ಆ್ಯಪ್ನಗರ

ಮೇಕೆದಾಟು ಯೋಜನೆ ತಡೆಗೆ ತಮಿಳುನಾಡು ಮರು ಮನವಿ, ಸರ್ವಪಕ್ಷ ನಿಯೋಗದಿಂದ ಜಲಶಕ್ತಿ ಸಚಿವರ ಭೇಟಿ

​​ತಮಿಳುನಾಡು ಸಚಿವ ದೊರೈಮುರುಗನ್‌ ಅವರ ನೇತೃತ್ವದಲ್ಲಿ ವಿವಿಧ ಪಕ್ಷಗಳ ಮುಖಂಡರು ಶುಕ್ರವಾರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಭೇಟಿಯಾಗಿದ್ದು ಒಂದು ಗಂಟೆಗೂ ಹೆಚ್ಚು ಕಾಲ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ.

Vijaya Karnataka 16 Jul 2021, 11:07 pm
ಹೊಸದಿಲ್ಲಿ: ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಕ್ಯಾತೆ ಮುಂದುವರಿಸಿದ್ದು, ಯೋಜನೆಗೆ ತಡೆ ನೀಡುವಂತೆ ತಮಿಳುನಾಡಿನ ಸರ್ವಪಕ್ಷಗಳ ನಿಯೋಗವು ಶುಕ್ರವಾರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
Vijaya Karnataka Web Mekedatu


ತಮಿಳುನಾಡು ಸಚಿವ ದೊರೈಮುರುಗನ್‌ ಅವರ ನೇತೃತ್ವದಲ್ಲಿ ವಿವಿಧ ಪಕ್ಷಗಳ ಮುಖಂಡರು ಒಂದು ಗಂಟೆಗೂ ಹೆಚ್ಚು ಕಾಲ ಸಚಿವ ಶೇಖಾವತ್‌ ಅವರೊಂದಿಗೆ ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುರುಗನ್‌, ''ಕಾವೇರಿ ತೀರದ ಕೆಳಪಾತ್ರದಲ್ಲಿನ ರಾಜ್ಯಗಳ ಪೂರ್ಣ ಅನುಮತಿ ಇಲ್ಲದೆಯೇ ಮೇಕೆದಾಟು ಯೋಜನೆಗೆ ಅನುಮತಿ ನೀಡಲ್ಲ, ಎಂದು ಸಚಿವ ಶೇಖಾವತ್‌ ಭರವಸೆ ಕೊಟ್ಟಿದ್ದಾರೆ. ಡಿಪಿಆರ್‌ನಲ್ಲಿ ಯಾವುದೇ ಷರತ್ತುಗಳನ್ನು ಕರ್ನಾಟಕ ಪೂರೈಸಿಲ್ಲ, ಹಾಗಾಗಿ ಅದನ್ನು ಒಪ್ಪಿಕೊಳ್ಳಲ್ಲ,'' ಎಂದು ಕೇಂದ್ರ ಸಚಿವರು ತಿಳಿಸಿದ್ದಾಗಿ ಹೇಳಿದ್ದಾರೆ.

ಮೇಕೆದಾಟು ಡ್ಯಾಂ ವಿವಾದ..! ಕರ್ನಾಟಕದ ವಾದವೇನು..? ತಮಿಳುನಾಡಿನ ವಿರೋಧವೇನು..?
ಏತನ್ಮಧ್ಯೆ, ಮೇಕೆದಾಟು ಯೋಜನೆಗೆ ತಡೆಹೇರುವಂತೆ ಆಗ್ರಹಿಸಲು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಅವರು ಜು.18ಕ್ಕೆ ದಿಲ್ಲಿಗೆ ತೆರಳಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಇದೇ ವೇಳೆ ರಾಷ್ಟ್ರಪತಿ ಹಾಗೂ ಕೆಲವು ಕೇಂದ್ರ ಸಚಿವರನ್ನು ಕೂಡ ಸ್ಟಾಲಿನ್‌ ಭೇಟಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ