ಆ್ಯಪ್ನಗರ

ಎಷ್ಟೇ ಹಿರಿಯ ನಾಯಕರಾದರೂ ಪಕ್ಷದ ಶಿಸ್ತನ್ನು ಪಾಲಿಸಬೇಕು - ದಿನೇಶ್‌ ಗುಂಡೂರಾವ್‌

ಕಾಂಗ್ರೆಸ್‌ ನಾಯಕರು ‘ಪಂಚತಾರಾ ಹೋಟೆಲ್‌ ಸಂಸ್ಕೃತಿ’ ಬಿಟ್ಟು, ಜನರಿಗೆ ಹತ್ತಿರವಾಗಬೇಕು ಎಂದು ಹಿರಿಯ ಮುಖಂಡ ಗುಲಾಮ್‌ ನಬಿ ಆಜಾದ್‌ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ದಿನೇಶ್‌ ಗುಂಡೂರಾವ್‌ ಈ ಕಿವಿಮಾತು ಹೇಳಿದ್ದಾರೆ.

Agencies 23 Nov 2020, 8:29 pm
ಕೊಯಮತ್ತೂರು: ಕಾಂಗ್ರೆಸ್‌ನಲ್ಲಿ ಎಷ್ಟೇ ಹಿರಿಯ ನಾಯಕರಾದರೂ ಪಕ್ಷದ ಶಿಸ್ತನ್ನು ಕಾಯ್ದುಕೊಳ್ಳಬೇಕು ಮತ್ತು ಏನೇ ಅಸಮಾಧಾನವಿದ್ದರೂ ಅದನ್ನು ಪಕ್ಷದ ವೇದಿಕೆಗಳಲ್ಲಿ ಮಾತ್ರ ಹಂಚಿಕೊಳ್ಳಬೇಕು ಎಂದು ಎಐಸಿಸಿ ತಮಿಳುನಾಡು ಉಸ್ತುವಾರಿ ದಿನೇಶ್‌ ಗುಂಡೂರಾವ್‌ ಸೂಚಿಸಿದ್ದಾರೆ.
Vijaya Karnataka Web AICC in-charge for Tamil Nadu Dinesh Gundu Rao


"ಕಾಂಗ್ರೆಸ್‌ ನಾಯಕರು ‘ಪಂಚತಾರಾ ಹೋಟೆಲ್‌ ಸಂಸ್ಕೃತಿ’ ಬಿಟ್ಟು, ಜನರಿಗೆ ಹತ್ತಿರವಾಗಬೇಕು," ಎಂಬ ಪಕ್ಷದ ಹಿರಿಯ ಮುಖಂಡ ಗುಲಾಮ್‌ ನಬಿ ಆಜಾದ್‌ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಗುಂಡೂರಾವ್‌ ಈ ಕಿವಿಮಾತು ಹೇಳಿದ್ದಾರೆ.

"ಕೆಲವು ಹಿರಿಯ ನಾಯಕರು ಏನಾದರೂ ಹೇಳುವುದಿದ್ದರೆ ಅದನ್ನು ಪಕ್ಷದ ವೇದಿಕೆಗಳಲ್ಲಿ ತಿಳಿಸಬೇಕು. ಅವರು ಹಿರಿಯ ನಾಯಕರಾದ್ದರಿಂದ ಅವರ ಬಗ್ಗೆ ನಮಗೆ ಗೌರವವಿದೆ. ಪ್ರತಿಯೊಬ್ಬರೂ ಪಕ್ಷದ ಶಿಸ್ತನ್ನು ಪಾಲಿಸಬೇಕು. ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಬೇಕು. ಪಕ್ಷದಲ್ಲಿ ಅಭಿಪ್ರಾಯ ತಿಳಿಸಲು ವೇದಿಕೆಗಳಿವೆ, ಸಮಿತಿಗಳಿವೆ. ಅಲ್ಲಿ ಕುಳಿತು ಚರ್ಚಿಸಲಿ. ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದಕ್ಕಿಂತಲೂ ಇದು ಒಳಿತು," ಎಂದು ಗುಂಡೂರಾವ್‌ ಸಲಹೆ ನೀಡಿದ್ದಾರೆ. "ಇಂದು ನಮ್ಮ ಮುಂದೆ ಸವಾಲಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಅದನ್ನು ಎದುರಿಸಲು ಶಿಸ್ತನ್ನು ಮೀರುವ ಅಗತ್ಯವಿಲ್ಲ," ಎಂದಿದ್ದಾರೆ.

5 ಸ್ಟಾರ್ ಸಂಸ್ಕೃತಿ ಬಿಡುವವರೆಗೂ ಗೆಲುವು ಅಸಾಧ್ಯ: ಕಾಂಗ್ರೆಸ್‌ ನಾಯಕ ಆಜಾದ್ ಆತ್ಮಾವಲೋಕನ
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ‘ವಂಶಪಾರಂಪರ್ಯ ರಾಜಕೀಯ’ ಹೇಳಿಕೆಗೆ ಗುಂಡೂರಾವ್‌ ತಿರುಗೇಟು ನೀಡಿದ್ದಾರೆ. "ಬಿಜೆಪಿಯಲ್ಲಿ ಎಷ್ಟು ಮಂದಿ ಸಿಂಧಿಯಾಗಳಿದ್ದಾರೆ? ರಾಜಕೀಯವು ಎಲ್ಲರಿಗೂ ತೆರೆದಿರುವಂಥದ್ದು. ವೈದ್ಯನ ಮಗ ವೈದ್ಯನಾಗುವಾಗ, ಸಿನಿಮಾ ನಟನ ಮಕ್ಕಳು ತಾವೂ ನಟರಾಗುವಾಗ, ರಾಜಕಾರಣಿಯ ಮಕ್ಕಳು ರಾಜಕಾರಣಿಗಳಾಗುವುದರಲ್ಲಿ ತಪ್ಪೇನಿದೆ?" ಎಂದು ಅವರು ಪ್ರಶ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ