ಆ್ಯಪ್ನಗರ

ಪಕ್ಷ ಬಿಡುವವರು ಬಿಡಲಿ: ಬಿಎಸ್‌ವೈ

ಪಕ್ಷ ಬಿಡುವವರು ಬಿಡಲಿ...ಬರುವವರು ಬರಲಿ.ನಮ್ಮಲ್ಲಿ ಯಾವುದೇ ಗುಂಪುಗಾರಿಕೆ‌ ಇಲ್ಲ, ಎಲ್ಲ ಒಗ್ಗಟ್ಟಾಗಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

Vijaya Karnataka Web 21 Jan 2018, 11:50 am
ಚಾಮರಾಜನಗರ: ಪಕ್ಷ ಬಿಡುವವರು ಬಿಡಲಿ...ಬರುವವರು ಬರಲಿ.ನಮ್ಮಲ್ಲಿ ಯಾವುದೇ ಗುಂಪುಗಾರಿಕೆ‌ ಇಲ್ಲ, ಎಲ್ಲ ಒಗ್ಗಟ್ಟಾಗಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
Vijaya Karnataka Web yeddyurappa in chamarajanagar
ಪಕ್ಷ ಬಿಡುವವರು ಬಿಡಲಿ: ಬಿಎಸ್‌ವೈ


ಮಲೆಮಹದೇಶ್ವರ ಸ್ವಾಮಿ ದರ್ಶನದ ಬಳಿಕ ಮಾತನಾಡಿದ ಅವರು, ಬರುವ ದಿನಗಳಲ್ಲಿ ‌ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆಗಲೆಂದು ಮಾದಪ್ಪನಲ್ಲಿ ಬೇಡಿಕೊಂಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ದಕ್ಷ ಮತ್ತು ಪ್ರಾಮಾಣಿಕ ಸರಕಾರ ರಚಿಸಲು ಅವಕಾಶ ಕೊಡುವಂತೆ ಮಾದಪ್ಪನಲ್ಲಿ ಪ್ರಾರ್ಥಿಸಿದ್ದೇನೆ. ಜನಬಲ ದೈವಬಲ ನನ್ನ ಮೇಲೆ ಇದೆ. ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ‌ಎನ್ನುವುದು ಸಿದ್ದರಾಮಯ್ಯ ಅವರ ಅಭಿಪ್ರಾಯ ಅದನ್ನು ನಾನು ಟೀಕಿಸುವುದಿಲ್ಲ ಎಂದರು.

ಎ.ಆರ್.ಕೆ ಪಕ್ಷ ತೊರೆದ ವಿಚಾರಕ್ಕೆ ಪ್ರತಿಕ್ರಿಯಿಸಿ ಪಕ್ಷ ಬಿಡುವವರ ಬಗ್ಗೆ ಚಿಂತೆಯಿಲ್ಲ. ಎ.ಆರ್.ಕೆ ಗೆ ಪಕ್ಷದಲ್ಲಿ ಎಲ್ಲ ಅವಕಾಶ ನೀಡಿದ್ದೆ. ಇನ್ನೂ ಒಳ್ಳೆಯ ಅವಕಾಶ ನೀಡುವುದಾಗಿ ಸಹ‌ ಹೇಳಿದ್ದೆ. ಆದರೆ ಅವರು ಬೇರೆ ಕಾರಣಕ್ಕಾಗಿ ಹೋಗುತ್ತಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ