ಆ್ಯಪ್ನಗರ

ಕಮಲ್ ಹಾಸನ್‌‌ ಪಕ್ಷದ ಹಿರಿಯ ನಾಯಕ ಅರುಣಾಚಲಂ ಬಿಜೆಪಿಗೆ ಸೇರ್ಪಡೆ!

ಮೂಲತಃ ತೂತ್ತುಕುಡಿ ಜಿಲ್ಲೆಯ ಅರುಣಾಚಲಂ, ಎಂಎನ್‌ಎಂ ಪಕ್ಷ ಗ್ರಾಮೀಣ ಭಾಗದಲ್ಲಿ ನೆಲೆ ಕಂಡುಕೊಳ್ಳಲು ಬಹುವಾಗಿ ಶ್ರಮಿಸಿದ್ದರು. ಆದರೆ ಕಮಲ್‌ ಹಾಸನ್‌ ಪಕ್ಷವನ್ನು ಮುನ್ನಡೆಸುತ್ತಿರುವ ರೀತಿ ಕುರಿತು ಅವರಿಗೆ ತೀವ್ರ ಅಸಮಾಧಾನವಿತ್ತು.

Agencies 25 Dec 2020, 9:15 pm
ಚೆನ್ನೈ: ಮುಂಬರುವ ವಿಧಾನಸಭೆ ಚುನಾವಣೆಯ ಪ್ರಚಾರ ಆರಂಭಿಸಿರುವ ಸಮಯದಲ್ಲಿ ಪಕ್ಷದ ಹಿರಿಯ ನಾಯಕರೊಬ್ಬರು ಬಿಜೆಪಿ ಸೇರ್ಪಡೆಯಾಗಿರುವುದರಿಂದ ‘ಮಕ್ಕಳ್‌ ನೀಧಿ ಮಯ್ಯಮ್‌’ (ಎಂಎನ್‌ಎಂ) ಪಕ್ಷದ ಸ್ಥಾಪಕ, ನಟ ಕಮಲ್‌ ಹಾಸನ್‌ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಎ. ಅರುಣಾಚಲಂ ಅವರು ಶುಕ್ರವಾರ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.
Vijaya Karnataka Web A Arunachalam Prakash Javadekar


ಮೂಲತಃ ತೂತ್ತುಕುಡಿ ಜಿಲ್ಲೆಯ ಹಳ್ಳಿಯವರಾಗಿರುವ ಅರುಣಾಚಲಂ ಅವರು ಎಂಎನ್‌ಎಂ ಗ್ರಾಮೀಣ ಭಾಗದಲ್ಲಿ ನೆಲೆ ಕಂಡುಕೊಳ್ಳಲು ಬಹುವಾಗಿ ಶ್ರಮಿಸಿದ್ದರು. ಆದರೆ ಕಮಲ್‌ ಹಾಸನ ಪಕ್ಷ ಮುನ್ನಡೆಸುತ್ತಿರುವ ರೀತಿ ಕುರಿತು ಅವರಿಗೆ ತೀವ್ರ ಅಸಮಾಧಾನವಿತ್ತು. ಜತೆಗೆ, ಪಕ್ಷ ಆರಂಭಿಸಿರುವ ವಿಧಾನಸಭೆ ಚುನಾವಣೆ ಸಿದ್ಧತೆ ಮತ್ತು ಪ್ರಚಾರದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಬೇಸರವೂ ಇತ್ತು. ಹೀಗಾಗಿ ಪಕ್ಷ ತೊರೆದಿರುವುದು ಮಾತ್ರವಲ್ಲದೆ ಕಮಲ್‌ ಹಾಸನ್‌ ಕಟುವಾಗಿ ಟೀಕಿಸುತ್ತಿರುವ ಬಿಜೆಪಿಗೇ ಸೇರ್ಪಡೆಯಾಗಿದ್ದಾರೆ.

ತಮಿಳುನಾಡು ವಿಧಾನಸಭೆಗೆ 2021ರ ಏಪ್ರಿಲ್‌, ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಮನೆಗೆಲಸ ಮಾಡುವ ಗೃಹಿಣಿಯರಿಗೆ ವೇತನ ನೀಡುವುದೂ ಸೇರಿದಂತೆ ಏಳು ಅಂಶಗಳ ಕಾರ್ಯಸೂಚಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿರುವ ಕಮಲ್‌ ಹಾಸನ್‌, ಒಂದು ಸುತ್ತಿನ ಪ್ರಚಾರವನ್ನೂ ಮುಗಿಸಿದ್ದಾರೆ.

ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೂ ವೇತನ - ಕಮಲ್ ‌ಹಾಸನ್‌ ಭರವಸೆ
ಡಿಎಂಕೆ ಮತ್ತು ಎಐಎಡಿಎಂಕೆ ಜತೆ ಮೈತ್ರಿ ಇಲ್ಲಎಂದು ಸ್ಪಷ್ಟಪಡಿಸಿರುವ ಅವರು, ನಟ ರಜನಿಕಾಂತ್‌ ಆರಂಭಿಸಲಿರುವ ರಾಜಕೀಯ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ