ಆ್ಯಪ್ನಗರ

ರಕ್ತ ಹರಿಸಿತು ಭೂ ವಿವಾದ..! ತುಂಡು ಭೂಮಿಗಾಗಿ ಗುಂಡು ಹಾರಿಸಿ ಕ್ರಿಮಿನಲ್ ಆದ ಉದ್ಯಮಿ..!

ಕೆಳ ನ್ಯಾಯಾಲಯದಲ್ಲಿ ನಟರಾಜನ್ ವಿರುದ್ಧ ತೀರ್ಪು ಬಂದಿತ್ತು. ಹೀಗಾಗಿ, ಹೈಕೋರ್ಟ್‌ಗೆ ಹೋಗಲು ನಟರಾಜನ್ ಸಿದ್ದವಾಗಿದ್ದ. ಇದರ ಬೆನ್ನಲ್ಲೇ, ಇಂಥಾದ್ದೊಂದು ದುರ್ಘಟನೆ ನಡೆದುಹೋಗಿದೆ. ಈ ಮೂಲಕ ಸಿವಿಲ್ ಕೇಸ್‌ ಒಂದು ಕ್ರಿಮಿನಲ್ ಕೇಸ್ ಆಗಿ ಬದಲಾಗಿದೆ.

TIMESOFINDIA.COM 16 Nov 2020, 5:30 pm

ಹೈಲೈಟ್ಸ್‌:

  • ಏಕಾಏಕಿ ಗುಂಡು ಹಾರಿಸಿದ ವ್ಯಕ್ತಿ
  • ಇಬ್ಬರ ಮೇಲೆ ಹಾರಿತು ಗುಂಡು
  • ಇಬ್ಬರು ವ್ಯಕ್ತಿಗಳಿಗೂ ಗಂಭೀರ ಗಾಯ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಪಳನಿ (ತಮಿಳುನಾಡು): ಇಲ್ಲಿನ ದಿಂಡಿಗಲ್ ಜಿಲ್ಲೆಯ ಪಳನಿಯಲ್ಲಿ ಹಾಡಹಗಲೇ ಗುಂಡು ಹಾರಿದೆ. ಸಿಸಿಟಿವಿಯಲ್ಲಿ ದಾಖಲಾದ ಈ ದೃಶ್ಯ, ಭಾರೀ ವೈರಲ್ ಆಗಿದೆ. ಮಧ್ಯ ವಯಸ್ಕ ವ್ಯಕ್ತಿಯೊಬ್ಬ ತನ್ನ ಪರವಾನಗಿ ಸಹಿತ ಪಿಸ್ತೂಲಿನಲ್ಲಿ ನೋಡನೋಡುತ್ತಿದ್ದಂತೆಯೇ ಗುಂಡು ಹಾರಿಸಿದ್ದಾನೆ.
ಇಬ್ಬರು ವ್ಯಕ್ತಿಗಳ ಮೇಲೆ ಗುಂಡು ಹಾರಿಸುವ ಸನ್ನಿವೇಶ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂದಹಾಗೆ ಈ ಕೃತ್ಯ ನಡೆದಿರೋದು ತುಂಡು ಭೂಮಿಗಾಗಿ..!

ಬೆಂಗಳೂರು: ಪತ್ನಿಯನ್ನು ಗುಂಡು ಹಾರಿಸಿ ಕೊಂದು ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ!

ಫೋಟೋದಲ್ಲಿ ಕಾಣುತ್ತಿರುವಂತೆ ಪಿಸ್ತೂಲ್ ಹಿಡಿದಿರುವ ವ್ಯಕ್ತಿಯ ಹೆಸರು, ನಟರಾಜನ್. ಈತ ಸಿನಿಮಾ ಥಿಯೇಟರ್ ಒಂದರ ಮಾಲೀಕ. ಸಮೀಪದಲ್ಲೇ ಇರುವ ಗ್ರಾಮವೊಂದರ ರೈತ ಇಳಂಗೋವನ್ ಎಂಬಾತನೊಂದಿಗೆ ನಟರಾಜನ್‌ ಜಗಳವಾಡಿಕೊಂಡಿದ್ದ. ಇಬ್ಬರ ನಡುವೆ ಭೂ ವಿವಾದವಿತ್ತು. ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು. ಕೆಳ ನ್ಯಾಯಾಲಯದಲ್ಲಿ ನಟರಾಜನ್ ವಿರುದ್ಧ ತೀರ್ಪು ಬಂದಿತ್ತು. ಹೀಗಾಗಿ, ಹೈಕೋರ್ಟ್‌ಗೆ ಹೋಗಲು ನಟರಾಜನ್ ಸಿದ್ದವಾಗಿದ್ದ. ಇದರ ಬೆನ್ನಲ್ಲೇ, ಇಂಥಾದ್ದೊಂದು ದುರ್ಘಟನೆ ನಡೆದುಹೋಗಿದೆ.

ಬುದ್ಧಿವಾದ ಹೇಳಿದ ತಂದೆ-ತಾಯಿಗೆ ಕಬ್ಬಿಣದ ರಾಡ್‌ನಿಂದ ಥಳಿಸಿದ ಮಗ..!

ಕೋರ್ಟ್‌ ವಾದ-ವಿವಾದದಲ್ಲಿ ತನ್ನನ್ನು ಸೋಲಿಸಿದ ಇಳಂಗೋವನ್ ಮೇಲೆ ಸಿಟ್ಟಾಗಿದ್ದ ನಟರಾಜನ್, ರಸ್ತೆ ಬದಿ ನಿಂತಿದ್ದ ಇಳಂಗೋವನ್ ಹಾಗೂ ಮತ್ತೊಬ್ಬ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಬಚಾವ್ ಆಗಿದ್ದು, ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ ಪರವಾನಗಿ ಸಹಿತ ಪಿಸ್ತೂಲನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟಿನಲ್ಲಿ ಸಿವಿಲ್ ಪ್ರಕರಣವೊಂದು ಇದೀಗ ಕ್ರಿಮಿನಲ್ ಪ್ರಕರಣದ ರೂಪ ಪಡೆದಿದೆ.

ತುಮಕೂರಿನಲ್ಲಿ ಪೊಲೀಸರ ಮೇಲೆ ಮಚ್ಚು ಬೀಸಿದ ರೌಡಿ: ಕಾಲಿಗೆ ಗುಂಡು ಹಾರಿಸಿ ಬಂಧನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ