ಆ್ಯಪ್ನಗರ

ಮನೆಯಿಂದ ಬೆತ್ತಲಾಗಿ ಓಡಿದ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ, ದಾರಿಯಲ್ಲಿ ಸಿಕ್ಕ ಅಜ್ಜಿಯನ್ನು ಕಚ್ಚಿ ಕೊಂದ

ಜಗತ್ತಿನಾದ್ಯಂತ ಕೊರೊನಾ ವೈರಸ್‌ ಆರ್ಭಟಿಸುತ್ತಿದ್ದು, ಸಾವಿರಗಳ ಲೆಕ್ಕದಲ್ಲಿ ಜನರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದೆ. ಈಗ ಇದರ ಜೊತೆ ಕೊರೊನಾ ಹರಡಬಾರದೆಂದು ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲ್ಪಟ್ಟವರ ಕಾಟ ಜೋರಾಗಿದ್ದು, ತಮಿಳುನಾಡಿನ ಹಳ್ಳಿಯೊಂದರಲ್ಲಿ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ 90 ವರ್ಷದ ಅಜ್ಜಿಯನ್ನ ಕಚ್ಚಿ ಕೊಂದಿದ್ದಾನೆ.

Vijaya Karnataka Web 29 Mar 2020, 5:27 pm
ಚೆನ್ನೈ: ಒಂದ್ಕಡೆ ಕೊರೊನಾ ವೈರಸ್‌ ಕಾಟ ಆದ್ರೆ, ಮತ್ತೊಂದ್ಕಡೆ ಫಾರೀನ್‌ನಿಂದ ಬಂದು ಮನೇಲಿರದೇ ಎಲ್ಲರಿಗೂ ಸೋಂಕು ಹರಡಿಸಬೇಕೆಂದು ಓಡಾಡ್ತಿರೋರ್‌ ಕಾಟ. ಆದರೆ, ತಮಿಳುನಾಡಿನ ಹಳ್ಳಿಯೊಂದರಲ್ಲಿ ಇವೆರಡಕ್ಕಿಂತ ಭಿನ್ನ ಘಟನೆ ನಡೆದಿದ್ದು, ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬ ಮಹಿಳೆಯ ಕತ್ತು ಕಚ್ಚಿ ಕೊಂದಿರುವ ಘಟನೆ ನಡೆದಿದೆ.
Vijaya Karnataka Web CRIME


ಹೌದು, ಶ್ರೀಲಂಕಾದಿಂದ ಹಿಂತಿರುಗಿ ಹೋಂ ಕ್ವಾರಂಟೈನ್‌ನಲ್ಲಿದ್ದ 34 ವರ್ಷದ ವ್ಯಕ್ತಿಯೊಬ್ಬ ತಮಿಳುನಾಡಿನ ಥೇಣಿ ಜಿಲ್ಲೆಯ ಜಕ್ಕಮಾನಯನಪಟ್ಟಿ ಎಂಬ ಹಳ್ಳಿಯಲ್ಲಿ ಮಹಿಳೆಯ ಕತ್ತನ್ನು ಕಚ್ಚಿ ಕೊಂದಿದ್ದಾನೆ. ರಾತ್ರಿ ಮನೆಯಿಂದ ಬೆತ್ತಲೆಯಾಗಿ ಓಡಿಹೋದ ವ್ಯಕ್ತಿಯು 90 ವರ್ಷದ ಮಹಿಳೆಯ ಕುತ್ತಿಗೆಗೆ ಕಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ವೃದ್ಧೆ ಮೃತಪಟ್ಟಿದ್ದಾಳೆ. ಮೃತ ಮಹಿಳೆಯನ್ನು ನಾಚಿಮಲ್‌ ಎಂದು ಗುರುತಿಸಲಾಗಿದೆ. ರಾತ್ರಿ ಮನೆಯ ಹೊರಗಡೆ ಕುಳಿತಾಗ ಘಟನೆ ನಡೆದಿದೆ. ಆರೋಪಿಯನ್ನು ಮಣಿಕಂಠನ್‌ ಎಂದು ಗುರುತಿಸಲಾಗಿದ್ದು, ಮಾನಸಿಕ ಅಸ್ವಸ್ಥ ಎನ್ನಲಾಗಿದೆ.

ಬಂದಿದೆ ಕೊರೊನಾ ಹೆಲ್ಮೆಟ್: ಪೊಲೀಸರ ತಲೆ ಮೇಲೆ ಕಂಡು ಮನೆಗೆ ಓಡಿದವರೆಷ್ಟೋ?

2010ರಲ್ಲಿ ಮಧುರೈನಲ್ಲಿ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆದಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. ಶ್ರೀಲಂಕಾದಿಂದ ಬಂದ ನಂತರ ಮನೆಯಲ್ಲಿಯೇ ಇದ್ದದ್ದರಿಂದ ಶುಕ್ರವಾರ ರಾತ್ರಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಓಡಿಹೋಗಿದ್ದಾನೆ. ಜಕ್ಕಮಾನಯನಪಟ್ಟಿಯಲ್ಲಿನ ಮನೆಯಿಂದ 100 ಮೀಟರ್ ದೂರದಲ್ಲಿರುವ ಭಕ್ತ ಸೇವಾ ಟ್ರಸ್ಟ್‌ ರಸ್ತೆಯಲ್ಲಿ ಮನೆಯಿಂದ ಹೊರಗಡೆ ಕೂತಿದ್ದ ವೃದ್ಧ ಮಹಿಳೆಯನ್ನು ಗುರಿಯಾಗಿಸಿಕೊಂಡು ಕುತ್ತಿಗೆಗೆ ಕಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊರೊನಾ ವೈರಸ್‌ಗೆ 'ಡ್ರೋನ್‌' ಸಡ್ಡು..! ಚೆನ್ನೈ ನಗರಾದ್ಯಂತ ಸೋಂಕು ನಿವಾರಕ ಸಿಂಪಡಣೆ..

ಆರೋಪಿಯ ಕುಟುಂಬಸ್ಥರು ಹೇಳುವಂತೆ, ಮಣಿಕಂಠನ್ ಶ್ರೀಲಂಕಾದಿಂದ ಹಿಂತಿರುಗಿದ್ದ, ಅಲ್ಲಿ ಮಾಡುತ್ತಿದ್ದ ವ್ಯಾಪಾರದಲ್ಲಿ ಉಂಟಾದ ನಷ್ಟದ ಬಗ್ಗೆ ತಲೆಕೆಡಿಸಿಕೊಂಡಿದ್ದರಿಂದ ಅವನ ಮಾನಸಿಕ ಆರೋಗ್ಯ ಹದಗೆಟ್ಟಿತ್ತು ಎಂದು ಹೇಳಿದ್ದಾರೆ. ಸದ್ಯ ಆರೋಪಿ ಮಣಿಕಂನ್‌ನ್ನು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಆರೋಗ್ಯ ಇಲಾಖೆಯ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ತಮಿಳುನಾಡಿನಲ್ಲಿ ಐದು ಹೊಸ ಕೋವಿಡ್‌ 19 ಪ್ರಕರಣ ಪತ್ತೆ: ಒಟ್ಟು ಸೋಂಕಿತರು 23

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ