ಆ್ಯಪ್ನಗರ

4 ವರ್ಷದ ಜೈಲುವಾಸ ಬಳಿಕ ಬೆಂಗಳೂರಿನಿಂದ ತವರೂರಿಗೆ ಹೊರಟ ಶಶಿಕಲಾ ನಟರಾಜನ್‌

ತನ್ನನ್ನು ಬರಮಾಡಿಕೊಳ್ಳುವ ಸಮಯದಲ್ಲಿ ಎಐಎಡಿಎಂಕೆಯ ಪತಾಕೆಗಳು, ಭಿತ್ತಿ ಪತ್ರಗಳನ್ನು ಹಿಡಿಯದಂತೆ ಚಿನ್ನಮ್ಮ ಕಟ್ಟುನಿಟ್ಟಾಗಿ ಶಶಿಕಲಾ ಆದೇಶಿಸಿದ್ದಾರೆ ಎನ್ನಲಾಗಿದೆ. ಇನ್ನು ಟ್ವಿಟ್ಟರ್‌ನಲ್ಲಿ ಶಶಿಕಲಾ ಅವರನ್ನು ತಮಿಳುನಾಡು ಸ್ವಾಗಿಸುತ್ತಿದೆ ಎಂಬ ಹ್ಯಾಷ್‌ಟ್ಯಾಗ್‌ ಕೂಡ ಟ್ರೆಂಡಿಂಗ್‌ನಲ್ಲಿದೆ.

Vijaya Karnataka Web 8 Feb 2021, 8:54 am
ಬೆಂಗಳೂರು: ಬರೋಬ್ಬರಿ 4 ವರ್ಷಗಳ ಜೈಲುವಾಸದ ಬಳಿಕ ಇದೀಗ ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ ಶಶಿಕಲಾ ಅವರು ಚೆನ್ನೈಗೆ ತೆರಳಿದ್ದಾರೆ. ದೇವನಹಳ್ಳಿ ರೆಸಾಟರ್ಟ್‌ನಿಂದ ಚಿನ್ನಮ್ಮ ಖ್ಯಾತಿಯ ಶಶಿಕಲಾ ಅವರು ಚೆನ್ನೈನತ್ತ ತೆರಳಿದ್ದಾರೆ. ರೆಸಾರ್ಟಿನಿಂದ ಹೊರಡುವುದಕ್ಕೂ ಮುನ್ನ ಶಶಿಕಲಾ ಅವರು ದಿವಂಗತ ಜಯಲಲಿತಾ ಅವರ ಫೋಟೋಗೆ ಕೈಮುಗಿದು ಹೊರಟಿದ್ದಾರೆ.
Vijaya Karnataka Web EtrEcgeVkAEIXEQ


ದಾರಿ ಮಧ್ಯೆ ಶಶಿಕಲಾ ಅವರಿಗೆ ಬೆಂಬಲಿಗರು ಹೂಮಳೆ ಸುರಿಸಿದ್ದಾರೆ. ಅಲ್ಲದೆ ರಸ್ತೆಯುದ್ದಕ್ಕೂ ಬೆಂಬಲಿಗರು ಶಶಿಕಲಾ ಅವರಿಗೆ ಜೈಕಾರ ಹಾಕಿದ್ದು, ವಾದ್ಯ-ವಾಲಗಗಳ ಮೂಲಕ ಅದ್ದೂರಿ ಸ್ವಾಗತ ಕೋರಿದ್ದಾರೆ. ಚಿನ್ನಮ್ಮ ಕೂಡ ಬೆಂಬಲಿಗರಿಗೆ ಕೈ ಮುಗಿದು ಮುಂದೆ ಸಾಗಿದ್ದಾರೆ. ಶಶಿ ಕಲಾ ಅವರನ್ನು ಸ್ವಾಗತಿಸಲು ತಮಿಳುನಾಡಿನ ಟಿ ನಗರ ಸೇರಿ ವಿವಿಧೆಡೆ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ.

ಇನ್ನು ತನ್ನನ್ನು ಬರಮಾಡಿಕೊಳ್ಳುವ ಸಮಯದಲ್ಲಿ ಎಐಎಡಿಎಂಕೆಯ ಪತಾಕೆಗಳು, ಭಿತ್ತಿ ಪತ್ರಗಳನ್ನು ಹಿಡಿಯದಂತೆ ಚಿನ್ನಮ್ಮ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ ಎನ್ನಲಾಗಿದೆ. ಇನ್ನು ಟ್ವಿಟ್ಟರ್‌ನಲ್ಲಿ ಶಶಿಕಲಾ ಅವರನ್ನು ತಮಿಳುನಾಡು ಸ್ವಾಗಿಸುತ್ತಿದೆ ಎಂಬ ಹ್ಯಾಷ್‌ಟ್ಯಾಗ್‌ ಕೂಡ ಟ್ರೆಂಡಿಂಗ್‌ನಲ್ಲಿದೆ.

ರಜನಿಕಾಂತ್‌ ಇಲ್ಲದ ರಾಜಕೀಯದಲ್ಲಿ ಗೇಮ್‌ ಚೇಂಜರ್‌ ಆಗಲಿದ್ದಾರಾ ಶಶಿಕಲಾ?

ಅಕ್ರಮ ಆಸ್ತಿ ಹೊಂದಿದ ಅರೋಪದಡಿಯಲ್ಲಿ ಆದಾಯ ತೆರಿಗೆ ಇಲಾಖೆ ಬೆನಾಮಿ ವಹಿವಾಟು (ನಿಷೇಧ) ಕಾಯ್ದೆಯಡಿ ದೂರು ದಾಖಲಿಸಿಕೊಂಡಿತ್ತು. ಈ ಪ್ರಕರಣದಲ್ಲಿ ಶಶಿಕಲಾ ದೋಷಿ ಎಂಬ ಆದೇಶ ಹೊರಬಿದ್ದಿತ್ತು. ಈ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ವಾಸಕ್ಕೆ ಸೂಚನೆ ನೀಡಲಾಗಿತ್ತು. ಜನವರಿ 27ರಂದು ಶಶಿಕಲಾ ಜೈಲಿನಿಂದ ರಿಲೀಸ್‌ ಆಗಿದ್ದರು.

ಆದರೆ ಕೊರೊನಾ ಪಾಸಿಟಿವ್ ಆದ ಹಿನ್ನೆಲೆ ಚಿಕಿತ್ಸೆ ಪಡೆದು, ಬಳಿಕ ಹೋಮ್‌ ಕ್ವಾರಂಟೈನ್‌ ಮುಗಿಸಿಕೊಂಡಿದ್ದಾರೆ. ಇನ್ನು ಚಿನ್ನಮ್ಮ ತಮಿಳುನಾಡಿಗೆ ಎಂಟ್ರಿ ಕೊಡುವ ಮೂಲಕ ದ್ರಾವಿಡ ನಾಡಿನ ರಾಜಕೀಯದಲ್ಲಿ ಅಲ್ಲೋಲಕಲ್ಲೋಲವಾಗಲಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ