ಆ್ಯಪ್ನಗರ

ಕಾರ್ಮಿಕರ ವಜಾ ಖಂಡಿಸಿ ಪ್ರತಿಭಟನೆ

ಕಾರ್ಮಿಕರನ್ನು ಯಾವುದೇ ಸೂಚನೆ ನೀಡದೆ ಏಕಾಏಕಿ ವಜಾಗೊಳಿಸಿದ ಖಾಸಗಿ ಕಂಪನಿ ಕ್ರಮ ಪ್ರಶ್ನಿಸಿ ಪ್ರವೀಣ್‌ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಧರಬಾಬು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

Vijaya Karnataka 30 Mar 2019, 4:04 pm
ಚಿಕ್ಕಬಳ್ಳಾಪುರ: ಕಾರ್ಮಿಕರನ್ನು ಯಾವುದೇ ಸೂಚನೆ ನೀಡದೆ ಏಕಾಏಕಿ ವಜಾಗೊಳಿಸಿದ ಖಾಸಗಿ ಕಂಪನಿ ಕ್ರಮ ಪ್ರಶ್ನಿಸಿ ಪ್ರವೀಣ್‌ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಧರಬಾಬು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
Vijaya Karnataka Web
ಕಾರ್ಮಿಕರ ವಜಾ ಖಂಡಿಸಿ ಪ್ರತಿಭಟನೆ


ನಗರ ಹೊರವಲಯ ಕೈಗಾರಿಕಾ ಪ್ರದೇಶದ ಖಾಸಗಿ ಕಾರ್ಖಾನೆಯಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಯಾವುದೇ ಕಾರಣ ನೀಡದೆ ದಿಢೀರ್‌ ವಜಾಗೊಳಿಸಿ ಎಂದು ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದರು.

ಈ ವೇಳೆ ಮಾತನಾಡಿದ ಶ್ರೀಧರ್‌ ಬಾಬು, ಕೈಗಾರಿಕೆಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ನೀಡುತ್ತೇವೆಂದು ಹೇಳುವ ಕಂಪನಿಗಳ ಮಾಲೀಕರು, ನೆಲಜಲ, ವಿದ್ಯುತ್‌, ರಸ್ತೆ ಹೀಗೆ ಸ್ಥಳೀಯ ಸಂಪನ್ಮೂಲ ಬಳಸಿಕೊಂಡು, ಕಾರ್ಮಿಕರನ್ನು ಕೆಲಸದ ನೆಪದಲ್ಲಿ ಶೋಷಣೆ ಮಾಡಲು ಪ್ರಾರಂಭಿಸುತ್ತವೆ. ಇದರ ವಿರುದ್ದ ತಿರುಗಿ ಬೀಳುವ ಕಾರ್ಮಿಕರನ್ನು ಯಾವುದೇ ಸೂಚನೆ ನೀಡದೆ ಅಮಾನತು ಮಾಡಿ ಮನೆಗೆ ಕಳಿಸುವ ಪರಿಪಾಠ ಬೆಳಸಿಕೊಂಡಿವೆ. ಹೀಗೆ ದಿಢೀರ್‌ ಕೆಲಸ ಕಳೆದುಕೊಂಡಾಗ ಆ ಕಾರ್ಮಿಕರ ಕುಟುಂಬ ಎದುರಿಸುವ ಕಷ್ಟ ಮಾಲೀಕರಿಗೆ ಎಲ್ಲಿ ಗೊತ್ತಾಗಬೇಕು. ಇಂಥ ಧೋರಣೆಯ ವಿರುದ್ಧ ನಮ್ಮ ಸಂಘಟನೆ ಸದಾ ಹೋರಾಟಕ್ಕೆ ಸಿದ್ದವಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಮುಖಂಡ ಜಯಂತ್‌, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೇನಾರಯಣ, ಜಿಲ್ಲಾ ಸಂಚಾಲಕ ಸುಬ್ರಹ್ಮಣಿ, ಕಾರ್ಮಿಕ ಘಟಕದ ಮೂರ್ತಿ, ತಾಲೂಕು ಅಧ್ಯಕ್ಷ ಚೇತನ್‌, ನಗರ ಕಾರ್ಮಿಕ ಘಟಕದ ಆದಿಲ್‌ ಷರೀಫ್‌, ಸಂಜಯ್‌, ಮನು, ಕಾರ್ತಿಕ್‌, ಮೋಹನ್‌, ಸುಜಯ್‌, ವೆಂಕಟೇಶ್‌ ಭಾಗವಹಿಸಿದ್ದರು.

ಕಾರ್ಮಿಕರನ್ನು ಮರಳಿ ಕೆಲಸಕ್ಕೆ
ಪ್ರತಿಭಟನೆಗೆ ಮಣಿದ ಆಡಳಿತ ಮಂಡಳಿ ಅಮಾನತು ಆದೇಶವನ್ನು ಹಿಂಪಡೆದು ವಜಾಗೊಳಿಸಿದ್ದ ಕಾರ್ಮಿಕರನ್ನು ಮರಳಿ ಕೆಲಸಕ್ಕೆ ತೆಗೆದುಕೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ