ್ದತೆಯ ಮಹತ್ವದ ಅರಿವು ಮೂಡಿಸುತ್ತದೆ. ಪದವಿ ಪಡೆದ ನಂತರ ಉದ್ಯೋಗಕ್ಕೆ ಬೇಕಾದ ಅರ್ಹತೆಗಳನ್ನು ಹೊಂದುವುದು ಅನಿವಾರ್ಯ. ಶಿಕ್ಷ ಣದ ಜತೆಗೆ ಬದುಕನ್ನು ಕಟ್ಟಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳಿ, ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಕಾರ್ಯ ಮಾಡಿ ಎಂದರು.

ಪ್ರಾಚಾರ್ಯ ಪ್ರೊ. ಉಮೇಶ ಅಧ್ಯಕ್ಷ ತೆ ವಹಿಸಿದ್ದರು. ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರಾದ ಮಹೇಶ್‌ ಹಾಗೂ ಕು.ಅರ್ಚನಾ ವೇದಿಕೆಯಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ