ಆ್ಯಪ್ನಗರ

ಬೋರ್‌ವೆಲ್‌ ಲಾರಿ ತಡೆದು ಪ್ರತಿಭಟನೆ

ಕೊಳವೆಬಾವಿ ಕೊರೆದು ನೀರು ಸಿಗದೆ ವಾಪಸ್‌ ಆಗುತ್ತಿದ್ದ ಬೋರ್‌ವೆಲ್‌ ಲಾರಿ ತಡೆದ ಗ್ರಾಮಸ್ಥರು ಮತ್ತೊಂದು ಕೊಳವೆಬಾವಿ ಕೊರೆಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿ ಪ್ರತಿಭಟಿಸಿದ ಘಟನೆ ಮಂಡ್ಯಂಪಲ್ಲಿಯಲ್ಲಿ ಗುರುವಾರ ನಡೆದಿದೆ.

Vijaya Karnataka 3 May 2019, 3:20 pm
ಚೇಳೂರು: ಕೊಳವೆಬಾವಿ ಕೊರೆದು ನೀರು ಸಿಗದೆ ವಾಪಸ್‌ ಆಗುತ್ತಿದ್ದ ಬೋರ್‌ವೆಲ್‌ ಲಾರಿ ತಡೆದ ಗ್ರಾಮಸ್ಥರು ಮತ್ತೊಂದು ಕೊಳವೆಬಾವಿ ಕೊರೆಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿ ಪ್ರತಿಭಟಿಸಿದ ಘಟನೆ ಮಂಡ್ಯಂಪಲ್ಲಿಯಲ್ಲಿ ಗುರುವಾರ ನಡೆದಿದೆ.
Vijaya Karnataka Web
ಬೋರ್‌ವೆಲ್‌ ಲಾರಿ ತಡೆದು ಪ್ರತಿಭಟನೆ


ಪಾಳ್ಯಕೆರೆ ಗ್ರಾಪಂನ ಮಂಡ್ಯಂಪಲ್ಲಿಯಲ್ಲಿ ತಿಂಗಳಿಂದ ನೀರಿನ ಸಮಸ್ಯೆಯಿದ್ದು, ದಿನೇದಿನೇ ಹೆಚ್ಚುತ್ತಿದ್ದರೂ ಪಿಡಿಒ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರು, ರೈತಾಪಿ ವರ್ಗ ಬೋರ್‌ವೇಲ್‌ಗಳು ಸಹಾ ವಿಫಲವಾಗುತ್ತಿರುವುದರಿಂದ ಅಲ್ಲಿಯೂ ನೀರು ಸಿಗುತ್ತಿಲ್ಲ ಎಂದು ದೂರಿದರು.

ನೀರಿನ ಸಮಸ್ಯೆ ನೀಗಿಸಲು ಸಲುವಾಗಿ ಗುರುವಾರ ಜಿಲ್ಲಾಡಳಿತ ಕೊಳವೆಬಾವಿ ಕೊರೆಸಲು ಮುಂದಾಗಿದ್ದು, ಇದರಲ್ಲೂ ನೀರು ಸಿಗದೆ ಲಾರಿ ವಾಪಸ್ಸಾಗುತ್ತಿದ್ದ ವೇಳೆ ಗ್ರಾಮಸ್ಥರು ಮತ್ತೊಂದು ಕೊಳವೆಬಾವಿ ಕೊರೆಸುವಂತೆ ಮಾಡಿದ ಮನವಿಗೆ ಸ್ಪಂದಿಸದ ಅಧಿಕಾರಿಗಳಿಂದ ಸಿಟ್ಟಾದ ಗ್ರಾಮಸ್ಥರು, ಲಾರಿ ತಡೆದು ಪ್ರತಿಭಟಿಸಿದ್ದಾರೆ.

ಸ್ಥಳಕ್ಕೆ ಪಿಡಿಓ ಚಂದ್ರಶೇಖರ್‌, ಮೂರು ದಿನಗಳ ಒಳಗಾಗಿ ಬೋರವೇಲ್‌ ಕೊರೆಸುವ ಭರವಸೆ ನೀಡಿದ ನಂತರ ಗ್ರಾಮಸ್ಥರು, ನಿರ್ಲಕ್ಷಿಸಿದರೆ ಜಿಲ್ಲಾಧಿಕಾರಿ ಹಾಗೂ ಸಿಇಒ ಕಚೇರಿಎದುರು ಪ್ರತಿಭಟನೆಯ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದಿದ್ದಾರೆ.

ಗ್ರಾಮದ ಮುಖಂಡ ಎಂ.ಸಿ.ಶ್ರೀನಿವಾಸ್‌, ಮಲ್ಲಿಕಾರ್ಜುನ, ಕೆಂಡೆ ಶ್ರೀನಿವಾಸ್‌, ಮುನಿಯಮ್ಮ, ಸಾಲಮ್ಮ, ವೆಂಕಟಮ್ಮ, ಮಂಜುಳ, ನರಸಮ್ಮ ಪ್ರತಿಭಟನೆ ನೇತೃತ್ವ ವಹಿಸಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ