ಆ್ಯಪ್ನಗರ

ತಿರುಚ್ಚಿ: ಟ್ರಾಕ್ಟರ್‌ ಹರಿಸಿ ಸಬ್‌ ಇನ್‌ಸ್ಪೆಕ್ಟರ್‌ ಹತ್ಯೆ ಹತ್ನ

ಟ್ರಾಕ್ಟರ್‌ ಹರಿಸಿ ಸಬ್‌ ಇನ್‌ಸ್ಪೆಕ್ಟರ್‌ ಹತ್ಯೆಗೆ ಪ್ರಯತ್ನ ನಡೆಸಲಾಗಿದೆ. ತಮಿಳುನಾಡಿನ ತಿರುಚ್ಚಿ ಭಾಗದಲ್ಲಿ ಘಟನೆ ನಡೆದಿದ್ದು, ಅಕ್ರಮ ಮರಳು ಗಣಿಗಾರಿಕೆ ನಡೆಸಿ, ಸಾಗಿಸುತ್ತಿದ್ದ ವೇಳೆ ತಡೆದ ಸಬ್‌ಇನ್‌ಸ್ಪೆಕ್ಟರ್‌ ಹಾಗೂ ಹೋಂ ಗಾರ್ಡ್‌ ಮೇಲೆ ಟ್ರಾಕ್ಟರ್‌ ಹರಿಸಿ ಹತ್ಯೆಗೈಯ್ಯಲು ಪ್ರಯತ್ನಿಸಲಾಗಿದೆ.

TNN 8 Feb 2020, 4:12 pm
ತಿರುಚ್ಚಿ: ಅಕ್ರಮ ಮರಳು ಗಣಿಗಾರಿಕೆ ತಡೆಯಲು ಮುಂದಾದ ಸಬ್‌ ಇನ್‌ಸ್ಪೆಕ್ಟರ್‌ ಹತ್ಯೆ ಪ್ರಯತ್ನ ತಮಿಳುನಾಡಿನ ಕರೂರ್‌ನಲ್ಲಿ ನಡೆದಿದೆ.
Vijaya Karnataka Web sand

ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದ ನಾಲ್ವರನ್ನು ಗುಂಪನ್ನು ಪತ್ತೆ ಮಾಡಿದ ಪಲವಿದುಥಿ ಪೊಲೀಸ್‌ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ತಂಗವೇಲ್‌, ಆರೋಪಿಗಳು ಪರಾರಿಯಾಗದಂತೆ ತಡೆಯಲೆತ್ನಿಸಿದ್ದಾರೆ. ಈ ವೇಳೆ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ತಂಗವೇಲ್‌ ಹಾಗೂ ಗೃಹ ರಕ್ಷಕ ದಳದ ಕಾನ್‌ಸ್ಟೇಬಲ್‌ ಒಬ್ಬರು ರೌಂಡ್ಸ್‌ಗೆ ತೆರಳಿದ್ದಾರೆ. ಠಾಣೆಯ ಬೈಕ್‌ನಲ್ಲಿ ಇಬ್ಬರು ಚಿಂತಮಣಿಪಟ್ಟಿಯ ಭಾಗದಲ್ಲಿ ಸಾಗುತ್ತಿರುವ ವೇಳೆ, 2 ಟ್ರಾಕ್ಟರ್‌ನಲ್ಲಿ ಮರಳು ಸಾಗಿಸುತ್ತಿರುವುದನ್ನು ಕಂಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ತಂಗವೇಲ್‌, ಟ್ರಾಕ್ಟರ್‌ ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಆದರೆ ತಂಗವೇಲ್‌ ಮೇಲೆಯೇ ಟ್ರಾಕ್ಟರ್‌ ಹರಿಸಿ, ಹತ್ಯೆ ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ: ತಮಿಳುನಾಡಿಗೆ 2 ಸಾವಿರ ಕೋಟಿ ಅನುದಾನ

ಘಟನೆಯಲ್ಲಿ ತಂಗವೇಲ್‌ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ರಾಕ್ಟರ್‌ ಚಾಲಕರನ್ನು ಎಂ ಅಜಯ್‌ ಹಾಗೂ ಎಂ. ಸೆಂಥಿಲ್‌ ಎಂದು ಗುರುತಿಸಲಾಗಿದೆ. 2 ಟ್ರಾಕ್ಟರ್‌ಗಳು ಎಸ್‌ ನಾಗಪ್ಪನ್‌ ಹಾಗೂ ಎಲ್‌ ಸೆಲ್ವಮ್‌ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ