ಆ್ಯಪ್ನಗರ

ಪತ್ರ ತಲುಪಿಸಲು ಪ್ರತಿನಿತ್ಯ 15 ಕಿ.ಮೀ ಕಾಲ್ನಡಿ ಮಾಡುತ್ತಿದ್ದ ಪೋಸ್ಟ್‌ಮ್ಯಾನ್,‌ 30 ವರ್ಷದ ಸೇವೆ ಬಳಿಕ ನಿವೃತ್ತಿ!

ತಮಿಳುನಾಡಿನ ಡಿ. ಶಿವನ್‌ ಎಂಬುವ ಪೋಸ್ಟ್‌ ಮಾಸ್ಟರ್‌ ತನ್ನ ಆಲ್‌ಮೋಸ್ಟ್‌ ಜೀವನದ ಪ್ರಮುಖ ಘಟ್ಟವನ್ನ ಜನರಿಗೆ ಪತ್ರ ತಲುಪಿಸಲು ಮುಡಿಪಾಗಿಟ್ಟಿದ್ದರು. ಕಳೆದ ಮೂವತ್ತು ವರ್ಷಗಳ ಕಾಲ ಪ್ರತಿನಿತ್ಯ 15 ಕಿ.ಮೀ ದೂರ ಚಲಿಸಿ ಪತ್ರ ತಲುಪಿಸಿ ಇದೀಗ ನಿವೃತ್ತಿಗೊಂಡಿದ್ದಾರೆ. ಇವರ ಬಗ್ಗೆ ಎಲ್ಲೆಡೆ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.

Vijaya Karnataka Web 9 Jul 2020, 9:33 am
ಚೆನ್ನೈ: ಕಾಡು ಪ್ರಾಣಿಗಳು ಅವರನ್ನ ಓಡಿಸಿಕೊಂಡು ಬಂದರು ಹೆದರಲಿಲ್ಲ, ದಟ್ಟ ಕಾನನದ ಮಧ್ಯೆ ನಡೆದುಕೊಂಡು ಹೋಗುವಾಗ ಹೊಳೆ, ಜಲಪಾತವನ್ನ ದಾಟಿಕೊಂಡು ಹೋಗಬೇಕಾಗಿ ಬಂದರು ಕುಗ್ಗಲಿಲ್ಲ, ಈ ಕಷ್ಟದ ಕೆಲಸ ಯಾರಿಗೆ ಬೇಕಾಪ್ಪ ಎಂದು ಒಂದು ಬಾರಿಯು ನೋವು ತೋಡಿಕೊಂಡಿಲ್ಲ. ಇದು ಕಾಯಕವೇ ಕೈಲಾಸ ಎಂದು ನಂಬಿದ ತಮಿಳುನಾಡಿನ ಪೋಸ್ಟ್‌ ಮ್ಯಾನ್‌ ಒಬ್ಬರ ನೈಜ ಕತೆ.
Vijaya Karnataka Web EcYfRQ1UMAAuYic


ಹೌದು ಕಷ್ಟದ ಕೆಲಸ ಎಂದು ಹೇಳಿ ಓಡಿ ಬರುವ ಎಷ್ಟೋ ಜನರ ಮಧ್ಯೆ ತಮಿಳುನಾಡಿನ ಡಿ. ಶಿವನ್‌ ಎಂಬುವ ಪೋಸ್ಟ್‌ ಮಾಸ್ಟರ್‌ ತನ್ನ ಆಲ್‌ಮೋಸ್ಟ್‌ ಜೀವನದ ಪ್ರಮುಖ ಘಟ್ಟವನ್ನ ಜನರಿಗೆ ಪತ್ರ ತಲುಪಿಸಲು ಮುಡಿಪಾಗಿಟ್ಟಿದ್ದರು. ಕಳೆದ ಮೂವತ್ತು ವರ್ಷಗಳ ಕಾಲ ಪ್ರತಿನಿತ್ಯ 15 ಕಿ.ಮೀ ದೂರ ಚಲಿಸಿ ಪತ್ರ ತಲುಪಿಸಿ ಇದೀಗ ನಿವೃತ್ತಿಗೊಂಡಿದ್ದಾರೆ. ಶಿವನ್‌ ಅವರು ಕಾಡುಗಳ ಮಧ್ಯೆ ಇರುವ ರಸ್ತೆಯಲ್ಲಿ ಪ್ರತಿನಿತ್ಯ 15 ಕಿ.ಮೀ ಕಾಲ್ನಡಿಗೆ ಮೂಲಕವೇ ತಲುಪ ಪತ್ರ ನೀಡುತ್ತಿದ್ದರು.


ಈ ಬಗ್ಗೆ ಐಎಎಸ್‌ ಅಧಿಕಾರಿ ಸುಪ್ರಿಯಾ ಸಾಹು ಎಂಬವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ಪೋಸ್ಟ್‌ಮ್ಯಾನ್ ಡಿ. ಶಿವನ್ ಅವರು ಕೂನೂರಿನ ದಡ್ಡವಾದ ಕಾಡು ಪ್ರದೇಶಗಳ ಮೂಲಕ ಪ್ರತಿದಿನ 15 ಕಿ.ಮೀ ನಡೆದು ಹೋಗಿ ಪತ್ರ ತಲುಪಿಸುವ ಕೆಲಸ ಮಾಡುತ್ತಿದ್ದರು. ಅನೇಕ ಬಾರಿ ಅವರನ್ನ ಕಾಡು ಆನೆಗಳು, ಕರಡಿಗಳು, ಕಾಡು ಎಮ್ಮೆಗಳು ಓಡಿಸಿಕೊಂಡು ಬಂದಿರುವ ನಿದರ್ಶನವು ಇದೆ.

3 ದಿನ ಬೆಡ್‌ ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ ಕೊರೊನಾ ರೋಗಿ, ಕೊನೆಗೂ ಸಾವು!

ಅಲ್ಲದೇ ಕಾಡುಗಳ ಮದ್ಯೆ ಹೊಳೆಗಳು, ಜಲಪಾತಗಳನ್ನ ದಾಟಿ ಅವರು ಅತ್ಯಂತ ಸಮರ್ಪಣೆಯೊಂದಿಗೆ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಇದೀಗ ಅವರು 30 ವರ್ಷಗಳ ಕಾಲ ನಂತರ ಕಳೆದ ವಾರ ನಿವೃತ್ತಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. 2016ರಲ್ಲೂ ಶಿವನ್‌ ಅವರ ಬಗ್ಗೆ ಭಾರೀ ಸುದ್ದಿಯಾಗಿತ್ತು. ಕಾಡು-ಮೇಡುಗಳ ಮಧ್ಯೆ ಚಲಿಸಿ ಪತ್ರಗಳನ್ನ ತಲುಪಿಸಿ ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು ಎಂಬ ಸುದ್ದಿ ಬಿತ್ತರವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ