ಆ್ಯಪ್ನಗರ

ಕಾಡುಪ್ರಾಣಿಗಳ ಹಾವಳಿ ನಡುವೆಯೂ ಸಮೃದ್ಧ ಮುಸುಕಿನ ಜೋಳ, ರಾಗಿ ಬೆಳೆ

ತಾಲೂಕಿನ ರೈತರು ಪಂಪ್‌ಸೆಟ್‌ ಆಶ್ರಯದಲ್ಲಿ 700 ಹೆಕ್ಟೇರ್‌ ಪ್ರದೇಶದಲ್ಲಿ ಹಾಕಲಾಗಿದ್ದ ಮುಸುಕಿನ ಜೋಳ ಹಾಗೂ ರಾಗಿ ಫಸಲು ನಳ ನಳಿಸುತ್ತಿದೆ.

Vijaya Karnataka 24 Apr 2019, 5:00 am
ಯಳಂದೂರು: ತಾಲೂಕಿನ ರೈತರು ಪಂಪ್‌ಸೆಟ್‌ ಆಶ್ರಯದಲ್ಲಿ 700 ಹೆಕ್ಟೇರ್‌ ಪ್ರದೇಶದಲ್ಲಿ ಹಾಕಲಾಗಿದ್ದ ಮುಸುಕಿನ ಜೋಳ ಹಾಗೂ ರಾಗಿ ಫಸಲು ನಳ ನಳಿಸುತ್ತಿದೆ.
Vijaya Karnataka Web CHN-CHN23YLD2


ಬಿಳಿಗಿರಿರಂಗನ ಬೆಟ್ಟದ ಕಾಡಂಚಿನ ತಪ್ಪಲಿನಲ್ಲಿರುವ ವಡಗೆರೆ, ಕುಮಾರನಪುರ, ದಾಸನಹುಂಡಿ, ಗಂಗವಾಡಿ, ಗೌಡಳ್ಳಿ, ಮಲಾರಪಾಳ್ಯ, ಅಗ್ರಹಾರ, ಬನ್ನಿಸಾರಿಗೆ, ಇರಸವಾಡಿ, ವೈ.ಕೆ ಮೊಳೆ, ಯರಿಯೂರು, ಕೆಸ್ತೂರು, ಮಲ್ಲಿಗೆಹಳ್ಳಿ, ಅಗರ, ಆಲ್ಕೆರೆ ಅಗ್ರಹಾರ, ಗಣಿಗನೂರು, ಚಾಮಲಾಪುರ, ಗುಂಬಳ್ಳಿ ಈ ಭಾಗದ ರೈತರು ಪಂಪ್‌ಸೆಟ್‌ ಆಶ್ರಯದಲ್ಲಿ ಬೆಳೆ ಬೆಳೆದಿದ್ದಾರೆ.

ಈ ಗ್ರಾಮಗಳು ಕಾಡಂಚಿನಲ್ಲಿದ್ದು, ಕಾಡು ಪ್ರಾಣಿ, ಹಂದಿಗಳ ಹಾವಳಿ ಹೆಚ್ಚಾಗಿದೆ. ರೈತರು ತಮ್ಮ ಜಮೀನಿನಲ್ಲಿ ಅಟ್ನ ಹಾಕಿ ರಾತ್ರಿ ವೇಳೆ ಕಾವಲು ಕಾದು ತಮ್ಮ ಬೆಳೆಗಳನ್ನು ರಕ್ಷ ಣೆ ಮಾಡಿಕೊಂಡು ಬಂದಿದ್ದಾರೆ. ಉರಿಯುವ ಬಿಸಿಲಿನಲ್ಲೂ ಬೆಳೆಯನ್ನು ಕಾವಲು ಕಾದು ಬೆಳೆಗಳನ್ನು ಕಾಪಾಡಿಕೊಂಡು ಬರಲಾಗಿದೆ. ಇನ್ನು ಕೆಲ ರೈತರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಬೆಳೆಗಳನ್ನು ರಕ್ಷಿಸಿದ್ದಾರೆ.ಇನ್ನು ಕೆಲ ರೈತರು ಜಮೀನುಗಳಲ್ಲಿ ದೊಡ್ಡ ದೊಡ್ಡ ಹೊಂಡ ನಿರ್ಮಿಸಿಕೊಂಡು ಟಾರ್ಪಲ್‌ ಅಳವಡಿಸಿ ಅದಲ್ಲಿ ನೀರು ಸಂಗ್ರಹಣೆ ಮಾಡಿಕೊಂಡು ವಿದ್ಯುತ್‌ ಇಲ್ಲದ ಸಮಯದಲ್ಲಿ ಹೊಂಡದಲ್ಲಿರುವ ನೀರನ್ನು ಫಸಲುಗಳಿಗೆ ಹಾಯಿಸಿ ಬೆಳೆಗಳನ್ನು ರಕ್ಷಿಸಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಈ ಪರಿಣಾಮ ಕೆಲ ರೈತರ ಫಸಲು ಒಣಗುವ ಸಾಧ್ಯತೆ ಇದೆ, ಇಂತಹ ಸಮಯದಲ್ಲಿ ಒಂದು ಬಾರಿ ಮಳೆಯಾದರೆ ರೈತರ ಬೆಳೆಗಳಿಗೆ ಅನುಕೂಲವಾಗಲಿದೆ.

700 ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ, ರಾಗಿ ಫಸಲು ಬೆಳೆಯಲಾಗಿದೆ, ಆದರೆ ಬೇಸಿಗೆ ಇರುವುದರಿಂದ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಆದ್ದರಿಂದ ಇಂತಹ ಸಮಯದಲ್ಲಿ ಮಳೆಯಾದರೆ ರೈತರು ಸಾಲ ಸೋಲ ಮಾಡಿ ಹಾಕಲಾಗಿರುವ ಫಸಲು ಕೈಸೇರಲಿದೆ.

ರೈತ, ಮಹೇಶ್‌ಕುಮಾರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ