ಆ್ಯಪ್ನಗರ

ಯುವತಿ ಅಪಹರಿಸಿ ಅತ್ಯಾಚಾರ: 15 ಜನರ ವಿರುದ್ಧ ಕೇಸ್‌

ಯುವತಿಯನ್ನು ವಂಚಿಸಿ ಅಪಹರಿಸಿ ಅತ್ಯಾಚಾರವೆಸಗಿದ ಆರೋಪದಡಿ ಗ್ರಾಮಾಂತರ ಠಾಣೆಯಲ್ಲಿ ಆರೋಪಿ ಹರೀಶ್‌ ಸೇರಿದಂತೆ 15 ಜನರ ವಿರುದ್ಧ ಪ್ರಕರಣದ ದಾಖಲಾಗಿದೆ.

Vijaya Karnataka 20 Jul 2018, 5:00 am
ಕೊಳ್ಳೇಗಾಲ: ಯುವತಿಯನ್ನು ವಂಚಿಸಿ ಅಪಹರಿಸಿ ಅತ್ಯಾಚಾರವೆಸಗಿದ ಆರೋಪದಡಿ ಗ್ರಾಮಾಂತರ ಠಾಣೆಯಲ್ಲಿ ಆರೋಪಿ ಹರೀಶ್‌ ಸೇರಿದಂತೆ 15 ಜನರ ವಿರುದ್ಧ ಪ್ರಕರಣದ ದಾಖಲಾಗಿದೆ.
Vijaya Karnataka Web woman kidnapped and raped case against 15 people
ಯುವತಿ ಅಪಹರಿಸಿ ಅತ್ಯಾಚಾರ: 15 ಜನರ ವಿರುದ್ಧ ಕೇಸ್‌


''ಯುವತಿ ಬಯಲು ಶೌಚಾಲಯಕ್ಕೆ ತೆರಳಿದ್ದ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ನಾನು ಕರೆದ ಸ್ಥಳಕ್ಕೆ ನೀನು ಬಂದರೆ ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ದೃಶ್ಯ ಇರುವ ಚಿಪ್‌ ಅನ್ನು ನಿನಗೆ ಕೊಡುವುದಾಗಿ ಹೇಳಿ ಹರೀಶ್‌ ಬೆದರಿಕೆ ಹಾಕಿದ್ದ. ಬಳಿಕ ನನ್ನನ್ನು ಅಪಹರಿಸಿಕೊಂಡು ಬೆಂಗಳೂರಿಗೆ ಕರೆದೊಯ್ದ. ಈ ವೇಳೆ ಆತನ ತಂದೆ ಹರೀಶ್‌ ಮೊಬೈಲ್‌ಗೆ ಕರೆ ಮಾಡಿ ಯಾವುದೇ ಕಾರಣಕ್ಕೂ ಅವಳನ್ನು ವಾಪಸ್‌ ಊರಿಗೆ ಕರೆದುಕೊಂಡು ಬರಬೇಡ ಎಂದು ತಿಳಿಸಿದರು.
ಮೇ 16 ಮತ್ತು 17ರಂದು ಮೈಸೂರಿನ ಮನೆಯೊಂದಕ್ಕೆ ನನ್ನನ್ನು ಸ್ಥಳಾಂತರಿಸಿ, ಐದು ದಿನ ಮನೆಯಲ್ಲಿ ಇಟ್ಟುಕೊಂಡು ಹರೀಶ್‌ ಅತ್ಯಾಚಾರವೆಸಗಿದ. ಬಳಿಕ ಹೂವಿನ ಹಾರ ಬದಲಾಯಿಸಿ ಬಲವಂತವಾಗಿ ಮದುವೆ ಮಾಡಿಸಿದ್ದರು. ಅತ್ಯಾಚಾರದ ವಿಚಾರವನ್ನು ತಿಳಿಸಿದರೆ ನಿನ್ನ ಪಾಲಕರ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದ, ಅತನಿಂದ ತಪ್ಪಿಸಿಕೊಂಡು ಬಂದು ಮನೆಯವರಿಗೆ ವಿಷಯ ಮುಟ್ಟಿಸಿದೆ. ಈ ಸಂಬಂಧ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ಸಹ ನಡೆದಿತ್ತು'' ಎಂದು ಗ್ರಾಮಾಂತರ ಠಾಣೆಗೆ ಯುವತಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಹರೀಶ್‌ಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಆತನ ತಂದೆ ಸೇರಿದಂತೆ 15 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ