ಆ್ಯಪ್ನಗರ

ಉರುಳಿಗೆ ಸಿಲುಕಿದ್ದ ಜಿಂಕೆ ರಕ್ಷಿಸಿದ ಯುವಕರು

ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾವೇರಿ ವನ್ಯ ಜೀವಿಧಾಮದಲ್ಲಿ ಉರುಳಿಗೆ ಸಿಲುಕಿದ್ದ ಎರಡು ಜಿಂಕೆಗಳನ್ನು ಯುವಕರ ತಂಡ ರಕ್ಷಿಸಿದ್ದು, ಚಿತ್ರೀಕರಿಸಿರುವ ಈ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಕ ಸುದ್ದಿಲೋಕ 15 Jun 2017, 9:00 am
ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾವೇರಿ ವನ್ಯ ಜೀವಿಧಾಮದಲ್ಲಿ ಉರುಳಿಗೆ ಸಿಲುಕಿದ್ದ ಎರಡು ಜಿಂಕೆಗಳನ್ನು ಯುವಕರ ತಂಡ ರಕ್ಷಿಸಿದ್ದು, ಚಿತ್ರೀಕರಿಸಿರುವ ಈ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
Vijaya Karnataka Web young men who saved the deer from the ring
ಉರುಳಿಗೆ ಸಿಲುಕಿದ್ದ ಜಿಂಕೆ ರಕ್ಷಿಸಿದ ಯುವಕರು


ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು- ಮುತ್ತತ್ತಿಗೆ ಸಂಪರ್ಕ ಕಲ್ಪಿಸುವ ಅರಣ್ಯವನ್ನೊಳ ಗೊಂಡ ರಸ್ತೆ ಸಮೀಪದಲ್ಲಿ ಈ ಘಟನೆ ಕೆಲವು ದಿನಗಳ ಹಿಂದೆಯೇ ನಡೆದಿದ್ದು, ಈಗಷ್ಟೇ ಬೆಳಕಿಗೆ ಬಂದಿದೆ. ಆ ಮಾರ್ಗದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಯುವಕರ ತಂಡವು, ಜಿಂಕೆಗಳ ಚೀರಾಟ ಕೇಳಿ, ಸ್ವಲ್ಪ ಅರಣ್ಯದೊಳಕ್ಕೆ ಹೋಗಿ ಪರಿಶೀಲಿಸಿದೆ. ಆಗ ಚುಕ್ಕಿ ಜಿಂಕೆಗಳು ಉರುಳಿಗೆ ಸಿಲುಕಿ ನರಳುತ್ತಿದ್ದ ದೃಶ್ಯ ಕಂಡು ಬಂದಿದೆ. ತಕ್ಷಣ ಯುವಕರು ಜಿಂಕೆಗೆ ಕತ್ತಿಗೆ ಸಿಲುಕಿದ್ದ ಉರುಳನ್ನು ಬಿಡಿಸಿ, ಮೂಕಪ್ರಾಣಿಗಳನ್ನು ರಕ್ಷಿಸಿದ್ದಾರೆ.

ಹೀಗೆ ರಕ್ಷಣೆ ಮಾಡುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿ ದಾಡಿದೆ. ಈ ವಿಡಿಯೊಗಳನ್ನು ವೀಕ್ಷಿಸಿರುವ ಅರಣ್ಯಾಧಿಕಾರಿಗಳು ಆ ಭಾಗದಲ್ಲಿ ಉರುಳು ಪತ್ತೆ ಹಚ್ಚಲು ಕಾರ್ಯಾಚರಣೆ ಕೈಗೊಂಡಿ ದ್ದಾರೆ. ಅರಣ್ಯ ಪ್ರದೇಶದಲ್ಲಿ ಮೊಲ, ಹಂದಿಗಳನ್ನು ಬೇಟೆಯಾಡಲು, ದುಷ್ಕರ್ಮಿ ಗಳು ಹೀಗೆ ಉರುಳುಗಳನ್ನು ಹಾಕುತ್ತಾರೆ. ಹಲವು ಸಲ ಇಂಥ ಉರುಳಿಗೆ ಹುಲಿ, ಚಿರತೆಯಂಥ ದೊಡ್ಡ ವನ್ಯಜೀವಿ ಸಿಲುಕಿಕೊಂಡಿರುವ ಘಟನೆಗಳು ನಡೆದಿವೆ. ಇಂಥ ವೇಳೆ ಉರುಳಿಗೆ ಸಿಲುಕಿದ್ದ ಜಿಂಕೆಗಳನ್ನು ರಕ್ಷಣೆ ಮಾಡಿರುವ ಯುವಕರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ