ಆ್ಯಪ್ನಗರ

ನೀವು ಮತ ಹಾಕಿ, ಅಕ್ಕಪಕ್ಕದವರಿಗೂ ಹೇಳಿ

18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಿ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳೂವಂತೆ ತಾಲೂಕು ಸ್ವೀಫ್‌ ಸಮಿತಿ ಅಧ್ಯಕ್ಷ ಸಿ.ಶ್ರೀನಿವಾಸ್‌ ತಿಳಿಸಿದರು.

Vijaya Karnataka 11 Apr 2019, 5:00 am
ಬಾಗೇಪಲ್ಲಿ: 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಿ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳೂವಂತೆ ತಾಲೂಕು ಸ್ವೀಫ್‌ ಸಮಿತಿ ಅಧ್ಯಕ್ಷ ಸಿ.ಶ್ರೀನಿವಾಸ್‌ ತಿಳಿಸಿದರು.
Vijaya Karnataka Web
ನೀವು ಮತ ಹಾಕಿ, ಅಕ್ಕಪಕ್ಕದವರಿಗೂ ಹೇಳಿ


ತಾಲೂಕಿನ ಪಾತಪಾಳ್ಯ ಹೋಬಳಿ ದೇವರಾಜಪಲ್ಲಿ ಗ್ರಾಮದಲ್ಲಿ ಸ್ವೀಪ್‌ ಸಮಿತಿ ಏರ್ಪಡಿಸಿದ್ದ ಮತದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮತದಾನ ನಮ್ಮೆಲ್ಲರ ಹಕ್ಕು, ಒಂದು ವೇಳೆ ಮತದಾನ ಮಾಡದಿದ್ದರೆ ನಮ್ಮ ಹಕ್ಕು ಕಳೆದುಕೊಂಡಂತೆ. ನೀವು ಮತ ಹಾಕಿ, ನಿಮ್ಮ ಅಕ್ಕಪಕ್ಕದವರನ್ನು ಮತಹಾಕುವಂತೆ ಪ್ರೆರೇಪಣೆ ಮಾಡಿ ಎಂದರು.

ಈ ಸಂದರ್ಭದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ 35 ಮಹಿಳೆಯರು ಭಾಗವಹಿಸಿದ್ದರು. ಅವರೆಲ್ಲರಿಗೂ ಮತದಾನ ಪ್ರತಿಜ್ಞಾ ವಿಧಿ ಭೋಧಿಸಲಾಯಿತು. ಸ್ಪರ್ಧೆಯಲ್ಲಿ ಗೆದ್ದ ದೇವರಾಜಪಲ್ಲಿ ಉಮಾಗೆ ಪ್ರಥಮ ಬಹುಮಾನ 2 ಸಾವಿರ, ದ್ವಿತೀಯ ಬಹುಮಾನ ಸಂಧ್ಯಾ 1500, ತೃತೀಯ ಬಹುಮಾನ ಮೌನಿಕ 1000 ಹಾಗೂ ವಾಣಿಶ್ರೀ ಮತ್ತು ಸ್ವಪ್ನ ಅವರಿಗೆ ತಲಾ 500 ರೂ.ಗಳಂತೆ ಸಮಾಧನಕರ ಬಹುಮಾನ ನೀಡಲಾಯಿತು.

ಪಿಡಿಒಗಳಾದ ನಾರಾಯಣ, ಭಾಗ್ಯಲಕ್ಷ್ಮೀ, ನೀಲೂಫರ್‌, ಕಾರ‍್ಯದರ್ಶಿ ರಂಗನಾಥ್‌ಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮೇಲ್ವಿಚಾರಕಿ ಬಸಮ್ಮ. ಈರಮ್ಮ, ಅಂಗನವಾಡಿ ಕಾರ‍್ಯಕರ್ತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ