ಆ್ಯಪ್ನಗರ

ಸ್ಮಾರಕವಾಗಲಿದೆ ಜಯಲಲಿತಾ ನಿವಾಸ: ತಮಿಳುನಾಡು ಸರಕಾರದಿಂದ ಸ್ವಾಧೀನ ಪ್ರಕ್ರಿಯೆ

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ನಿವಾಸವನ್ನು ಸ್ಮಾರಕವನ್ನಾಗಿಸಲಾಗುತ್ತದೆ. ಈ ಹಿನ್ನೆಲೆ ಚೆನ್ನೈನ ಪೊಯೆಸ್‌ ಗಾರ್ಡನ್‌ನಲ್ಲಿರುವ ನಿವಾಸವನ್ನು ತಮಿಳುನಾಡು ಸರಕಾರ ಸ್ವಾಧೀನಪಡಿಸಿಕೊಳ್ಳುತ್ತಿದೆ.

TIMESOFINDIA.COM 6 May 2020, 1:50 pm
ಚೆನ್ನೈ: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸವನ್ನು ಸ್ವಾಧೀನಪಡಿಸಿಕೊಳ್ಳಲು ತಮಿಳುನಾಡು ಸರಕಾರ ಮುಂದಾಗಿದೆ. ಈ ಸಂಬಂಧ ಸಾರ್ವಜನಿಕ ನೋಟಿಸ್‌ ಅನ್ನು ಪಳನಿಸ್ವಾಮಿ ಸರಕಾರ ನೀಡಿದೆ.
Vijaya Karnataka Web jayalalithaa house toi


ಸಾರ್ವಜನಿಕ ವಿಚಾರಣೆಯನ್ನು ನಡೆಸಿದ ಒಂದು ವರ್ಷಕ್ಕೂ ಹೆಚ್ಚು ಸಮಯದ ಬಳಿಕ ತಮಿಳುನಾಡಿನ ಎಐಎಡಿಎಂಕೆ ಸರಕಾರವು ಬುಧವಾರ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪೋಯಸ್ ಗಾರ್ಡನ್‌ನಲ್ಲಿರುವ ವೇದಾ ನಿಲಯಂ ಅನ್ನು ಸ್ವಾಧೀನಪಡಿಸಿಕೊಳ್ಳಲು ಸಾರ್ವಜನಿಕ ನೋಟಿಸ್ ನೀಡಿದೆ. ಜಯಲಲಿತಾ ಅವರ ಈ ನಿವಾಸವನ್ನು ಸ್ಮಾರಕವನ್ನಾಗಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಆಸ್ತಿಯ ಕಾನೂನುಬದ್ಧ ಉತ್ತರಾಧಿಕಾರಿಯನ್ನು ಕಂಡುಹಿಡಿಯಲು ಈ ನೋಟಿಸ್‌ ನೀಡಿದೆ ಎನ್ನಲಾಗುತ್ತಿದೆ. ಭೂಸ್ವಾಧೀನ, ಮತ್ತು ಪುನರ್ವಸತಿ ಕಾಯ್ದೆ 2013ರ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಅಡಿಯಲ್ಲಿ ಚೆನ್ನೈ ಜಿಲ್ಲಾಧಿಕಾರಿ ಹೊರಡಿಸಿದ ಪ್ರಕಟಣೆಯಲ್ಲಿ ಈ ಯೋಜನೆಯು ಕುಟುಂಬಗಳ ಯಾವುದೇ ಸ್ಥಳಾಂತರವನ್ನು ಒಳಗೊಂಡಿಲ್ಲ ಎಂದು ಹೇಳುತ್ತದೆ. ಆದ್ದರಿಂದ, ಯಾವುದೇ ಪ್ರದೇಶವನ್ನು ಪೀಡಿತ ಕುಟುಂಬಗಳ ಪುನರ್ವಸತಿಯ ಪ್ರದೇಶ ಎಂದು ಗುರುತಿಸಲಾಗಿಲ್ಲ ಎಂದು ನೋಟಿಸ್‌ ಹೇಳಿದೆ.

ಚೆನ್ನೈ ನಗರದ ಸ್ವಚ್ಛತಾ ಸೇನಾನಿಗಳಿಗೆ ಪುಷ್ಪವೃಷ್ಟಿ..! ಆರತಿ ಬೆಳಗಿ ಗೌರವಿಸಿದ ನಿವಾಸಿಗಳು..!

1962 ರಲ್ಲಿ ಜಯಲಲಿತಾ ಹಾಗೂ ಅವರ ತಾಯಿ ಖರೀದಿಸಿದ ಚೆನ್ನೈನ ಪೊಯೆಸ್‌ ಗಾರ್ಡನ್‌ನಲ್ಲಿನ ನಿವಾಸದಲ್ಲಿ ಯಾರೂ ವಾಸ ಮಾಡುತ್ತಿಲ್ಲ.

ಬೆಲೆ ಎಷ್ಟೇ ಏರಲಿ.. ಇಲ್ಲಿ ಮಾತ್ರ ಇಡ್ಲಿ 1 ರೂಪಾಯಿ..! ಲಾಕ್‌ಡೌನ್‌ ನಡುವೆಯೂ ಅಜ್ಜಿಯ ಸಾರ್ಥಕ ಸೇವೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ