ಆ್ಯಪ್ನಗರ

ತಮಿಳುನಾಡಿನಲ್ಲಿ ಏರುತ್ತಲೇ ಇದೆ ಸೋಂಕಿತರ ಸಂಖ್ಯೆ, ಶೀಘ್ರದಲ್ಲೇ 2 ಸ್ಥಾನಕ್ಕೆ ಜಿಗಿತ?

ಆಶ್ಚರ್ಯಕರ ಸಂಗತಿ ಅಂದ್ರೆ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ನಿನ್ನೆ ಒಂದೇ ದಿನ 798 ಪ್ರಕರಣಗಳು ಬೆಳಕಿಗೆ ಬಂದಿದ್ದು ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ವೇಗವನ್ನ ಸ್ಪಷ್ಟವಾಗಿ ತೋರಿಸುತ್ತಿದೆ.

TIMESOFINDIA.COM 12 May 2020, 10:26 am
ಚೆನ್ನೈ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಸೋಮವಾರದಂದು ಒಟ್ಟು 3,607 ಪ್ರಕರಣ ದೃಢಪಡುವ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ 70,000ದ ಗಡಿ ದಾಟಿದೆ. ಎರಡು ದಿನಗಳಲ್ಲಿ 10 ಸಾವಿರಕ್ಕೂ ಹೆಚ್ಚು ಪಾಸಿಟಿವ್‌ ಕೇಸ್‌ ದೃಢಪಡುವ ಮೂಲಕ ದೇಶದಲ್ಲಿ ಭಾರೀ ಕಳವಳ ಸೃಷ್ಟಿಯಾಗಿದೆ.
Vijaya Karnataka Web corona-agencies


ಇನ್ನು ರಾಜ್ಯಗಳು ಕೂಡ ನಾ ಮುಂದು ತಾ ಮುಂದು ಎನ್ನುವಂತೆ ಸೋಂಕಿತರನ್ನ ನೀಡುವಲ್ಲಿ ಪೈಪೋಟಿಗೆ ಬಿದ್ದಿವೆ. ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 1000 ಪ್ರಕರಣ ದೃಢಪಟ್ಟಿದೆ. ಆದ್ರೆ ಆಶ್ಚರ್ಯಕರ ಸಂಗತಿ ಅಂದ್ರೆ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ನಿನ್ನೆ ಒಂದೇ ದಿನ 798 ಪ್ರಕರಣಗಳು ಬೆಳಕಿಗೆ ಬಂದಿದ್ದು ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ವೇಗವನ್ನ ಸ್ಪಷ್ಟವಾಗಿ ತೋರಿಸುತ್ತಿದೆ.

ಗುಜರಾತನ್ನ ಹಿಂದಿಕ್ಕಲಿದ್ಯಾ ತಮಿಳುನಾಡು..!
ಸದ್ಯ ಇಡೀ ದೇಶಕ್ಕೆ ಹೋಲಿಸಿದ್ರೆ ಮಹಾರಾಷ್ಟ್ರ, ಗುಜರಾತ್‌ ಹಾಗೂ ತಮಿಳುನಾಡು. ಈ ಮೂರು ರಾಜ್ಯಗಳಲ್ಲಿ ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ದೇಶದ ಕೊರೊನಾ ಸೋಂಕಿತರ ಪೈಕಿ ಶೇ.66ರಷ್ಟು ಈ ರಾಜ್ಯಗಳಲ್ಲೇ ಇದೆ. ಆದ್ರೆ ಗುಜರಾತ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿದೆ. ಆದ್ರೆ ತಮಿಳುನಾಡಿನಲ್ಲಿ ಈ ಸಂಖ್ಯೆ ಭಾರೀ ಏರಿಕೆಯಾಗುತ್ತಿದೆ.

ಶುಶ್ರೂಷಕರ ದಿನದಂದು ದಾದಿಯರಿಗೆ ಶುಭಾಶಯ ಕೋರಿದ ಎಚ್‌ಡಿಕೆ

ಸೋಮವಾರಕ್ಕೆ ಗುಜರಾತ್‌ನಲ್ಲಿ 8,542 ಒಟ್ಟು ಸೋಂಕಿತ ಪ್ರಕರಣಗಳಿದ್ದರೆ ತಮಿಳುನಾಡಿನಲ್ಲಿ 8,002 ಇತ್ತು. ಇದು ತಮಿಳುನಾಡಿನಲ್ಲಿ ದಿನ ನಿತ್ಯ ಸೋಂಕಿತರ ಸಂಖ್ಯೆ ನಿಯಂತ್ರಣ ಮಾಡಲಾಗದಷ್ಟು ಏರಿಕೆಯಾಗುತ್ತಿದ್ದುದನ್ನ ಸೂಚಿಸುತ್ತಿದ್ದು, ನಿನ್ನೆ ಒಂದೇ ದಿನ 798 ಪ್ರಕರಣ ವರದಿಯಾಗಿದೆ. ಇದೇ ರೀತಿ ಮುಂದುವರಿದರೆ ನಮ್ಮ ರಾಜ್ಯ ಎರಡನೇ ಸ್ಥಾನಕ್ಕೆ ತಲುಪುವುದರಲ್ಲಿ ಡೌಟೇ‌ ಇಲ್ಲ ಅಂತ ಈಗ ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರು ನಿನ್ನೆ ಈ ಸಂಖ್ಯೆ ತುಂಬಾನೇ ಕಡಿಮೆಯಾಗಿರೋದು ಆರೋಗ್ಯ ಇಲಾಖೆಗೆ ತುಸು ನೆಮ್ಮದಿ ನೀಡಿದೆ. ಅಲ್ಲದೇ ಸಾವಿನ ಸಂಖ್ಯೆಯಲ್ಲೂ ಭಾರೀ ಇಳಿಕೆ ಕಾಣುತ್ತಿದೆ. ನಿನ್ನೆ ಒಟ್ಟು 82 ಸಾವು ಸಂಭವಿಸಿದೆ. ಎರಡು ದಿನಗಳ ಹಿಂದೆ ಇದು ದಿನ ನಿತ್ಯ 100ರ ಗಡಿ ದಾಟುತ್ತಿತ್ತು.

ಬೆಂಗಳೂರಿಗೆ ಮತ್ತೊಂದು ಸಂಕಷ್ಟ! ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದಾರಾ ಅಧಿಕಾರಿಗಳು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ