ಆ್ಯಪ್ನಗರ

10 ಕೋಟಿ ರೂ. ದಂಡ ಕಟ್ಟಿದ ಶಶಿಕಲಾ ನಟರಾಜನ್‌..! ಅವಧಿಗೂ ಮುನ್ನವೇ ಜಯಲಿತಾ ಆಪ್ತೆ ಬಿಡುಗಡೆ ಸಾಧ್ಯತೆ

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿಯಾಗಿದ್ದ ವಿ.ಕೆ.ಶಶಿಕಲಾ ನಟರಾಜನ್‌ ಕೋರ್ಟ್‌ ವಿಧಿಸಿದ್ದ 10 ಕೋಟಿ ರೂ. ದಂಡವನ್ನು ಸಂಪೂರ್ಣವಾಗಿ ಪಾವತಿಸಿದ್ದಾರೆ. ಈ ಹಿನ್ನೆಲೆ ಬೆಂಗಳೂರಿನ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಜಯಲಲಿತಾ ಆಪ್ತೆ ಅವಧಿಗೂ ಮುನ್ನವೇ ಬಿಡುಗಡೆಯಾಗುವ ಸಾಧ್ಯತೆ ಇದೆ.

Vijaya Karnataka Web 18 Nov 2020, 11:33 pm
ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿಯಾಗಿ ಬೆಂಗಳೂರಿನ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾ ನಟರಾಜನ್‌, ಕೋರ್ಟ್‌ ತಮಗೆ ವಿಧಿಸಿದ್ದ 10 ಕೋಟಿ ರೂ. ದಂಡವನ್ನು ಪೂರ್ಣವಾಗಿ ಪಾವತಿಸಿದ್ದಾರೆ.
Vijaya Karnataka Web sasikala s legal team pays fine of rs 10 crores to court was jailed in disproportionate assets case
10 ಕೋಟಿ ರೂ. ದಂಡ ಕಟ್ಟಿದ ಶಶಿಕಲಾ ನಟರಾಜನ್‌..! ಅವಧಿಗೂ ಮುನ್ನವೇ ಜಯಲಿತಾ ಆಪ್ತೆ ಬಿಡುಗಡೆ ಸಾಧ್ಯತೆ


34ನೇ ಸಿವಿಲ್‌ ನ್ಯಾಯಾಲಯಕ್ಕೆ ದಂಡದ ಮೊತ್ತವನ್ನು ಪಾವತಿಸಲಾಗಿದೆ ಎಂದು ಶಶಿಕಲಾ ಪರ ವಕೀಲ ಎನ್‌. ರಾಜಾ ಸೆಂದೂರ್‌ ಪಾಂಡಿಯನ್‌ ತಿಳಿಸಿದ್ದಾರೆ. ಶೀಘ್ರವೇ ಈ ಸಂಬಂಧ ಕೋರ್ಟ್‌ನಿಂದ ಕಾರಾಗೃಹ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗಲಿದ್ದು, ನಿಗದಿಯಾಗಿರುವ 2021ರ ಜ.27ಕ್ಕೂ ಮೊದಲೇ ಶಶಿಕಲಾ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.

ಸನ್ನಡತೆ ಆಧಾರದ ಮೇಲೆ ಶಶಿಕಲಾ ಅವರ ಪೂರ್ವ ಬಿಡುಗಡೆಗೆ ಅವಕಾಶ ಇದೆ ಎಂದು ಪಾಂಡಿಯನ್‌ ಅಭಿಪ್ರಾಯಪಟ್ಟಿದ್ದಾರೆ. 2017ರ ಫೆ.15ರಂದು ಕರ್ನಾಟಕ ಹೈಕೋರ್ಟ್‌ನ ಖುಲಾಸೆ ಆದೇಶವನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿತ್ತು. ಆ ಮೂಲಕ ವಿಶೇಷ ನ್ಯಾಯಾಲಯ 2014ರಲ್ಲಿ ವಿಧಿಸಿದ್ದ ಶಶಿಕಲಾ ಸೇರಿದಂತೆ ಆಕೆಯ ಇಬ್ಬರು ಸಂಬಂಧಿಗಳಾದ ವಿ.ಎನ್‌. ಸುಧಾಕರನ್‌ ಮತ್ತು ಜೆ. ಇಳವರಸಿಯನ್ನು ಅಪರಾಧಿಗಳು ಎಂದು ಘೋಷಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದಿತ್ತು.

ಜಯಲಲಿತಾ ಆಪ್ತೆ ಶಶಿಕಲಾಗೆ ಸೇರಿದ 2000 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಆತಂಕ ಇಲ್ಲ ಎಂದ ಪಳನಿಸ್ವಾಮಿ
ಶಶಿಕಲಾ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಸಿಎಂ ಎ.ಕೆ. ಪಳನಿಸ್ವಾಮಿ, ''ನನಗೆ ತಿಳಿದ ಮಟ್ಟಿಗೆ ಶಶಿಕಲಾ ಪುನರಾಗಮನದಿಂದ ರಾಜಕೀಯ ಮತ್ತು ಸರಕಾರದ ಮೇಲೆ ಯಾವುದೇ ಪ್ರಭಾವ ಆಗುವುದಿಲ್ಲ. ಎಐಎಡಿಎಂಕೆಯಲ್ಲಿ ಆಂತರಿಕವಾಗಿಯೂ ಶಶಿಕಲಾರಿಂದ ಯಾವುದೇ ಪ್ರಭಾವ ಬೀರಲು ಸಾಧ್ಯ ಆಗುವುದಿಲ್ಲ,'' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ನಡೆದ ಎಐಎಡಿಎಂಕೆ ಪ್ರಧಾನ ಸಭೆಯಲ್ಲಿ, ಮುಂಬರುವ ಚುನಾವಣೆಗೆ ಸಿಎಂ ಅಭ್ಯರ್ಥಿಯಾಗಿ ಪಳನಿಸ್ವಾಮಿ ಅವರನ್ನೇ ಆಯ್ಕೆ ಮಾಡಲಾಗಿದೆ.

ಪರಪ್ಪನ ಅಗ್ರಹಾರದಿಂದ ಹೊರಬರಲಿದ್ದಾರೆ ಶಶಿಕಲಾ ನಟರಾಜನ್, ಕಡೆಗೂ ಬಿಡುಗಡೆ ದಿನಾಂಕ ನಿಗದಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ